ಆ್ಯಪ್ನಗರ

60 ಕ್ಷೇತ್ರದಲ್ಲಿ ಶಿವಸೇನೆ ಸ್ಪರ್ಧೆ

ರಾಜ್ಯದ 60 ಕ್ಷೇತ್ರಗಳಲ್ಲಿ ಶಿವಸೇನೆ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದು, ಶ್ರೀರಾಮ ಸೇನೆ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌ ಹೇಳಿದರು.

Vijaya Karnataka 4 Apr 2018, 5:00 am
ಚಿಕ್ಕಮಗಳೂರು : ರಾಜ್ಯದ 60 ಕ್ಷೇತ್ರಗಳಲ್ಲಿ ಶಿವಸೇನೆ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದು, ಶ್ರೀರಾಮ ಸೇನೆ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌ ಹೇಳಿದರು.
Vijaya Karnataka Web shiv sena contest in 60 constituencies
60 ಕ್ಷೇತ್ರದಲ್ಲಿ ಶಿವಸೇನೆ ಸ್ಪರ್ಧೆ


ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿ, ಈಗಾಗಲೇ ಆಕಾಂಕ್ಷಿಗಳ ಪಟ್ಟಿಯನ್ನು ಶಿವಸೇನೆಯ ಮುಂಬಯಿ ಕಚೇರಿಗೆ ಕಳಿಸಲಾಗಿದೆ. ಜೇವರ್ಗಿಯಲ್ಲಿ ಸಿದ್ದಲಿಂಗ ಸ್ವಾಮೀಜಿ, ಶೃಂಗೇರಿ ಅಥವಾ ತೇರದಾಳದಲ್ಲಿ ತಾವು ಸ್ಪರ್ಧಿಸಲಿದ್ದು, ಇನ್ನೆರಡು ದಿನದಲ್ಲಿ ಇದು ಅಂತಿಮವಾಗಿಲಿದೆ ಎಂದರು.

ಹಿಂದುತ್ವವೇ ಶಿವಸೇನೆಯ ಪ್ರಮುಖ ಅಜೆಂಡಾ. ಬಿಜೆಪಿಯದ್ದು ಢೋಂಗಿ ಹಿಂದುತ್ವ. ತನ್ನ ರಾಜಕೀಯ ಸ್ವಾರ್ಥಕ್ಕೆ ಹಿಂದುತ್ವವನ್ನು ಬಳಕೆ ಮಾಡುತ್ತಿದೆ. ನಾವು ಹಿಂದುತ್ವಕ್ಕಾಗಿ ರಾಜಕೀಯ ಮಾಡುತ್ತೇವೆ. ಗೋರಕ್ಷಣೆ ಬಗ್ಗೆ ಮಾತನಾಡಲು ಬಿಜೆಪಿಗೆ ನೈತಿಕತೆಯೇ ಇಲ್ಲ. ಕೇಂದ್ರದಲ್ಲಿ ಬಿಜೆಪಿ ಸರಕಾರವಿದ್ದರೂ ಗೋಹತ್ಯೆ ನಿಷೇಧ ಮಾಡುವ ತಾಕತ್ತು ಇಲ್ಲ ಎಂದು ಟೀಕಿಸಿದರು.

ಬೂಟಾಟಿಕೆ ಮೂಲಕ ವಂಚಿಸಿ ಹಿಂದೂಗಳ ಮತವನ್ನು ಬಿಜೆಪಿ ಪಡೆಯುತ್ತಿದೆ. ಶಿವಸೇನೆ ಕಾಂಗ್ರೆಸ್‌ಗೆ ಬೆಂಬಲ ನೀಡುವ ಪ್ರಶ್ನೆಯೇ ಇಲ್ಲ. ಬಿಜೆಪಿಯನ್ನು ಕಾಂಗ್ರೆಸ್‌ ಬಿ ಟೀಂ ಮಾಡಲು ಹೊರಟಿರುವುದೇ ಬಿಜೆಪಿ. ಅಂತಹ ಬಿಜೆಪಿ ನಮ್ಮ ಬಗ್ಗೆ ಹೇಳುವುದಕ್ಕೇನಿದೆ ಎಂದು ಪ್ರಶ್ನಿಸಿದ ಮುತಾಲಿಕ್‌, ಚುನಾವಣೆಯಲ್ಲಿ 3ರಿಂದ 5 ಸ್ಥಾನದಲ್ಲಿ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಸೀದಿ ಕಟ್ಟಿದವ ಬಿಜೆಪಿಗೆ

ನೂರಾರು ಮಸೀದಿ ಕಟ್ಟಿದ ಮಾಲಿಕಯ್ಯ ಗುತ್ತೆದಾರ್‌ ಅವರನ್ನು ಬಿಜೆಪಿಗೆ ಕರೆತರಲಾಗಿದೆ. ಅಂತಹ ವ್ಯಕ್ತಿಯನ್ನು ಬಿಜೆಪಿಗೆ ಸೇರಿಸಿಕೊಂಡು ಯಾರಿಗೆ ಪಾಠ ಹೇಳಲು ಹೊರಟಿದ್ದೀರಿ ಎಂದು ಬಿಜೆಪಿ ಮುಖಂಡರ ವಿರುದ್ಧ ಮುತಾಲಿಕ್‌ ಕಿಡಿಕಾರಿದರು.

ಸಿ.ಟಿ.ರವಿ ಮನೆಗೆ ಕೋಟಿಕೋಟಿ

ಕೇಂದ್ರ ಸಚಿವ ಅನಂತಕುಮಾರ್‌ ಗೋಮಾಂಸ ನಿಷೇಧದ ಬಗ್ಗೆ ಢೋಂಗಿ ಮಾತನಾಡುತ್ತಾರೆ. ಗೋಮಾಂಸದಂತೆಯೇ ಬಿಜೆಪಿಗೆ ದತ್ತಪೀಠ. ದತ್ತಪೀಠ ವಿವಾದದಿಂದಲೇ ಸಿ.ಟಿ.ರವಿ ಮೂರು ಬಾರಿ ಶಾಸಕರಾದರು. ದತ್ತಪೀಠದ ಗುಹೆ ಕಟ್ಟಲಾಗದ ಸಿ.ಟಿ.ರವಿ 8 ಕೋಟಿ ರೂ. ಖರ್ಚು ಮಾಡಿ ತಮ್ಮ ಮನೆ ಕಟ್ಟಿಕೊಂಡಿದ್ದಾರೆ.

-ಪ್ರಮೋದ್‌ ಮುತಾಲಿಕ್‌, ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ

ಫೋಟೊ: 3 ಆರಗ-ಪಿ3

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ