ಆ್ಯಪ್ನಗರ

ಗ್ರಾಮ ಸಭೆಯಲ್ಲಿಶಾಲಾ ಮಕ್ಕಳ ಕೂಗು

ನಮ್ಮ ಶಾಲೆಗೆ ಕಾಂಪೌಂಡ್‌ ನಿರ್ಮಿಸಿಕೊಡಿ,ರಸ್ತೆ ಸರಿ ಮಾಡಿ,ನೀರಿನ ವ್ಯವಸ್ಥೆಗಳನ್ನು ಮಾಡಿ ಕೊಡಿ ಎಂದು ಶಾಲಾ ವಿದ್ಯಾರ್ಥಿಗಳು ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಬಳಿ ಕೇಳಿಕೊಂಡರು.

Vijaya Karnataka 29 Nov 2019, 5:00 am
ಕಳಸ: ನಮ್ಮ ಶಾಲೆಗೆ ಕಾಂಪೌಂಡ್‌ ನಿರ್ಮಿಸಿಕೊಡಿ,ರಸ್ತೆ ಸರಿ ಮಾಡಿ,ನೀರಿನ ವ್ಯವಸ್ಥೆಗಳನ್ನು ಮಾಡಿ ಕೊಡಿ ಎಂದು ಶಾಲಾ ವಿದ್ಯಾರ್ಥಿಗಳು ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಬಳಿ ಕೇಳಿಕೊಂಡರು.
Vijaya Karnataka Web school children voice at meeting
ಗ್ರಾಮ ಸಭೆಯಲ್ಲಿಶಾಲಾ ಮಕ್ಕಳ ಕೂಗು


ಕಳಸ ಪದವಿ ಪೂರ್ವ ಕಾಲೇಜು ಪ್ರೌಢ ಶಾಲಾ ವಿಭಾಗದ ಸಭಾಂಗಣದಲ್ಲಿಕಳಸ ಗ್ರಾಮ ಪಂಚಾಯಿತಿ ವತಿಯಿಂದ ಗುರುವಾರ ನಡೆದ ಮಕ್ಕಳ ಮತ್ತು ಮಹಿಳಾ ವಿಶೇಷ ಗ್ರಾಮ ಸಭೆಯಲ್ಲಿತಮ್ಮ ಶಾಲೆ ಮತ್ತು ತಮ್ಮ ಊರಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದರು.

ಕಳೆದ ವರ್ಷ ನಡೆದ ಮಕ್ಕಳ ಗ್ರಾಮ ಸಭೆಯಲ್ಲಿಗಂಗನಗುಡಿಗೆ ಶಾಲೆಯ ಹಿಂಬದಿಯ ಚರಂಡಿಯಲ್ಲಿಅಲ್ಲಿಯ ನಿವಾಸಿಗಳ ಮನೆಗಳ ಕೊಳಚೆ ನೀರು ಹರಿಯುತ್ತದೆ. ಇದರ ವಾಸನೆಯಲ್ಲಿತರಗತಿಯಲ್ಲಿಕುಳಿತುಕೊಳ್ಳಲು ಸಾದ್ಯವಿಲ್ಲಎಂದು ತಿಳಿಸಿದ್ದೆವು. ಆದರೆ ಅದನ್ನು ಇನ್ನೂ ಸರಿಪಡಿಸಿಲ್ಲ.ಮತ್ತು ಶಾಲೆಗೆ ನೀರಿನ ಸಮಸ್ಯೆ ಇದೆ ಕೊಳವೆ ಬಾವಿಯನ್ನು ತೆಗೆಸಿಕೊಡಿ,ನಮ್ಮ ಶಾಲೆ ರಸ್ತೆಯ ಸಮೀಪವೇ ಇದ್ದೂ ಇಲ್ಲಿವಾಹನಗಳು ಅತ್ಯಂತ ವೇಗದಿಂದ ಬರುತ್ತಿವೆ ಇದರಿಂದ ಅಲ್ಲಿಓಡಾಡಲು ಸಾಧ್ಯವಿಲ್ಲ. ಅಲ್ಲಿಉಬ್ಬುಗಳುನ್ನು ನಿರ್ಮಿಸಿಕೊಡಿ ಎಂದು ಗಂಗನಗುಡಿಗೆ ಶಾಲಾ ವಿದ್ಯಾರ್ಥಿಗಳು ಕೇಳಿಕೊಂಡರು.ಶಾಲೆಗೆ ನೀರಿನ ಸಮಸ್ಯೆ,ಶಾಲೆಯ ಕಿಟಕಿ ಶಿಥಿಲಗೊಂಡಿದೆ.ಶಾಲೆಯಲ್ಲಿಕಸವನ್ನು ತುಂಬಿಸಿ ಇಡುತ್ತೇವೆ. ಆದರೆ ಕಸ ಸಾಗಿಸುವ ವಾಹನ ಬರುವುದಿಲ್ಲ.ನಮ್ಮ ಭಾಗದ ರಸ್ತೆಗಳು ಸರಿ ಇಲ್ಲಸರಿಪಡಿಸಿಕೊಡಿ ಎಂದು ತೋಡ್ಲುಶಾಲಾ ವಿದ್ಯಾರ್ಥಿಗಳು ಕೇಳಿಕೊಂಡರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ರತೀರವೀಂದ್ರ,ಪ್ರಾಚಾರ್ಯ ಅರುಣ್‌ ಕುಮಾರ್‌,ಅಭಿವೃದ್ಧಿ ಅಧಿಕಾರಿ ಕವೀಶ್‌,ಪಿಎಸ್‌ಐ ಮಂಜಯ್ಯ,ವಿದ್ಯಾರ್ಥಿ ನಾಯಕ ಪ್ರತಾಪ್‌,ನಾಯಕಿ ನಿಶಿತಾ ಇದ್ದರು.

===================
ಮಕ್ಕಳ ಬೇಡಿಕೆಗಳು

* ಕಳಕ್ಕೋಡು ಮಾರ್ಗದಲ್ಲಿಬಸ್ಸು ಬಿಡಿ

* ಕಲಶೇಶ್ವರ ನಗರ ಶಾಲೆಗೆ ಆಟದ ಮೈದಾನ ನಿರ್ಮಿಸಿ

* ಗಣಪತಿ ಕಟ್ಟೆಗೆ ಕಸ ವಿಲೇ ವಾಹನ ಬರಲಿ

* ಕಳಸ ಸರಕಾರಿ ಆಸ್ಪತ್ರೆಗೆ ವೈದ್ಯರನ್ನು ನೇಮಿಸಿ

==================
ಗಂಗನಗುಡಿಗೆ ಶಾಲಾ ಕಂಪೌಂಡ್‌ ನಿರ್ಮಿಸಲು ಉದ್ಯೋಗ ಖಾತರಿ ಯೋಜನೆಯಲ್ಲಿಕ್ರೀಯಾ ಯೋಜನೆ ಮಾಡಲಾಗಿದೆ.ಪ್ಲಾಸ್ಟಿಕ್‌ ಮಾರಾಟದ ಬಗ್ಗೆ ಕೂಡಲೇ ಕ್ರಮ ತೆಗೆದುಕೊಳ್ಳುವ ವ್ಯವಸ್ಥೆ ಮಾಡಲಾಗುತ್ತದೆ. ಮತ್ತು ವಿದ್ಯಾರ್ಥಿಗಳು ತಿಳಿಸಿ ಸಮಸ್ಯೆಗಳ ಬಗ್ಗೆ ಗ್ರಾಮ ಪಂಚಾಯಿತಿ ಅಡಿಯಲ್ಲಿಮಾಡಬೇಕಾದ ಕೆಲಸಗಳು ಕೂಡಲೇ ಮಾಡುತ್ತೇವೆ.ಮತ್ತು ಬೇರೆ ಬೇರೆ ಇಲಾಖೆಗೆ ಸಂಬಂಧಿಸಿದವರಿಗೆ ಮಾಹಿತಿ ನೀಡಲಾಗವುದು.
-ಸಂತೋಷ್‌,ಪಂಚಾಯಿತಿ ಅಧಿಕಾರಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ