ಆ್ಯಪ್ನಗರ

ಹಂಸವಾಹಿನಿಯಾಗಿ ಕಂಗೊಳಿಸಿದ ಶ್ರೀ ಶಾರದೆ

ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದಲ್ಲಿಶರನ್ನವರಾತ್ರಿ ಅಂಗವಾಗಿ ಭಾನುವಾರ ಶ್ರೀ ಶಾರದಾ ಪ್ರತಿಷ್ಠೆಯೊಂದಿಗೆ ಶರನ್ನವರಾತ್ರಿ ಉತ್ಸವಕ್ಕೆ ಚಾಲನೆ ದೊರೆಯಿತು. ಸ್ಥಳಿಯ ಹಾಗೂ ಸಮೀಪದ ತಾಲೂಕುಗಳಿಂದ ಭಕ್ತರು ನವರಾತ್ರಿ ಉತ್ಸವಕ್ಕೆ ಆಗಮಿಸಿದ್ದರು.

Vijaya Karnataka 30 Sep 2019, 5:00 am
ಶೃಂಗೇರಿ (ಚಿಕ್ಕಮಗಳೂರು): ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದಲ್ಲಿಶರನ್ನವರಾತ್ರಿ ಅಂಗವಾಗಿ ಭಾನುವಾರ ಶ್ರೀ ಶಾರದಾ ಪ್ರತಿಷ್ಠೆಯೊಂದಿಗೆ ಶರನ್ನವರಾತ್ರಿ ಉತ್ಸವಕ್ಕೆ ಚಾಲನೆ ದೊರೆಯಿತು. ಸ್ಥಳಿಯ ಹಾಗೂ ಸಮೀಪದ ತಾಲೂಕುಗಳಿಂದ ಭಕ್ತರು ನವರಾತ್ರಿ ಉತ್ಸವಕ್ಕೆ ಆಗಮಿಸಿದ್ದರು.
Vijaya Karnataka Web 29SRI1_35


ನವರಾತ್ರಿಯ ಮೊದಲ ದಿನ ಶ್ರೀ ಶಾರದಾಂಬೆಗೆ ಹಂಸವಾಹನ ಅಲಂಕಾರ (ಬ್ರಾಹ್ಮಿ) ಮಾಡಲಾಗಿತ್ತು. ತಾಯಿ ಶಾರದೆಯ ಕೈಯಲ್ಲಿಕಮಂಡಲ, ಪುಸ್ತಕ, ಪಾಶ, ಅಕ್ಷರಮಾಲೆ ಮತ್ತು ಚಿನ್ಮುದ್ರೆ ಧರಿಸಿ, ಹಂಸವಾಹನರೂಡಳಾಗಿ ಬ್ರಹ್ಮನ ಪಟ್ಟದ ರಾಣಿಯಾಗಿ ಭಕ್ತರಿಗೆ ದರ್ಶನ ನೀಡಿದಳು. ಬೆಳಗ್ಗೆಯೇ ಶ್ರೀ ಶಾರದಾ ಸನ್ನಿಧಿಯಲ್ಲಿವಿವಿಧ ಪೂಜಾ ವಿಧಿಗಳು ನಡೆದವು. ಜಗದ್ಗುರು ಶ್ರೀ ಭಾರತೀತೀರ್ಥ ಸ್ವಾಮೀಜಿಯವರು ಶ್ರೀ ಶಾರದೆಗೆ ವಿಶೇಷ ಪೂಜೆ ಸಲ್ಲಿಸಿ, ಭಕ್ತರಿಗೆ ಪ್ರಸಾದ ನೀಡಿದರು. ಕಿರಿಯ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ತೆಪ್ಪದ ಮೂಲಕ ತುಂಗಾ ನದಿಯನ್ನು ದಾಟಿ, ಗಂಗಾ ಪೂಜೆ ನೆರವೇರಿಸಿದರು. ನಂತರ ಶ್ರೀಮಠದ ಎಲ್ಲದೇಗುಲಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ನವರಾತ್ರಿ ಉತ್ಸವದ ಸಂಭ್ರಮ ಶ್ರೀಮಠದ ಎದುರಿನ ರಾಜಬೀದಿಗೂ ವಿಸ್ತರಿಸಿದೆ. ವಿವಿಧ ಅಂಗಡಿ, ಮುಂಗಟ್ಟುಗಳು ತೆರೆದಿವೆ. ಗಾಂಧಿ ಮೈದಾನದಲ್ಲಿಸರ್ಕಸ್‌ ಬಂದಿದೆ. ಶ್ರೀಮಠದ ಎಲ್ಲದೇಗುಲಗಳನ್ನು ಭವ್ಯವಾಗಿ ಅಲಂಕರಿಸಲಾಗಿದೆ. ಶ್ರೀ ಶಾರದಾಂಬಾ ದೇಗುಲವನ್ನು ಪುಷ್ಪಾಲಂಕೃತಗೊಳಿಸಲಾಗಿತ್ತು.

ಸಂಜೆ ಶ್ರೀ ಮಠದ ಚಂದ್ರಶೇಖರ ಭಾರತೀ ಸಭಾಂಗಣದಲ್ಲಿಬೆಂಗಳೂರಿನ ಟಿ.ಆರ್‌.ಶ್ರೀನಾಥ್‌ ಮತ್ತು ತಂಡದಿಂದ ಕೊಳಲು, ವೀಣೆ ಮತ್ತು ವಯೋಲಿನ್‌ ವಾದನ ನಡೆಯಿತು. ಅಡ್ಡಗದ್ದೆಗ್ರಾ.ಪಂ.ಭಕ್ತಾದಿಗಳು ಸಂಜೆ ನಡೆದ ಬೀದಿ ಉತ್ಸವದಲ್ಲಿಭಜನಾ ಕಾರ್ಯಕ್ರಮ ನಡೆಸಿಕೊಟ್ಟರು. ಇವರೊಂದಿಗೆ ಕೊಪ್ಪ ಹಾಗೂ ನರಸಿಂಹರಾಜಪುರ ತಾಲೂಕು ವಿವಿಧ ಸಂಘ ಸಂಸ್ಥೆಗಳ ಕಾರ್ಯಕರ್ತರು ಭಜನಾ ಕಾರ್ಯಕ್ರಮದಲ್ಲಿಭಾಗವಹಿಸಿದ್ದರು.

ಉತ್ಸವದ ಅಂಗವಾಗಿ ಪಟ್ಟಣದಲ್ಲಿವಾಹನ ನಿಲುಗಡೆಯನ್ನು ಸಂಜೆ 4ರಿಂದ ನಿಷೇಧಿಸಲಾಗಿದೆ. ಬಸ್‌ ನಿಲ್ದಾಣದಿಂದ ಹೊರಗೆ ಹೋಗುವ ಬಸ್‌ಗಳು ಸಂಜೆ 5ರ ನಂತರ ಪಟ್ಟಣದ ಮೂಲಕ ಸಂಚರಿಸುವುದಿಲ್ಲ. ರಾಷ್ಟ್ರೀಯ ಹೆದ್ದಾರಿ ಮೂಲಕ ತೆರಳಲಿದೆ.

ಸೋಮವಾರದ ಕಾರ್ಯಕ್ರಮ:

ಶ್ರೀ ಶಾರದಾಂಬೆಗೆ ಹಂಸವಾಹಿನಿ ಅಲಂಕಾರ, ಉಭಯ ಶ್ರೀಗಳಿಂದ ಶ್ರೀ ಶಾರಾದೆಗೆ ವಿಶೇಷ ಪೂಜೆ, ಸಂಜೆ ಅಮ್ಮನವರ ಬೀದಿ ಉತ್ಸವ, ರಾತ್ರಿ ಶ್ರೀಮಠದ ಒಳ ಪ್ರಾಂಗಣದಲ್ಲಿಜಗದ್ಗುರುಗಳ ದರ್ಬಾರ್‌.

ಸಾಂಸ್ಕೃತಿಕ ಕಾರ್ಯಕ್ರಮ- ಬೆಂಗಳೂರಿನ ಕೆ.ವಿ.ಕೃಷ್ಣಪ್ರಸಾದ್‌ ಮತ್ತು ತಂಡದವರಿಂದ ಹಾಡುಗಾರಿಕೆ ನಡೆಯಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ