ಆ್ಯಪ್ನಗರ

ಶೃಂಗೇರಿ ರಾಘವೇಂದ್ರ ಮಠದಲ್ಲಿ ಶ್ರಮದಾನ

ದೇವಸ್ಥಾನದಲ್ಲಿ ನಡೆಯುವ ಆರಾಧನಾ ಮಹೋತ್ಸವಕ್ಕೆ ಮುನ್ನ ದೇಗುಲದ ಆವರಣ ಸ್ವಚ್ಛಗೊಳಿಸುವುದರಿಂದ ಉತ್ತಮ ಪರಿಸರ ನಿರ್ಮಾಣವಾದಂತಾಗುತ್ತದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕ ಮಂಜುನಾಥ್‌ ಹೇಳಿದರು.

Vijaya Karnataka 14 Aug 2019, 5:00 am
ಶೃಂಗೇರಿ : ದೇವಸ್ಥಾನದಲ್ಲಿ ನಡೆಯುವ ಆರಾಧನಾ ಮಹೋತ್ಸವಕ್ಕೆ ಮುನ್ನ ದೇಗುಲದ ಆವರಣ ಸ್ವಚ್ಛಗೊಳಿಸುವುದರಿಂದ ಉತ್ತಮ ಪರಿಸರ ನಿರ್ಮಾಣವಾದಂತಾಗುತ್ತದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕ ಮಂಜುನಾಥ್‌ ಹೇಳಿದರು.
Vijaya Karnataka Web CKM-13SRI6


ಮೆಣಸೆ ಗ್ರಾ.ಪಂ.ಯ ಕಲ್ಕಟ್ಟೆಯಲ್ಲಿ ಶ್ರೀ ರಾಘವೇಂದ್ರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಸೋಮವಾರ ಗ್ರಾಮಾಭಿವೃದ್ಧಿ ಸದಸ್ಯರು ಹಾಗೂ ಗ್ರಾಮಸ್ಥರು ಶ್ರಮದಾನದ ಮೂಲಕ ಸ್ವಚ್ಛಗೊಳಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸ್ವಾಮಿ ಸನ್ನಿಧಿಯಲ್ಲಿ ಮೂರು ದಿನ ಆರಾಧನೆ ನಡೆಯಲಿದ್ದು, ಸಾಕಷ್ಟು ಸಂಖ್ಯೆಯ ಭಕ್ತರು ಆಗಮಿಸುತ್ತಾರೆ. ಮಳೆಗಾಲದ ಸಂದರ್ಭದಲ್ಲಿ ಕಳೆ ಹೆಚ್ಚಾಗಿ ಬೆಳೆದಿದ್ದು, ಕಾರ್ಯಕರ್ತರಿಂದ ಸ್ವಚ್ಛಗೊಳಿಸಲಾಗುತ್ತಿದೆ ಎಂದರು.

ಶ್ರಮದಾನದಲ್ಲಿ ದೇಗುಲದ ಸುತ್ತ ಮುತ್ತ ಬೆಳೆದಿದ್ದ ಗಿಡ ಗಂಟಿಗಳನ್ನು ತೆಗೆಯಲಾಯಿತು.

ಈ ಸಂದರ್ಭ ಯೋಜನೆಯ ಸೇವಾ ನಿರತರಾದ ಜ್ಯೋತಿ, ಕೃಷಿ ಅಧಿಕಾರಿ ದಿನೇಶ್‌, ಸಂಯೋಜಕಿ ಸುಮಂಗಲಾಆನಂದಸ್ವಾಮಿ, ಅರ್ಚಕ ಸುಬ್ರಮಣ್ಯಭಟ್‌, ರಾಮಮೂರ್ತಿ, ಆನಂದಸ್ವಾಮಿ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ