ಚಿಕ್ಕಮಗಳೂರು: ಜಾತಿ, ಧರ್ಮದ ಕಾರಣಕ್ಕೆ ಮೋದಿಗೆ ಮತ ಹಾಕದವರು ತಾಯಿಗಂಡರು ಎಂದು ಹೇಳಿದ್ದ ಶಾಸಕ ಸಿ.ಟಿ.ರವಿ ಅವರನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ನಗರದ ವಿಜಯಪುರ ಗಣಪತಿ ಪೆಂಡಾಲ್ನಲ್ಲಿ ಸೋಮವಾರ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಪರ ಪ್ರಚಾರ ಭಾಷಣ ಮಾಡುವ ಸಂದರ್ಭ ಸಿ.ಟಿ.ರವಿ ಸಂಸ್ಕೃತಿಹೀನ ಎಂದು ಟೀಕಿಸಿದರು.
ಬಿಜೆಪಿಯ ಈಶ್ವರಪ್ಪ, ಸಿ.ಟಿ.ರವಿ ಅವರೆಲ್ಲ ಯಾವ ಸಂಸ್ಕೃತಿ, ಸಂಸ್ಕಾರ ಕಲಿತಿದ್ದಾರೋ ಗೊತ್ತಿಲ್ಲ. ಇಲ್ಲಿನ ಸುಸಂಸ್ಕೃತ ಜನ ಆ ಸಿ.ಟಿ.ರವಿಯನ್ನು ಹೇಗೆ ಆಯ್ಕೆ ಮಾಡಿ ಕಳಿಸುತ್ತೀರಿ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ ಅವರು ಸಿ.ಟಿ.ರವಿ ನೀಡಿರುವ ಹೇಳಿಕೆ ಭಾರತೀಯ ದಂಡಸಂಹಿತೆ ಪ್ರಕಾರ ಅಪರಾಧ.ಇಂತಹ ಹೇಳಿಕೆ ನೀಡಲು ಅವರಿಗೆ ನಾಚಿಕೆ ಆಗಲ್ವಎಂದು ಪ್ರಶ್ನಿಸಿದರು.
ಚುನಾವಣೆ ನಂತರ ಕುಮಾರಸ್ವಾಮಿ ನೆಗೆದುಬಿದ್ದು ಹೋಗ್ತಾರೆ ಎಂದು ಈಶ್ವರಪ್ಪ ಹೇಳುತ್ತಾರೆ. ಆತನಿಗೆ ಮಿದುಳಿಗೂ ನಾಲಿಗೆಗೂ ಲಿಂಕ್ ತಪ್ಪಿಹೋಗಿದೆ. ರೈತ ಹೋರಾಟಗಾರ ಅಂತ ಹಸಿರು ಶಾಲು ಹಾಕಿಕೊಂಡ ಯಡಿಯೂರಪ್ಪ ರೈತರ ಸಾಲಮನ್ನಾ ಮಾಡಲು ನೋಟ್ ಪ್ರಿಂಟ್ ಮಾಡುವ ಮೆಷಿನ್ ಇಲ್ಲ ಎಂದರು. ಆದರೆ, ಈಶ್ವರಪ್ಪನ ಮನೆಯಲ್ಲಿ ನೋಟು ಎಣಿಸುವ 2 ಮೆಷಿನ್ ಸಿಕ್ಕಿದವು ಎಂದು ಟೀಕಿಸಿದರು.
ಚಿಕ್ಕಮಗಳೂರಲ್ಲಿ ಕಾಫಿ, ಅಡಕೆ, ಕಾಳುಮೆಣಸಿನ ಬೆಲೆ ಏನಾಗಿದೆ? ಆರ್ಎಸ್ಎಸ್ ಗಿರಾಕಿ ಶೋಭಾ ಬಹಳ ಕ್ಲೋಸಲ್ಲ? ಜಿಲ್ಲೆಯ ಜನರ ಸಮಸ್ಯೆ ಬಗ್ಗೆ ಸಂಸತ್ತಿನಲ್ಲಿ ಏನಾದ್ರೂ ಮಾತಾಡಿದ್ರಾ? ನಾನು ಮುಖ್ಯಮಂತ್ರಿಯಾಗಿದ್ದಾಗ ಅಡಕೆ ಬೆಳೆಗಾರರಿಗೆ ಪರಿಹಾರ ಕೊಟ್ಟೆ. ಮತ್ತೆ ಇವರಿಗೇನು ರೋಗ ಎಂದು ತರಾಟೆಗೆ ತೆಗೆದುಕೊಂಡರು.
ಶೋಭಾಗೆ ಸಿ.ಟಿ.ರವಿ ವೋಟಾಕಲ್ಲ!
ಶೋಭಾ ಕರಂದ್ಲಾಜೆಗೆ ಈ ಬಾರಿ ಸಿ.ಟಿ.ರವಿಯೇ ವೋಟು ಹಾಕಲ್ಲ. ಶೋಭಾ ಗೋಬ್ಯಾಕ್ ಅಂತ ಬಿಜೆಪಿ ಹುಡುಗರ ಕೈಯಲ್ಲಿ ಹೇಳಿಸಿದ್ದೇ ಈ ಗಿರಾಕಿ. ಈಗ ಪ್ರಮೋದ್ ಮಧ್ವರಾಜ್ ವೆಲ್ಕಂ, ವೆಲ್ಕಂ, ವೆಲ್ಕಂ ಅಂತಾ ಇರಬೇಕು. ಪ್ರಜಾಪ್ರಭುತ್ವ, ಸಂವಿಧಾನದಲ್ಲಿ ನಂಬಿಕೆ ಇಟ್ಟವರು ಒಂದೇ ಒಂದು ವೋಟನ್ನು ಬಿಜೆಪಿಗೆ ಹಾಕಬಾರದು. ದೇಶ, ಸಂವಿಧಾನ ಉಳಿಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ.
-ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ
ನಗರದ ವಿಜಯಪುರ ಗಣಪತಿ ಪೆಂಡಾಲ್ನಲ್ಲಿ ಸೋಮವಾರ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಪರ ಪ್ರಚಾರ ಭಾಷಣ ಮಾಡುವ ಸಂದರ್ಭ ಸಿ.ಟಿ.ರವಿ ಸಂಸ್ಕೃತಿಹೀನ ಎಂದು ಟೀಕಿಸಿದರು.
ಬಿಜೆಪಿಯ ಈಶ್ವರಪ್ಪ, ಸಿ.ಟಿ.ರವಿ ಅವರೆಲ್ಲ ಯಾವ ಸಂಸ್ಕೃತಿ, ಸಂಸ್ಕಾರ ಕಲಿತಿದ್ದಾರೋ ಗೊತ್ತಿಲ್ಲ. ಇಲ್ಲಿನ ಸುಸಂಸ್ಕೃತ ಜನ ಆ ಸಿ.ಟಿ.ರವಿಯನ್ನು ಹೇಗೆ ಆಯ್ಕೆ ಮಾಡಿ ಕಳಿಸುತ್ತೀರಿ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ ಅವರು ಸಿ.ಟಿ.ರವಿ ನೀಡಿರುವ ಹೇಳಿಕೆ ಭಾರತೀಯ ದಂಡಸಂಹಿತೆ ಪ್ರಕಾರ ಅಪರಾಧ.ಇಂತಹ ಹೇಳಿಕೆ ನೀಡಲು ಅವರಿಗೆ ನಾಚಿಕೆ ಆಗಲ್ವಎಂದು ಪ್ರಶ್ನಿಸಿದರು.
ಚುನಾವಣೆ ನಂತರ ಕುಮಾರಸ್ವಾಮಿ ನೆಗೆದುಬಿದ್ದು ಹೋಗ್ತಾರೆ ಎಂದು ಈಶ್ವರಪ್ಪ ಹೇಳುತ್ತಾರೆ. ಆತನಿಗೆ ಮಿದುಳಿಗೂ ನಾಲಿಗೆಗೂ ಲಿಂಕ್ ತಪ್ಪಿಹೋಗಿದೆ. ರೈತ ಹೋರಾಟಗಾರ ಅಂತ ಹಸಿರು ಶಾಲು ಹಾಕಿಕೊಂಡ ಯಡಿಯೂರಪ್ಪ ರೈತರ ಸಾಲಮನ್ನಾ ಮಾಡಲು ನೋಟ್ ಪ್ರಿಂಟ್ ಮಾಡುವ ಮೆಷಿನ್ ಇಲ್ಲ ಎಂದರು. ಆದರೆ, ಈಶ್ವರಪ್ಪನ ಮನೆಯಲ್ಲಿ ನೋಟು ಎಣಿಸುವ 2 ಮೆಷಿನ್ ಸಿಕ್ಕಿದವು ಎಂದು ಟೀಕಿಸಿದರು.
ಚಿಕ್ಕಮಗಳೂರಲ್ಲಿ ಕಾಫಿ, ಅಡಕೆ, ಕಾಳುಮೆಣಸಿನ ಬೆಲೆ ಏನಾಗಿದೆ? ಆರ್ಎಸ್ಎಸ್ ಗಿರಾಕಿ ಶೋಭಾ ಬಹಳ ಕ್ಲೋಸಲ್ಲ? ಜಿಲ್ಲೆಯ ಜನರ ಸಮಸ್ಯೆ ಬಗ್ಗೆ ಸಂಸತ್ತಿನಲ್ಲಿ ಏನಾದ್ರೂ ಮಾತಾಡಿದ್ರಾ? ನಾನು ಮುಖ್ಯಮಂತ್ರಿಯಾಗಿದ್ದಾಗ ಅಡಕೆ ಬೆಳೆಗಾರರಿಗೆ ಪರಿಹಾರ ಕೊಟ್ಟೆ. ಮತ್ತೆ ಇವರಿಗೇನು ರೋಗ ಎಂದು ತರಾಟೆಗೆ ತೆಗೆದುಕೊಂಡರು.
ಶೋಭಾಗೆ ಸಿ.ಟಿ.ರವಿ ವೋಟಾಕಲ್ಲ!
ಶೋಭಾ ಕರಂದ್ಲಾಜೆಗೆ ಈ ಬಾರಿ ಸಿ.ಟಿ.ರವಿಯೇ ವೋಟು ಹಾಕಲ್ಲ. ಶೋಭಾ ಗೋಬ್ಯಾಕ್ ಅಂತ ಬಿಜೆಪಿ ಹುಡುಗರ ಕೈಯಲ್ಲಿ ಹೇಳಿಸಿದ್ದೇ ಈ ಗಿರಾಕಿ. ಈಗ ಪ್ರಮೋದ್ ಮಧ್ವರಾಜ್ ವೆಲ್ಕಂ, ವೆಲ್ಕಂ, ವೆಲ್ಕಂ ಅಂತಾ ಇರಬೇಕು. ಪ್ರಜಾಪ್ರಭುತ್ವ, ಸಂವಿಧಾನದಲ್ಲಿ ನಂಬಿಕೆ ಇಟ್ಟವರು ಒಂದೇ ಒಂದು ವೋಟನ್ನು ಬಿಜೆಪಿಗೆ ಹಾಕಬಾರದು. ದೇಶ, ಸಂವಿಧಾನ ಉಳಿಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ.
-ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ