ಆ್ಯಪ್ನಗರ

ಫಲಾನುಭವಿಗಳಿಂದ ಮೆಸ್ಕಾಂ ಕಚೇರಿಗೆ ಮುತ್ತಿಗೆ

ತಾಲೂಕಿನ ಅಗಳಗಂಡಿ, ಹೇರೂರು, ಜಯಪುರ ಗ್ರಾ.ಪಂ. ವ್ಯಾಪ್ತಿಯಲ್ಲಿ ಕೇಂದ್ರ ಸರಕಾರ ಉಚಿತವಾಗಿ ಗ್ರಾಮೀಣ ಪ್ರದೇಶದ ಬಡ ಕುಟುಂಬಗಳಿಗೆ ವಿದ್ಯುತ್‌ ಸಂಪರ್ಕ ನೀಡುವ ಯೋಜನೆಗೆ ಫಲಾನುಭವಿಗಳಿಂದ ಅಕ್ರಮವಾಗಿ ಪಡೆದ ಹಣವನ್ನು ಸಾರ್ವಜನಿಕರ ಸಮ್ಮುಖದಲ್ಲಿ ಮರಳಿಸುವುದಾಗಿ ಗುತ್ತಿಗೆದಾರ ಹರೀಶ್‌ ಸ್ಪಷ್ಟಪಡಿಸಿದ್ದಾರೆ.

Vijaya Karnataka 16 Jun 2018, 5:00 am
ಜಯಪುರ : ತಾಲೂಕಿನ ಅಗಳಗಂಡಿ, ಹೇರೂರು, ಜಯಪುರ ಗ್ರಾ.ಪಂ. ವ್ಯಾಪ್ತಿಯಲ್ಲಿ ಕೇಂದ್ರ ಸರಕಾರ ಉಚಿತವಾಗಿ ಗ್ರಾಮೀಣ ಪ್ರದೇಶದ ಬಡ ಕುಟುಂಬಗಳಿಗೆ ವಿದ್ಯುತ್‌ ಸಂಪರ್ಕ ನೀಡುವ ಯೋಜನೆಗೆ ಫಲಾನುಭವಿಗಳಿಂದ ಅಕ್ರಮವಾಗಿ ಪಡೆದ ಹಣವನ್ನು ಸಾರ್ವಜನಿಕರ ಸಮ್ಮುಖದಲ್ಲಿ ಮರಳಿಸುವುದಾಗಿ ಗುತ್ತಿಗೆದಾರ ಹರೀಶ್‌ ಸ್ಪಷ್ಟಪಡಿಸಿದ್ದಾರೆ.
Vijaya Karnataka Web siege from beneficiaries to mescom office
ಫಲಾನುಭವಿಗಳಿಂದ ಮೆಸ್ಕಾಂ ಕಚೇರಿಗೆ ಮುತ್ತಿಗೆ


ಪಟ್ಟಣದ ಮೆಸ್ಕಾಂ ಕಚೇರಿಯಲ್ಲಿ ಇತ್ತೀಚೆಗೆ ಅನೇಕ ಫಲಾನುಭವಿಗಳು ದಿಢೀರ್‌ ಮುತ್ತಿಗೆ ಹಾಕಿ ಪಟ್ಟು ಹಿಡಿದರು. ಹೇರೂರು ಗ್ರಾ.ಪಂ. ಸದಸ್ಯ ಚಿಮ್ಮನ ಕೊಡಿಗೆ ನಟರಾಜ್‌ ಮಾತನಾಡಿ, ಸರಕಾರ ಬಡವರಿಗೆ ಉಚಿತ ವಿದ್ಯುತ್‌ ಸಂಪರ್ಕ ನೀಡಲು ಮುಂದಾದರೂ, ಗುತ್ತಿಗೆದಾರರು ಅಕ್ರಮ ಹಣ ವಸೂಲಿ ಮಾಡಿರುವುದು ಖಂಡನೀಯ. ತಕ್ಷ ಣವೇ ಹಣ ಮರಳಿಸಬೇಕು ಎಂದು ಬಿಗಿ ಪಟ್ಟು ಹಿಡಿದರು.

ಕೇಂದ್ರ ಸರಕಾರ ಧೀನ ದಯಾಳ್‌ ಉಪಾಧ್ಯಾಯ ಯೋಜನೆಯಡಿಯಲ್ಲಿ ಗ್ರಾಮೀಣ ಭಾಗದ ವಿದ್ಯುತ್‌ ವಂಚಿತ ಪ್ರತೀ ಮನೆಗಳಿಗೆ ಉಚಿತವಾಗಿ ಬಲ್ಬ್, ಪ್ಲೆಗ್‌ ಮತ್ತು ಮೀಟರ್‌ ಅಳವಡಿಸಲಾಗುತ್ತಿದೆ. ಕೊಪ್ಪ ತಾಲೂಕಿನಲ್ಲಿ ಒಟ್ಟು 734 ಫಲಾನುಭವಿಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಲು ಟೆಂಡರ್‌ ಕರೆಯಲಾಗಿದ್ದು, ಮಂಗಳೂರಿನ ಜ್ಯೋತಿ ಎಲೆಕ್ಟ್ರಿಕಲ್ಸ್‌ ಸಂಸ್ಥೆ ಗುತ್ತಿಗೆ ಪಡೆದಿದೆ. ಆ ಸಂಸ್ಥೆಯ ಕಾರ್ಮಿಕರು ಪ್ರತಿ ಮನೆಗೆæ 1300 ರಿಂದ 2000 ರೂ ವರೆಗೆ ಹಣ ಪಡೆದಿರುವುದು ಅಕ್ಷ ಮ್ಯ ಅಪರಾಧವಾಗಿದೆ ಎಂದರು.

ಈ ಹಿನ್ನೆಲೆಯಲ್ಲಿ ಜ್ಯೋತಿ ಎಲೆಕ್ಟ್ರಿಕಲ್ಸ್‌ ನ ಹರೀಶ್‌ ಕಚೇರಿಗೆ ಆಗಮಿಸಿದಾಗ ಫಲಾನುಭವಿಗಳು ವ್ಯಾಪಕ ದೂರಿನ ಸುರಿಮಳೆಗೈದರು. ಹೇರೂರು ಗ್ರಾ.ಪಂ. ವ್ಯಾಪ್ತಿಯ ವೀರಗಲ್ಲುಮಕ್ಕಿಯ ವೀಣಾ ಎಂಬುವವರು ಮನೆಗೆ ಮೀಟರ್‌, ಪ್ಲೆಗ್‌ ಪಾಯಿಂಟ್‌ ಮತ್ತು ಒಂದು ಬಲ್ಬ್ ಅಳವಡಿಸಲು ಎರಡು ಸಾವಿರ ರೂ. ಪಡೆಯಲಾಗಿದೆ. ಅದೇ ರೀತಿ ಕುಂದೂರಿನ ಕೆ.ಆರ್‌.ನಾಗೇಶ್‌, ಕಿಟ್ಟು, ಚಿಮ್ಮನ ಕೊಡಿಗೆಯ ಮಂಜುನಾಥ್‌ ಸೇರಿದಂತೆ ಹಲವರು ಈ ಕುರಿತು ಆಕ್ರೋಶ ವ್ಯಕ್ತಪಡಿಸಿದರು.

ವಸೂಲಿ ಮಾಡಿದ ಹಣವನ್ನು ಶುಕ್ರವಾರ ಪೋಲೀಸ್‌ ಠಾಣೆಯಲ್ಲಿ ಮರಳಿಸುವುದಾಗಿ ಗುತ್ತಿಗೆದಾರ ಹರೀಶ್‌ ಭರವಸೆ ನೀಡಿದರು. ಜಯಪುರ ಗ್ರಾ.ಪಂ. ಸದಸ್ಯ ಎ.ಆರ್‌.ರಾಜೇಶ್‌, ಕೆ.ಸಿ.ಪ್ರವೀಣ್‌ ಕುಮಾರ್‌, ಕಟ್ಟೆಮನೆ ಶ್ರೀನಿವಾಸ್‌, ಸುಧಾಕರ ಹಾಗೂ ಮೆಸ್ಕಾಂ ಅಧಿಕಾರಿಗಳು ಹಾಜರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ