ಆ್ಯಪ್ನಗರ

ಸಿದ್ಧಾರ್ಥ ಕಾಫಿ ಉದ್ಯಮದ ಬುದ್ಧ

ವ್ಯವಸ್ಥೆಯ ಕ್ರೌರ‍್ಯಕ್ಕೆ ಬಲಿದಾನ ಮಾಡಿದ ಉದ್ಯಮಿ ವಿ.ಜಿ.ಸಿದ್ಧ್ದಾರ್ಥ ಹೆಗ್ಡೆ ಕಾಫಿ ಉದ್ಯಮದ ಬುದ್ಧನಾಗುವ ನಿರೀಕ್ಷೆ ನಮ್ಮದು ಎಂದು ಮಾಜಿ ಸಭಾಪತಿ ಡಾ.ಬಿ.ಎಲ್‌.ಶಂಕರ್‌ ಹೇಳಿದರು.

Vijaya Karnataka 15 Aug 2019, 5:00 am
ಚಿಕ್ಕಮಗಳೂರು : ವ್ಯವಸ್ಥೆಯ ಕ್ರೌರ‍್ಯಕ್ಕೆ ಬಲಿದಾನ ಮಾಡಿದ ಉದ್ಯಮಿ ವಿ.ಜಿ.ಸಿದ್ಧ್ದಾರ್ಥ ಹೆಗ್ಡೆ ಕಾಫಿ ಉದ್ಯಮದ ಬುದ್ಧನಾಗುವ ನಿರೀಕ್ಷೆ ನಮ್ಮದು ಎಂದು ಮಾಜಿ ಸಭಾಪತಿ ಡಾ.ಬಿ.ಎಲ್‌.ಶಂಕರ್‌ ಹೇಳಿದರು.
Vijaya Karnataka Web CKM-14SHIVUP4


ಜಿಲ್ಲಾ ಒಕ್ಕಲಿಗರ ಸಮುದಾಯ ಭವನದಲ್ಲಿ ಬುಧವಾರ ಜಿಲ್ಲಾ ಒಕ್ಕಲಿಗರ ಸಂಘದಿಂದ ಕೆಫೆ ಕಾಫಿ ಡೇ ಮಾಲೀಕ ದಿ.ವಿ.ಜಿ.ಸಿದ್ದಾರ್ಥ ಹೆಗ್ಡೆ ಅವರಿಗೆ ಆಯೋಜಿಸಿದ್ದ ಸಾರ್ವಜನಿಕ ಶ್ರದ್ಧಾಂಜಲಿ ಕಾರ‍್ಯಕ್ರಮದಲ್ಲಿ ಮಾತನಾಡಿದರು. ಸಿದ್ಧಾರ್ಥ ಮತ್ತು ಅವರ ಕುಟುಂಬ ಮಾನ, ಮರಾರ‍ಯದೆಗೆ ಅಂಜಿ ಬದುಕಿದ್ದು, ವ್ಯವಸ್ಥೆಯ ಕ್ರೌರ‍್ಯಕ್ಕೆ ದೇಹತ್ಯಾಗ ಮಾಡಬೇಕಾಗಿ ಬಂತು. ಸಿದ್ಧ್ದಾರ್ಥ ಸ್ವಾರ್ಥಕ್ಕೆ ಏನನ್ನೂ ಬಯಸದೆ ಊರು ಉದ್ಧಾರ ಮಾಡುವ ಕನಸು ಕಂಡವರು. ಅವರು ಕಟ್ಟಿದ ಉದ್ದಿಮೆಗಳನ್ನು ಉಳಿಸಿಕೊಳ್ಳುವ ಹೊಣೆಗಾರಿಕೆ ಎಲ್ಲರ ಮೇಲಿದೆ ಎಂದರು.

ಜಿಲ್ಲೆಯದ್ದೇ ಕನಸು : ರಿಯಲ್‌ ಎಸ್ಟೇಟ್‌ನಲ್ಲಿ ಬಂಡವಾಳ ಹೂಡಿ ಕೋಟಿಗಟ್ಟಲೆ ದುಡಿವ ಅವಕಾಶವಿದ್ದರೂ ಸಿದ್ಧಾರ್ಥ ಆ ಕ್ಷೇತ್ರ ಆಯ್ದುಕೊಳ್ಳಲಿಲ್ಲ. ಚಿಕ್ಕಮಗಳೂರು ಜಿಲ್ಲೆಯ ಬಡ ಹುಡುಗರಿಗೆ ಕೆಲಸ ಕೊಡುವ ಕನಸು ಅವರದ್ದು. ಇದೇ ಕಾರಣಕ್ಕೆ ತಮ್ಮೆಲ್ಲ ಕನಸನ್ನು ಇಲ್ಲಿಯೇ ಸಾಕಾರಗೊಳಿಸಲು ಬಯಸುತ್ತಿದ್ದರು. ಚಿಕ್ಕಮಗಳೂರನ್ನು ಸಿಂಗಾಪುರದಂತೆ ಬೆಳೆಸುವ ಕನಸು ಅವರದ್ದಾಗಿತ್ತು ಎಂದು ಹೇಳಿದರು.

ಶಾಸಕ ಸಿ.ಟಿ.ರವಿ ಮಾತನಾಡಿ, ಸಿದ್ದಾರ್ಥ ಹೆಗ್ಡೆ ಯುವಜನರಿಗೆ ರೋಲ್‌ ಮಾಡೆಲ್‌ ಆಗಿದ್ದರು. ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವುದನ್ನು ಊಹಿಸಲೂ ಸಾಧ್ಯವಿಲ್ಲ. ಸಾವಿರಾರು ಕುಟುಂಬಗಳಿಗೆ ಬದುಕು ಕೊಟ್ಟಿದ್ದರು. ಆದರೆ, ತಾವೇ ಸಾವು ಆಹ್ವಾನಿಸಿಕೊಂಡಿದ್ದು ನೋವಿನ ಸಂಗತಿ ಎಂದರು.

ವಿಧಾನ ಪರಿಷತ್‌ ಉಪ ಸಭಾಪತಿ ಎಸ್‌.ಎಲ್‌.ಧರ್ಮೇಗೌಡ, ಶಾಸಕ ಟಿ.ಡಿ.ರಾಜೇಗೌಡ, ವಿಧಾನ ಪರಿಷತ್‌ ಸದಸ್ಯೆ ತೇಜಸ್ವಿನಿರಮೇಶ್‌, ಮಾಜಿ ಶಾಸಕ ಬಿ.ಬಿ.ನಿಂಗಯ್ಯ, ಉದ್ಯಮಿ ಮುನೀರ್‌ ಅಹಮದ್‌ ಮಾತನಾಡಿದರು. ಆದಿಚುಂಚನಗಿರಿ ಶೃಂಗೇರಿ ಶಾಖಾ ಮಠದ ಶ್ರೀಗುಣನಾಥ ಸ್ವಾಮೀಜಿ ಆಶೀರ್ವಚನ ನೀಡಿದರು.ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಕೆ.ಎಂ.ಶ್ರೀನಿವಾಸ್‌, ಶಾಸಕ ಎಂ.ಪಿ.ಕುಮಾರಸ್ವಾಮಿ, ವಿಧಾನ ಪರಿಷತ್‌ ಸದಸ್ಯ ಎಸ್‌.ಎಲ್‌.ಬೋಜೇಗೌಡ, ಮಾಜಿ ಸದಸ್ಯೆ ಗಾಯತ್ರಿಶಾಂತೇಗೌಡ, ಕಾಫಿ ಮಂಡಳಿ ಅಧ್ಯಕ್ಷ ಎಂ.ಎಸ್‌.ಬೋಜೇಗೌಡ, ಜಿ.ಪಂ. ಅಧ್ಯಕ್ಷೆ ಸುಜಾತಕೃಷ್ಣಪ್ಪ ಮತ್ತಿತರರು ಹಾಜರಿದ್ದರು. ಸಂಘದ ಉಪಾಧ್ಯಕ್ಷ ಟಿ.ರಾಜಶೇಖರ್‌ ಸ್ವಾಗತಿಸಿ, ಜಿ.ಪಂ. ಮಾಜಿ ಸದಸ್ಯೆ ಸವಿತಾರಮೇಶ್‌ ನಿರೂಪಿಸಿದರು.

ಉದ್ಯಮಿಗಳನ್ನು ಉಳಿಸಬೇಕು : ಸಿದ್ಧಾರ್ಥ ಹೆಗ್ಡೆ ನಿಧನ ನಮ್ಮದೇ ಮನೆಯಲ್ಲಿ ಒಬ್ಬರನ್ನು ಕಳೆದುಕೊಂಡ ಅನುಭವ. ಭಯ, ಆತಂಕ, ತಳಮಳ. ಅವರ ಸಾವು ಈ ರೀತಿ ಆಗುತ್ತದೆ ಎಂಬುದನ್ನು ಕಲ್ಪಿಸಿಕೊಳ್ಳುವುದೂ ಸಾಧ್ಯವಿಲ್ಲ. ಕಾಫಿ ತೋಟದ ಹಳ್ಳಿಯಿಂದ ಬಂದ ಹುಡುಗ ಜಗತ್ತು ನಿಬ್ಬೆರಗಾಗುವಂತೆ ಬೆಳೆದಿದ್ದ. ಕಾಫಿ ಡೇ ಕಾರಣಕ್ಕೆ ಸ್ಟಾರ್‌ ಬಕ್ಸ್‌ ಸೇರಿದಂತೆ ದೊಡ್ಡ ದೊಡ್ಡ ವಿದೇಶಿ ಕಂಪನಿಗಳು ಭಾರತಕ್ಕೆ ಬರಲು ಹಿಂಜರಿದಿದ್ದವು. ದೇಶದ ಉದ್ಯಮಿಗಳನ್ನು ಬೆಳೆಸಲು ಸರಕಾರಗಳು ಯೋಚಿಸಬೇಕಿದೆ. ನಮ್ಮ ಉದ್ಯಮಿಗಳ ಕೈಕಟ್ಟಿ ಹಾಕದೆ ಪ್ರೋತ್ಸಾಹ ನೀಡಬೇಕು. ವಿದೇಶಿ ಉದ್ದಿಮೆದಾರರಿಗೆ ದುಡ್ಡು ದೋಚುವ ಉದ್ದೇಶವಿರುತ್ತದೆಯೇ ವಿನಾ ನಮ್ಮವರಿಗೆ ಕೆಲಸ ಕೊಡುವ ಮನಸ್ಸು ಇರುವುದಿಲ್ಲ. ಆದರೆ, ಸಿದ್ದಾರ್ಥ ಹೆಗ್ಡೆ ಹಳ್ಳಿಗಾಡಿನ ಯುವಜನರಿಗೆ ಕೆಲಸ ಕೊಟ್ಟ ಉದ್ಯಮಿ. -ಶೋಭಾ ಕರಂದ್ಲಾಜೆ, ಸಂಸದೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ