ಆ್ಯಪ್ನಗರ

ಆರೋಗ್ಯ ಕ್ಷೇತ್ರದಲ್ಲಿ ಸೇವಾ ಮನೋಭಾವ ಮುಖ್ಯ

ಜೀವ ರಕ್ಷ ಕರಾಗಿ ಕಾರ್ಯ ನಿರ್ವಹಿಸುವ ಅರೆ ವೈದ್ಯಕೀಯ ತಂತ್ರಜ್ಞರ ಕಾರ್ಯ ವೈದ್ಯರ ಸೇವೆಗಿಂತಲು ಮಿಗಿಲು ಎಂದು ಬೆಂಗಳೂರು ಪ್ಯಾರ ಮೆಡಿಕಲ್‌ ಕಾಲೇಜಿನ ವಿಶೇಷ ಅಧಿಕಾರಿ ಡಾ.ರಾಮಕೃಷ್ಣ ರೆಡ್ಡಿ ಹೇಳಿದರು.

Vijaya Karnataka 14 Jul 2019, 5:00 am
ಚಿಕ್ಕಮಗಳೂರು : ಜೀವ ರಕ್ಷ ಕರಾಗಿ ಕಾರ್ಯ ನಿರ್ವಹಿಸುವ ಅರೆ ವೈದ್ಯಕೀಯ ತಂತ್ರಜ್ಞರ ಕಾರ್ಯ ವೈದ್ಯರ ಸೇವೆಗಿಂತಲು ಮಿಗಿಲು ಎಂದು ಬೆಂಗಳೂರು ಪ್ಯಾರ ಮೆಡಿಕಲ್‌ ಕಾಲೇಜಿನ ವಿಶೇಷ ಅಧಿಕಾರಿ ಡಾ.ರಾಮಕೃಷ್ಣ ರೆಡ್ಡಿ ಹೇಳಿದರು.
Vijaya Karnataka Web CKM-13SHIVU-P1


ನಗರದ ಕುವೆಂಪು ಕಲಾಮಂದಿರದಲ್ಲಿ ವಿದ್ಯಾರ್ಥಿ ಗ್ರೂಪ್‌ ಆಫ್‌ ಇನ್ಸ್ಟಿಟ್ಯೂಶನ್‌ ಕಾಲೇಜಿನಿಂದ ಶನಿವಾರ ಆಯೋಜಿಸಿದ್ದ ವಿದ್ಯಾರ್ಥಿ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ಯಾರಾ ಮೆಡಿಕಲ್‌ ಕೊರ್ಸ್‌ ಮುಗಿಸಿ ಆರೋಗ್ಯ ಕ್ಷೇತ್ರಕ್ಕೆ ಬರುವವರು ಉತ್ತಮ ತರಬೇತಿ ಹೊಂದಬೇಕು. ಸರಕಾರಿ ಸೇವೆ ಅಥವಾ ಸ್ವ ಉದ್ಯೋಗವನ್ನೇ ಆರಂಭಿಸಿ ಉತ್ತಮ ಹೆಸರು ಗಳಿಸಬಹುದು ಎಂದರು.

ಮಂಡಳಿಯಲ್ಲಿನ ಹಲವು ನ್ಯೂನತೆ ಸರಿಪಡಿಸುವ ಜತೆಗೆ ವಿದ್ಯಾರ್ಥಿಗಳಿಗೆ ದಾಖಲೆಗಳನ್ನು ಶೀಘ್ರವಾಗಿ ನೀಡಲು ಅನುಕೂಲ ಮಾಡಿಕೊಡಲಾಗುವುದು. ಉತ್ತಮ ತರಬೇತಿ ಹೊಂದಿ ಶಿಕ್ಷ ಣ ಸಂಸ್ಥೆಗೆ ಮತ್ತು ಪೋಷಕರಿಗೆ ಕೀರ್ತಿ ತರಬೇಕು. ಆರೋಗ್ಯ ಕ್ಷೇತ್ರದಲ್ಲಿ ಸೇವಾ ಮನೋಭಾವ ಬಹಳ ಮುಖ್ಯ. ಅತ್ಯಂತ ಧೈರ್ಯ, ಶ್ರದ್ಧೆ ಮತ್ತು ಅರ್ಪಣಾ ಮನೋಭಾವದಿಂದ ಸೇವೆ ಸಲ್ಲಿಸಬೇಕು. ಸಾರ್ವಜನಿಕ ಕ್ಷೇತ್ರದಲ್ಲಿ ತಾಳ್ಮೆಯಿಂದ ಕಾರ್ಯನಿರ್ವಹಣೆ ಮಾಡಿದರೆ ಯಶಸ್ಸು ಪಡೆಯಬಹುದು ಎಂದು ಹೇಳಿದರು.

ಅರೆ ವೈದ್ಯಕೀಯ ಮಂಡಳಿಯ ಪ್ರೊ.ಯೋಗರಾಜ ಗೌಡ ಮಾತನಾಡಿ, ಅರೆ ವೈದ್ಯಕೀಯ ಶಿಕ್ಷ ಣ ತಂತ್ರಜ್ಞರು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಸಾರ್ವಜನಿಕರೊಂದಿಗೆ ಪ್ರೀತಿ, ವಿಶ್ವಾಸದಿಂದ ವರ್ತಿಸಬೇಕು ಎಂದರು.

ವಿದ್ಯಾರ್ಥಿ ಪ್ಯಾರ ಮೆಡಿಕಲ್‌ ಕಾಲೇಜಿನ ಸಂಸ್ಥಾಪಕ ಹೊನ್ನಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳಿಗೆ ಅನುಕೂಲ ಆಗಲೆಂದು 2003ರಲ್ಲಿ ಪ್ಯಾರ ಮೆಡಿಕಲ್‌ ಕಾಲೇಜನ್ನು ಬೆಂಗಳೂರು, ಕೊಡಗು ಮತ್ತು ಚಿಕ್ಕಮಗಳೂರಿನಲ್ಲಿ ಪ್ರಾರಂಭಿಸಿ ಮೊದಲ ವರ್ಷದಲ್ಲಿ ಶೇ.85 ಫಲಿತಾಂಶ ಬಂದಿದೆ. ತರಬೇತಿ ಪಡೆದ 48 ವಿದ್ಯಾರ್ಥಿಗಳು ಸಹ ಸರಕಾರಿ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.

ಬೆಂಗಳೂರು, ಹಾಸನ, ಮಾಗಡಿ, ಮಳವಳ್ಳಿ, ಶಿವಮೊಗ್ಗ, ಕಾಲೇಜಿನ ಮುಖ್ಯಸ್ಥರು, ಕಾರ್ಯದರ್ಶಿ ಇಂದುಕುಮಾರ್‌, ಆಡಳಿತಾಧಿಕಾರಿ ಮಂಜೇಗೌಡ ಹಾಜರಿದ್ದರು. ಶೃತಿ ನಿರೂಪಿಸಿ, ಕಾವ್ಯ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ