ಆ್ಯಪ್ನಗರ

ಶೃಂಗೇರಿ ಮಠಕ್ಕೆ ಶೋಭಾ ಭೇಟಿ

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಪುನಾರಾಯ್ಕೆ ಆಗಿರುವುದು ಜನತೆ ನನ್ನ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ನಾನು ಆಬಾರಿಯಾಗಿದ್ದೇನೆ ಎಂದು ಸಂಸದೆ ಶೋಭಾಕರಂದ್ಲಾಜೆ ಹೇಳಿದರು.

Vijaya Karnataka 25 May 2019, 5:00 am
ಶೃಂಗೇರಿ : ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಪುನಾರಾಯ್ಕೆ ಆಗಿರುವುದು ಜನತೆ ನನ್ನ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ನಾನು ಆಬಾರಿಯಾಗಿದ್ದೇನೆ ಎಂದು ಸಂಸದೆ ಶೋಭಾಕರಂದ್ಲಾಜೆ ಹೇಳಿದರು.
Vijaya Karnataka Web CKM-24SRI1


ಗುರುವಾರ ಶ್ರೀ ಶಾರದಾ ಪೀಠಕ್ಕೆ ಆಗಮಿಸಿ,ದೇವಿಯ ದರ್ಶನ ಹಾಗೂ ಜಗದ್ಗುರುಗಳ ಆಶೀರ್ವಾದ ಪಡೆದ ನಂತರ ಮಾತನಾಡಿದರು.ದೇಶದಲ್ಲಿ ಬಿಜೆಪಿ ಮಿತ್ರ ಕೂಟಕ್ಕೆ ಹಾಗೂ ಬಿಜೆಪಿಗೆ ಅಭೂತಪೂರ್ವ ವಿಜಯ ದೊರಕಿದೆ.ನರೇಂದ್ರ ಮೋದಿ ನಾಯಕತ್ವ ಮತ್ತೆ ದೇಶಕ್ಕೆ ದೊರಕಿರುವುದು ತಾಯಿ ಶಾರದೆಯ ಆಶೀರ್ವಾದದಿಂದ ಬಿಜೆಪಿ ಅಧಿಕಾರ ಪಡೆಯುತ್ತಿದೆ.ಪ್ರಧಾನಿ ಮೋದಿ ದೇಶದ ಹಿತಕ್ಕಾಗಿ ಹಲವಾರು ಕ್ರಮ ಕೈಗೊಂಡಿದದರಿಂದ ದೇಶ ಸಬಲವಾಗಿದೆ. ಶತ್ರು ರಾಷ್ಟ್ರ ಪಾಕಿಸ್ಥಾನದ ವಿರುದ್ಧ ಕೈಗೊಂಡ ದಿಟ್ಟ ಕ್ರಮ,ನೋಟು ಅಮಾನ್ಯಿಕರಣದಂತಹ ದಿಟ್ಟ ನಿರ್ಧಾರ,ಜಿಎಸ್‌ಟಿ ಜಾರಿ ಮುಂತಾದ ಕ್ರಮಗಳಿಂದ ಜನತೆಯ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದರು.

ಮಾಜಿ ಶಾಸಕ ಡಿ.ಎನ್‌.ಜೀವರಾಜ್‌ ಮಾತನಾಡಿ,ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮತದಾರರು ಮೋದಿ ನಾಯಕತ್ವ ಮೆಚ್ಚಿ ದಾಖಲೆ ಮತದ ಅಂತರದಿಂದ ನಮ್ಮ ಅಭ್ಯರ್ಥಿಯ ವಿಜಯಕ್ಕೆ ಕಾರಣಕರ್ತರಾಗಿದ್ದಾರೆ.ರಾಜ್ಯದ ಮೈತ್ರಿ ಸರಕಾರ ಜನರ ವಿಶ್ವಾಸ ಕಳೆದುಕೊಂಡಿರುವುದು ಇದರಿಂದ ಸಾಬೀತಾಗಿದೆ.ಮೈತ್ರಿ ಸರಕಾರ ಪತನಗೊಳ್ಳುವುದು ಖಚಿತವಾಗಿದ್ದು,ರಾಜ್ಯದಲ್ಲಿ ಬಿಜೆಪಿ ಮತ್ತೆ ಆಡಳಿತಕ್ಕೆ ಬರಲಿದೆ ಎಂದರು.

ತಾಲೂಕು ಬಿಜೆಪಿ ಅಧ್ಯಕ್ಷ ಎಚ್‌.ಎಸ್‌.ನಟೇಶ್‌,ಜಿಪಂ ಸದಸ್ಯ ಬಿ.ಶಿವಶಂಕರ್‌,ಮುಖಂಡರಾದ ಟಿ.ಕೆ.ಪರಾಶರ,ನಾಗೇಶ್‌ ಕಾಮತ್‌,ಶೋಭಾಅನಂತಯ್ಯ,ಸುಮಾಸೋಮಶೇಖರ್‌,ಸುಜಾತ,ಬಿ.ಎನ್‌.ಕೃಷ್ಣ,ಶಾರದಾ,ಶೃಂಗೇರಿ ಸುಬ್ಬಣ್ಣ ಮತ್ತಿತರರು ಇದ್ದರು. ಇದಕ್ಕೂ ಮೊದಲು ಸಂಸದೆ ಶ್ರೀಮಠಕ್ಕೆ ತೆರಳಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.ನಂತರ ಗುರುಭವನಕ್ಕೆ ತೆರಳಿ ಜಗದ್ಗುರು ಶ್ರೀ ಭಾರತೀತೀರ್ಥ ಸ್ವಾಮೀಜಿಗಳ ಆಶೀರ್ವಾದ ಪಡೆದರು.ಬಳಿಕ ಪಟ್ಟಣದಲ್ಲಿ ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿ ಮತದಾರರಿಗೆ ಅಭಿನಂದನೆ ಸಲ್ಲಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ