ಆ್ಯಪ್ನಗರ

ಚಿಕ್ಕಮಗಳೂರಿನ ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳಿಗೆ ಸಿದ್ದರಾಮಯ್ಯ ಸಾಂತ್ವನ

ಮೃತ ರೈತ ಚಂದ್ರೇಗೌಡ ಹಾಗೂ ಚನ್ನಪ್ಪಗೌಡ ಮನೆಗೆ ಭೇಟಿ ನೀಡಿದ ಸಿದ್ದರಾಮಯ್ಯ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಇದೇ ಸಂದರ್ಭದಲ್ಲಿ ಇಬ್ಬರೂ ರೈತರ ಕುಟುಂಬದವರಿಗೆ ತಲಾ 50 ಸಾವಿರ ರೂಪಾಯಿ ಪರಿಹಾರ ಧನವನ್ನು ಅವರು ಹಸ್ತಾಂತರಿಸಿದರು.

Vijaya Karnataka Web 5 Oct 2019, 2:28 pm

ಚಿಕ್ಕಮಗಳೂರು: ನರೆ ಮತ್ತು ಭೂಕುಸಿತದಿಂದ ಅನ್ನ ನೀಡುವ ಕೃಷಿ ಭೂಮಿಯನ್ನು ಕಳೆದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದ ಜಿಲ್ಲೆಯ ಇಬ್ಬರು ರೈತರ ಮನೆಗೆ ಶನಿವಾರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿ ಸಾಂತ್ವನ ಹೇಳಿದರು.
Vijaya Karnataka Web Siddaramaiah 01


ಮೃತ ರೈತ ಚಂದ್ರೇಗೌಡ ಹಾಗೂ ಚನ್ನಪ್ಪಗೌಡ ಮನೆಗೆ ಭೇಟಿ ನೀಡಿದ ಅವರು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಇದೇ ಸಂದರ್ಭದಲ್ಲಿ ಇಬ್ಬರೂ ರೈತರ ಕುಟುಂಬದವರಿಗೆ ತಲಾ 50 ಸಾವಿರ ರೂಪಾಯಿ ವೈಯಕ್ತಿಕ ಪರಿಹಾರ ಧನವನ್ನು ಸಿದ್ದರಾಮಯ್ಯ ಹಸ್ತಾಂತರಿಸಿದರು.



ನೆರೆ ಬಂದ ಊರಲಿ ಸಿಕ್ಕಿಲ್ಲ ಪರಿಹಾರ,ಆತ್ಮಹತ್ಯೆ ಸರಣಿಯಲ್ಲಿ ಹೊಸ ಬಲಿ!

ಮೂಡಿಗೆರೆ ತಾಲೂಕು ಕಳಸ ಸಮೀಪದ ಎಸ್‌.ಕೆ. ಮೇಗಲ್‌ನ ರೈತ ಚಂದ್ರೇಗೌಡ (55) ಇದೇ ಅಕ್ಟೋಬರ್‌ 3ರಂದು ಆತ್ಮಹತ್ಯೆಗೆ ಶರಣಾಗಿದ್ದರು. ಅವರ ಅರ್ಧ ಎಕರೆ ಭತ್ತದ ಗದ್ದೆ ಮತ್ತು ಅರ್ಧ ಎಕರೆ ಕಾಫಿ ತೋಟ ನೆರೆಯಿಂದ ಹಾಳಾಗಿತ್ತು. ತೋಟ ಸರಿಪಡಿಸಲು ಕೈ ಸಾಲ ಮಾಡಿಕೊಂಡಿದ್ದರು. ಆದರೆ, ನೆರೆಗೆ ಸರಕಾರ ಯಾವುದೇ ಪರಿಹಾರ ನೀಡುತ್ತಿಲ್ಲ ಎಂದು ಮನನೊಂದು ಕೀಟ ನಾಶಕ ಸೇವಿಸಿ ಸಾವಿಗೆ ಸಾವಿಗೆ ಶರಣಾಗಿದ್ದರು.

ಇದೇ ರೀತಿ ಮೂಡಿಗೆರೆ ತಾಲೂಕಿನ ಕಳಸ ಬಳಿಯ ಕಾರ್ಗದ್ದೆ ಗ್ರಾಮದ ಚನ್ನಪ್ಪಗೌಡ (65) ಗುಂಡು ಹಾರಿಸಿಕೊಂಡು ಸೆಪ್ಟೆಂಬರ್‌ 14ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು.

ಚಿಕ್ಕಮಗಳೂರಿನಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ನೆರೆ ಸಂತ್ರಸ್ತ ರೈತ

ಚನ್ನಪ್ಪಗೌಡರ ಸುಮಾರು ಐದು ಎಕರೆ ಜಮೀನು ಮಳೆಯಿಂದ ಕುಸಿದ ಬೆಟ್ಟ-ಗುಡ್ಡದ ಅಡಿಯಲ್ಲಿ ಮುಳುಗಿ ಹೋಗಿತ್ತು. ಅಧಿಕಾರಿಗಳು ಭೇಟಿ ನೀಡಿ ತೋಟವನ್ನು ಪರಿಶೀಲನೆ ನಡೆಸಿದ್ದರಾದರೂ ಸರಕಾರದಿಂದ ಯಾವುದೇ ಪರಿಹಾರ ಮಾತ್ರ ಬಂದಿರಲಿಲ್ಲ. ಇದರಿಂದ ನೊಂದ ರೈತ ಚನ್ನಪ್ಪಗೌಡರು ತೋಟದಲ್ಲೇ ಗುಂಡು ಹಾರಿಸಿಕೊಂಡು ಪ್ರಾಣ ಬಿಟ್ಟಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ