ಆ್ಯಪ್ನಗರ

ಕರ್ತವ್ಯ ಬದಿಗಿಟ್ಟು, ಖುಷ್‌ಖುಷಿಯಾಗಿರಿ

ಪ್ರತಿ ದಿನ ಪಾಠ, ಪ್ರವಚನ, ಓದು, ಹೋಂವರ್ಕ್‌ ಇದ್ದಿದ್ದೇ, ಒಂದು ದಿನವಾದರೂ ಉಲ್ಲಾಸದಿಂದ ಖುಷ್‌ಖುಷಿಯಾಗಿರಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟರಾಮ್‌ ಶಿಕ್ಷಕರನ್ನು ಹುರುದುಂಬಿಸಿದರು.

Vijaya Karnataka 4 Sep 2018, 5:00 am
ಚಿಕ್ಕಮಗಳೂರು : ಪ್ರತಿ ದಿನ ಪಾಠ, ಪ್ರವಚನ, ಓದು, ಹೋಂವರ್ಕ್‌ ಇದ್ದಿದ್ದೇ, ಒಂದು ದಿನವಾದರೂ ಉಲ್ಲಾಸದಿಂದ ಖುಷ್‌ಖುಷಿಯಾಗಿರಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟರಾಮ್‌ ಶಿಕ್ಷಕರನ್ನು ಹುರುದುಂಬಿಸಿದರು.
Vijaya Karnataka Web CKM-3rudrap3


ನಗರದ ಸುಭಾಷ್‌ಚಂದ್ರ ಜಿಲ್ಲಾ ಆಟದ ಮೈದಾನದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ತಾಲೂಕಿನ ಶಿಕ್ಷಕರಿಗೆ ಏರ್ಪಡಿಸಿದ್ದ ಕ್ರೀಡಾಕೂಟಕ್ಕೆ ವಾಲಿಬಾಲ್‌ ಎಸೆಯುವ ಮೂಲಕ ಮೂಲಕ ಸೋಮವಾರ ಚಾಲನೆ ನೀಡಿ ಮಾತನಾಡಿದರು.

ಇಂದು ನಡೆಯುವ ಕ್ರೀಡಾಕೂಟದಲ್ಲಿ ಸಂಜೆವರೆಗೂ ಎಲ್ಲ ಶಿಕ್ಷಕರು ಹರ್ಷ, ಉಲ್ಲಾಸದಿಂದಿರಿ. ಗೋಜು ಗೊಂದಲಗಳಿಗೆ ಅವಕಾಶ ನೀಡಬಾರದು. ತಾಲೂಕಿನಲ್ಲಿ ಒಟ್ಟು 1617 ಶಿಕ್ಷಕರಿದ್ದು ಇಂದು ಶೇ.25ರಷ್ಟು ಶಿಕ್ಷಕರು ಮಾತ್ರ ಭಾಗವಹಿಸಿದ್ದಾರೆ. ಶಿಕ್ಷಕರ ದಿನಾಚರಣೆಯಂದು ಎಲ್ಲ 2 ಸಾವಿರ ಚೇರ್‌ಗಳು ಭರ್ತಿಯಾಗಬೇಕು. ವಂದನೆಗೂ ಮುನ್ನ ಊಟದ ಹಾಲಿಗೆ ಹೋಗಬಾರದು. ಬಿಇಓ ಕಚೇರಿಯಿಂದ ಮೆರವಣಿಗೆ ಇರುತ್ತದೆ ಎಲ್ಲರೂ ಕಾರ್ಯಕ್ರಮಕ್ಕೆ ಬಂದು ಯಶಸ್ವಿಗೊಳಿಸಬೇಕು ಎಂದು ಸೂಚಿಸಿದರು.

45ವರ್ಷ ಮೇಲ್ಪಟ್ಟ ಮತ್ತು ಕೆಳಗಿನ ಹಂತದವರಿಗೆ 100 ಮೀಟರ್‌ ಓಟ, ಮಹಿಳೆಯರಿಗೆ ಥ್ರೋಬಾಲ್‌, ಪುರುಷರಿಗೆ ವಾಲಿಬಾಲ್‌, ಗುಂಡು ಎಸೆತ, ಎಲ್ಲ ಶಿಕ್ಷಕರಿಗೆ ಭಾವಗೀತೆ, ಜನಪದಗೀತೆ , ದೇಶಭಕ್ತಗೀತೆ ಹಾಗೂ ಏಕಪಾತ್ರಭಿನಯ ಮತ್ತಿತರ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ