ಆ್ಯಪ್ನಗರ

ಇಂಧನ, ಅಗತ್ಯ ವಸ್ತುಗಳಿಗೂ ಪರದಾಟ

ನಿರಂತರ ಮಳೆ, ಗುಡ್ಡಕುಸಿತದಿಂದ ಪ್ರಮುಖ ರಸ್ತೆಗಳ ಸಂಪರ್ಕ ಕಡಿತಗೊಂಡಿದ್ದು, ಇಂಧನ ಮತ್ತು ಅಗತ್ಯ ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ.

Vijaya Karnataka 10 Aug 2019, 9:19 pm
ಚಿಕ್ಕಮಗಳೂರು: ನಿರಂತರ ಮಳೆ, ಗುಡ್ಡಕುಸಿತದಿಂದ ಪ್ರಮುಖ ರಸ್ತೆಗಳ ಸಂಪರ್ಕ ಕಡಿತಗೊಂಡಿದ್ದು, ಇಂಧನ ಮತ್ತು ಅಗತ್ಯ ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ದಕ್ಷಿಣಕನ್ನಡ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟಿ ಆ.14ರವರೆಗೆ ಬಂದ್‌ ಆಗಿದೆ. ಎಸ್‌.ಕೆ.ಬಾರ್ಡರ್‌ ರಸ್ತೆಯಲ್ಲೂ ನೀರು ನಿಂತಿದ್ದು, ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ಇದರಿಂದಾಗಿ ಮಂಗಳೂರು ಕಡೆಯಿಂದ ಬರುವ ಇಂಧನ ಟ್ಯಾಂಕರ್‌ಗಳ ಸಂಚಾರಕ್ಕೆ ಅಡ್ಡಿಯಾಗಿದೆ. ದಕ್ಷಿಣಕನ್ನಡ ಜಿಲ್ಲೆಗೆ ತರಕಾರಿ, ಹೂವು ಸೇರಿದಂತೆ ಅಗತ್ಯ ವಸ್ತುಗಳನ್ನು ಹೊತ್ತೊಯ್ಯುವ ಲಾರಿಗಳ ಸಂಚಾರಕ್ಕೂ ಅಡಚಣೆಯಾಗಿದೆ. ಈಗಾಗಲೇ ಬಹುತೇಕ ಪ್ರಮುಖ ರಸ್ತೆಗಳು ಸಂಪರ್ಕ ಕಳೆದುಕೊಂಡಿವೆ. ಮಳೆ ಇದೇ ರೀತಿ ಮುಂದುವರಿದರೆ ಸಣ್ಣಪುಟ್ಟ ರಸ್ತೆಗಳ ಸಂಪರ್ಕವೂ ಕಡಿತಗೊಳ್ಳಲಿದ್ದು, ಪಡಿತರ ಪೂರೈಕೆಗೆ ಸಮಸ್ಯೆ ಎದುರಾಗಲಿದೆ. ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್‌ ಇಲ್ಲದೆ ವಾರ ಕಳೆದಿದ್ದು, ಸೀಮೆಎಣ್ಣೆಯೂ ಇಲ್ಲದೆ ಬೆಳಕಿಗಾಗಿ ಜನ ಪರದಾಡುತ್ತಿದ್ದಾರೆ.
Vijaya Karnataka Web scarcity for fuel and essentials
ಇಂಧನ, ಅಗತ್ಯ ವಸ್ತುಗಳಿಗೂ ಪರದಾಟ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ