ಆ್ಯಪ್ನಗರ

ಯೋಧನ ಕುಟುಂಬಕ್ಕೆ ದಿನಗೂಲಿ ಅರ್ಪಿಸಿದ ಸವಿತಾ ಶ್ರಮಿಕರು

ಸವಿತಾ ಸಮಾಜದ ಶ್ರಮಿಕರು ವೀರಯೋಧ ಗುರು ಅವರ ಸ್ಮರಣಾರ್ಥ ಶನಿವಾರ ವಿನೂತನ ಕಾರ್ಯಕ್ರಮ ಆಯೋಜಿಸಿ ಯೋಧರಿಗೆ ನಮನ ಅರ್ಪಿಸಿದರು.

Vijaya Karnataka 17 Feb 2019, 5:00 am
ಬೀರೂರು : ಸವಿತಾ ಸಮಾಜದ ಶ್ರಮಿಕರು ವೀರಯೋಧ ಗುರು ಅವರ ಸ್ಮರಣಾರ್ಥ ಶನಿವಾರ ವಿನೂತನ ಕಾರ್ಯಕ್ರಮ ಆಯೋಜಿಸಿ ಯೋಧರಿಗೆ ನಮನ ಅರ್ಪಿಸಿದರು.
Vijaya Karnataka Web CKM-16BRR1


ಪಟ್ಟಣದಲ್ಲಿರುವ 35ಕ್ಕೂ ಹೆಚ್ಚಿನ ಅಂಗಡಿಗಳವರು ದಿನಪೂರ್ತಿಯ ಒಂದು ದಿನದ ತಮ್ಮ ಕೇಶಶೃಂಗಾರದ ಹಣವನ್ನು ವೀರಯೋಧನ ಕುಟುಂಬಕ್ಕೆ ಮೀಸಲಾಗಿಟ್ಟು ಕರ್ತವ್ಯ ನಿರ್ವಹಿಸಿ ಶ್ರದ್ಧಾಂಜಲಿ ಸಭೆ ನಡೆಸುವ ಮೂಲಕ ನಮನ ಸಲ್ಲಿಸಿದರು.

ಸಂಘದ ಅಧ್ಯಕ್ಷ ಜಿ.ದೇವರಾಜ್‌ ಶ್ರದ್ಧಾಂಜಲಿ ಅರ್ಪಿಸಿ ಮಾತನಾಡಿ, ದೇಶಸೇವೆಯ ಸಂದರ್ಭ ವೀರಮರಣವನ್ನು ಹೊಂದಿದ ಯೋಧರ ದೇಶಸಂರಕ್ಷ ಣೆಯ ಮಹೋನ್ನತ ಜವಾಬ್ದಾರಿ ನಮ್ಮಲ್ಲಿ ದೇಶ ಸಂರಕ್ಷ ಣೆಯ ಕೆಚ್ಚನ್ನು ಮತ್ತಷ್ಟು ಹೆಚ್ಚಿಸುವಲ್ಲಿ ಪ್ರೇರಕವಾಗಿದೆ ಎಂದರು.

ಗೌರವಾಧ್ಯಕ್ಷ ಟಿ.ಎನ್‌. ಸುಬ್ರಮಣೆ ಮಾತನಾಡಿ, ದೇಶಕ್ಕಾಗಿ ವೀರಮರಣ ಹೊಂದಿದ ಎಲ್ಲರ ಕುಟುಂಬಕ್ಕೂ ದು:ಖವನ್ನು ಭರಿಸುವ ಶಕ್ತಿಯನ್ನು ಕೊಡಲಿ ಎಂದು ಪ್ರಾರ್ಥಿಸಿದರು.

ಹಿರಿಯ ಟಿ.ಎ.ಗಣೇಶ್‌ ಮಾತನಾಡಿದರು. ಪಟ್ಟಣದ ಮುಖ್ಯರಸ್ತೆಯಲ್ಲಿ ತಮ್ಮ ಸಂಗ್ರಹದ ಡಬ್ಬಿಯೊಂದಿಗೆ ಮೆರವಣೆಗೆ ನಡೆಸಿ ಸಾರ್ವಜನಿಕರು ನೀಡಿದ ಹಣ ಹೊಂದಿಸಿ ಯೋಧನ ಕುಟುಂಬಕ್ಕೆ ತಲುಪಿಸುತ್ತಿರುವುದಾಗಿ ಮಂಜುನಾಥ್‌ ಹೇಳಿದರು.ಸಮಾಜದ ಕೃಷ್ಣಮೂರ್ತಿ, ನಾರಾಯಣಪ್ಪ, ಬಾಲಚಂದ್ರ, ವೇಲುಮುರುಘನ್‌, ಓಂಕಾರ್‌, ಗಂಗಪ್ಪ, ಚಂದ್ರು, ಕಾರ್ತಿಕ್‌, ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ