ಆ್ಯಪ್ನಗರ

ವಸತಿ ಮಹಾ ಮಂಡಳಿಗೆ ಶಿವಶಂಕರಪ್ಪ ಉಪಾಧ್ಯಕ್ಷ

ಕರ್ನಾಟಕ ರಾಜ್ಯ ವಸತಿ ಮಹಾ ಮಂಡಳದ ಉಪಾಧ್ಯಕ್ಷ ರಾಗಿ ಅವಿರೋಧ ಆಯ್ಕೆಯಾಗಿರುವ ಹಿರಿಯ ಕಾಂಗ್ರೆಸ್‌ ಮುಖಂಡ ಟಿ.ವಿ.ಶಿವಶಂಕರಪ್ಪ ಇವರನ್ನು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಅಭಿನಂಧಿಸಲಾಯಿತು.

Vijaya Karnataka 14 Jul 2019, 5:00 am
ತರೀಕೆರೆ : ಕರ್ನಾಟಕ ರಾಜ್ಯ ವಸತಿ ಮಹಾ ಮಂಡಳದ ಉಪಾಧ್ಯಕ್ಷ ರಾಗಿ ಅವಿರೋಧ ಆಯ್ಕೆಯಾಗಿರುವ ಹಿರಿಯ ಕಾಂಗ್ರೆಸ್‌ ಮುಖಂಡ ಟಿ.ವಿ.ಶಿವಶಂಕರಪ್ಪ ಇವರನ್ನು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಅಭಿನಂಧಿಸಲಾಯಿತು.
Vijaya Karnataka Web CKM-13TARIKERE1


ಈ ಸಂದರ್ಭ ಡಿಸಿಸಿ ಬ್ಯಾಂಕ್‌ ನಿರ್ದೇಶಕ ಎಂ.ನರೇಂದ್ರ ಮಾತನಾಡಿ, ಸಹಕಾರಿ ಸಂಘದ ಹಿರಿಯ ಧುರೀಣರಾಗಿರುವ ಟಿ.ವಿ.ಶಿವಶಂಕರಪ್ಪ ತಾಲೂಕಿನಿಂದ ರಾಜ್ಯ ಮಟ್ಟದ ಸಹಕಾರಿ ಕ್ಷೇತ್ರದಲ್ಲಿ ಉನ್ನತ ಹುದ್ದೆ ಪಡೆದವರಲ್ಲಿ ಮೊದಲಿಗರಾಗಿದ್ದಾರೆ. ಶಿಸ್ತಿನ ಸಿಪಾಯಿಯಾಗಿರುವ ಇವರು ನೇರ, ನಿಷ್ಟುರ ವ್ಯಕ್ತಿತ್ವಕ್ಕೆ ಹೆಸರಾದವರು. ಅಜ್ಜಂಪುರದಲ್ಲಿ ಗೃಹ ನಿರ್ಮಾಣ ಸಹಕಾರ ಸಂಘ ಸ್ಥಾಪಿಸಲು ಶ್ರಮಿಸಲಿ. ಅಸಂಘಟಿತ ಕಾರ್ಮಿಕರಿಗೆ ವಸತಿ ಮಹಾ ಮಂಡಳದ ವತಿಯಿಂದ ವಸತಿ ಸೌಲಭ್ಯ ಕಲ್ಪಿಸಲಿ ಎಂದು ತಿಳಿಸಿದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಟಿ.ವಿ.ಶಿವಶಂಕರಪ್ಪ, ರಾಜಕೀಯ ಸ್ಥಾನಮಾನಗಳು ಸುಲಭವಾಗಿ ದೊರಕುವ ಸಂದರ್ಭದಲ್ಲಿ ಕ್ಷೇತ್ರದ ಜನರ ಆಶೋತ್ತರಗಳಿಗೆ ಮನ್ನಣೆ ನೀಡುವ ಮೂಲಕ ಮನೆ ಬಾಗಿಲಿಗೆ ಬಂದ ಸಾಕಷ್ಟು ಅವಕಾಶಗಳನ್ನು ಕಳೆದುಕೊಂಡಿದ್ದೇನೆ. ಅದರಿಂದ ನನಗೆ ಬೇಸರವಿಲ್ಲ. ರಾಜಕೀಯವಾಗಿ ಯಾವುದೇ ಅಧಿಕಾರ ಪಡೆಯದಿದ್ದರೂ ಕ್ಷೇತ್ರದ ಜನರೊಂದಿಗಿರುವ ಉತ್ತಮ ಒಡನಾಟದಿಂದಾಗಿ ಸಾಮಾನ್ಯ ಜನರು ನನ್ನನ್ನು ರಾಜಕೀಯ ನಾಯಕ ಎಂದು ಗುರುತಿಸಲು ಕಾರಣವಾಗಿದೆ ಎಂದರು.

ನಿಕಟಪೂರ್ವ ಕಸಾಪ ಜಿಲ್ಲಾಧ್ಯಕ್ಷ ಎಚ್‌.ಚಂದ್ರಪ್ಪ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಎಂ.ಮುರುಗೇಶಪ್ಪ, ನಿರ್ದೇಶಕ ಕೆಂಪರಂಗಯ್ಯ, ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷ ಎಚ್‌.ತಿಮ್ಮಯ್ಯ, ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ರಂಗಪ್ಪ, ಮುಂಖಡರಾದ ಬಿ.ಎಸ್‌.ಭಗವಾನ್‌, ಟಿ.ಬಿ.ಶಿವಣ್ಣ, ಸತ್ಯನಾರಾಯಣ, ತ.ಮ.ದೇವಾನಂದ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ