ಆ್ಯಪ್ನಗರ

ಕಾರು ಸಹಿತ ಶ್ರೀಗಂಧ ವಶ

ಅಕ್ರಮವಾಗಿ ಸಾಗಿಸುತ್ತಿದ್ದ 26 ಕೆ.ಜಿ. ಶ್ರೀಗಂಧವನ್ನು ತರೀಕೆರೆ ವಲಯ ಅರಣ್ಯಾಧಿಕಾರಿ ಚರಣ್‌ಕುಮಾರ್‌ ನೇತೃತ್ವದಲ್ಲಿ ವಶಪಡಿಸಿಕೊಳ್ಳಲಾಗಿದೆ.

Vijaya Karnataka 7 Dec 2018, 5:00 am
ಲಿಂಗದಹಳ್ಳಿ : ಅಕ್ರಮವಾಗಿ ಸಾಗಿಸುತ್ತಿದ್ದ 26 ಕೆ.ಜಿ. ಶ್ರೀಗಂಧವನ್ನು ತರೀಕೆರೆ ವಲಯ ಅರಣ್ಯಾಧಿಕಾರಿ ಚರಣ್‌ಕುಮಾರ್‌ ನೇತೃತ್ವದಲ್ಲಿ ವಶಪಡಿಸಿಕೊಳ್ಳಲಾಗಿದೆ.
Vijaya Karnataka Web sandalwood seized with car
ಕಾರು ಸಹಿತ ಶ್ರೀಗಂಧ ವಶ


ಸ್ವಿಪ್ಟ್‌ ಡಿಸೈರ್‌ ಕಾರಿನಲ್ಲಿ ಲಿಂಗದಹಳ್ಳಿ ಸಮೀಪ ಮಂಗಳವಾರ ರಾತ್ರಿ ಶ್ರೀಗಂದ ಸಾಗಿಸುತ್ತಿದ್ದ ಸುಳಿವು ಅರಿತ ಅರಣ್ಯ ಅಧಿಕಾರಿಗಳು ಕಾರಿನ ಬೆನ್ನತ್ತಿದ್ದಾರೆ. ಇದನ್ನರಿತ ಆರೋಪಿಗಳಾದ ಪ್ರಕಾಶ ಮತ್ತು ವೆಂಕಟೇಶ ಕಾರಿನಿಂದ ಇಳಿದು ಪರಾರಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶ್ರೀಗಂಧದೊಂದಿಗೆ ಕಾರನ್ನು ವಶಕ್ಕೆ ಪಡೆದಿರುವ ಅರಣ್ಯಾಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಸ್ಕ್ವಾಡ್‌ ಆರ್‌ಎಫ್‌ಒ ಪರಶುರಾಮ್‌, ಸಿಬ್ಬಂದಿ ಮಂಜುನಾಥ್‌, ಇಂದು, ಪಾಷಾ, ಪ್ರಸನ್ನ, ನವೀನ ಮತ್ತಿತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ