ಆ್ಯಪ್ನಗರ

ಒಂಟಿ ಶಾಲೆಗಳ ವಿಲೀನಕ್ಕೆ ಕ್ರಮ, 6ಕ್ಕಿಂತ 6 ಲಕ್ಷ ವಿದ್ಯಾರ್ಥಿಗಳೇ ಮುಖ್ಯ: ಬಿಸಿ ನಾಗೇಶ್‌

ರಾಜ್ಯದಲ್ಲಿ 2700 ಏಕ ಗ್ರಾಮಗಳಿರುವ ಗ್ರಾಮ ಪಂಚಾಯಿತಿಗಳಿವೆ. ಅಲ್ಲಿ ಐದಾರು ಶಾಲೆಗಳು 200ರಿಂದ 800 ಮೀಟರ್‌ ಅಂತರದಲ್ಲಿರುತ್ತವೆ. ಅಲ್ಲಿ ಮಕ್ಕಳ ಸಂಖ್ಯೆಯೂ ಕಡಿಮೆ ಇದೆ. ಇಂತಹ ಶಾಲೆಗಳನ್ನು ವಿಲೀನಗೊಳಿಸಿ ಗುಣಮಟ್ಟದ ಶಿಕ್ಷಣ ನೀಡುವುದು ನಮ್ಮ ಉದ್ದೇಶ.

Vijaya Karnataka Web 22 Apr 2022, 8:10 pm
ಚಿಕ್ಕಮಗಳೂರು: ರಾಜ್ಯದಲ್ಲಿ ಗುಣಮಟ್ಟದ ಹಾಗೂ ಸ್ಪರ್ಧಾತ್ಮಕತೆಯಿಂದ ಶಿಕ್ಷಣ ನೀಡುವ ಉದ್ದೇಶದಿಂದ ಒಂಟಿ ಶಾಲೆಗಳನ್ನು ವಿಲೀನಗೊಳಿಸುವುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಹೇಳಿದರು.
Vijaya Karnataka Web ಬಿಸಿ ನಾಗೇಶ್‌
ಬಿಸಿ ನಾಗೇಶ್‌


ನಗರದ ಜೂನಿಯರ್‌ ಕಾಲೇಜಿನ ದ್ವಿತೀಯ ಪಿಯು ಪರೀಕ್ಷಾ ಕೇಂದ್ರಕ್ಕೆ ಶುಕ್ರವಾರ ಭೇಟಿ ನೀಡಿ ವಿದ್ಯಾರ್ಥಿಗಳ ಕುಶಲೋಪರಿ ವಿಚಾರಿಸಿದ ಅವರು, ಪರೀಕ್ಷೆಯನ್ನು ಆತ್ಮ ವಿಶ್ವಾಸದಿಂದ ಬರೆಯಲು ಧೈರ್ಯತುಂಬಿದರು.

ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಚಿಕ್ಕಮಗಳೂರಲ್ಲಿ ಆಲ್‌ ದಿ ಬೆಸ್ಟ್‌ ಹೇಳಿದ ಶಿಕ್ಷಣ ಸಚಿವ ಬಿಸಿ ನಾಗೇಶ್‌!

ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ2700 ಏಕ ಗ್ರಾಮಗಳಿರುವ ಗ್ರಾಮ ಪಂಚಾಯಿತಿಗಳಿವೆ. ಅಲ್ಲಿ ಐದಾರು ಶಾಲೆಗಳು 200ರಿಂದ 800 ಮೀಟರ್‌ ಅಂತರದಲ್ಲಿರುತ್ತವೆ. ಅಲ್ಲಿ ಮಕ್ಕಳ ಸಂಖ್ಯೆಯೂ ಕಡಿಮೆ ಇದೆ. ಇಂತಹ ಶಾಲೆಗಳನ್ನು ವಿಲೀನಗೊಳಿಸಿ ಗುಣಮಟ್ಟದ ಶಿಕ್ಷಣ ನೀಡುವುದು ನಮ್ಮ ಉದ್ದೇಶ. ಇದು ಮಾದರಿ ಶಾಲೆಯ ಕಲ್ಪನೆಯೂ ಹೌದು ಎಂದರು.

ಕನ್ನಡ ಮಾತ್ರ ಅಲ್ಲ, ಉರ್ದು, ತಮಿಳು, ಮರಾಠಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇದ್ದರೆ ವಿಲೀನಗೊಳಿಸುತ್ತೇವೆ. ಉರ್ದು ಶಾಲೆ ಮುಚ್ಚುವ ಚಿಂತನೆ ಇಲ್ಲಎಂದು ಸ್ಪಷ್ಟಪಡಿಸಿದರು.

ಪಿಯು ಪರೀಕ್ಷೆ ಸಂಬಂಧಿಸಿದಂತೆ ಮಕ್ಕಳು ತುಂಬಾ ವಿಶ್ವಾಸದಲ್ಲಿದ್ದಾರೆ. ರಾಜ್ಯದಲ್ಲಿ ಬಾಲಕರು, ಬಾಲಕಿಯರು ಸಮಪಾಲು ಸಂಖ್ಯೆಯಲ್ಲಿ ಬರೆಯುತ್ತಿದ್ದಾರೆ. ಅಧಿಕಾರಿಗಳ ಮೇಲೆ ವಿಶ್ವಾಸವಿದೆ. ಪರೀಕ್ಷೆ ಉತ್ತಮವಾಗಿ ನಡೆಯುತ್ತದೆ ಎಂದರು.

ಸಚಿವರ ಜತೆ ಜಿಲ್ಲಾಧಿಕಾರಿ ಕೆ.ಎನ್‌.ರಮೇಶ್‌, ಎಸ್ಪಿ ಎಂ.ಎಚ್‌.ಅಕ್ಷಯ್‌, ಡಿಡಿಪಿಯು ಮತ್ತಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

6 ಕ್ಕಿಂತ 6 ಲಕ್ಷ ಮಕ್ಕಳ ಹಿತ ಮುಖ್ಯ

ಉಡುಪಿಯಲ್ಲಿ6 ವಿದ್ಯಾರ್ಥಿಗಳು ಹಿಜಾಬ್‌ ಧರಿಸಲು ಅವಕಾಶ ನೀಡಿದಲ್ಲಿ ಪರೀಕ್ಷೆಗೆ ಹಾಜರಾಗುತ್ತೇವೆ ಎಂದಿರುವ ಬಗ್ಗೆ ಕೇಳಿದ ಪ್ರಶ್ನೆಗೆ,ಹಿಜಾಬ್‌ ಜಗಳದ ನಡುವೆಯೂ ಆ ಸಮುದಾಯದ ಶೇ .98ರಷ್ಟು ವಿದ್ಯಾರ್ಥಿಗಳು ಹಿಜಾಬಿಲ್ಲದೆ ತರಗತಿಗೆ ಹಾಜರಾಗಿ ಪರೀಕ್ಷೆ ಬರೆಯುತ್ತಿದ್ದಾರೆ.ಆದರೆ, ಕೆಲ ವಿದ್ಯಾರ್ಥಿಗಳು ಯಾರದ್ದೋ ಮಾತಿನಿಂದ ಪ್ರೇರಿತರಾಗಿ ಪರೀಕ್ಷೆ ಪ್ರವೇಶ ಪತ್ರ ಪಡೆದಿಲ್ಲ. ಇಲಾಖೆ ಪ್ರವೇಶ ಪತ್ರ ಕೊಡಲು ಇಂದಿಗೂ ಸಿದ್ಧವಿದೆ.ನಮ್ಮ ಕಡೆಯಿಂದ ಪರೀಕ್ಷೆಗೆ ಬರಲು ಏನು ಮಾಡಬೇಕು ಮಾಡಿದ್ದೇವೆ. ಬಲವಂತದಿಂದ ಪರೀಕ್ಷೆಗೆ ಕರೆತರಲಾಗದು. 6 ಮಕ್ಕಳಿಗಿಂತ ನಮಗೆ 6 ಲಕ್ಷ ಮಕ್ಕಳು ಮುಖ್ಯ ಎಂದರು.

ದ್ವಿತೀಯ ಪಿಯುಸಿ ಪರೀಕ್ಷೆ; ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಿರಿ; ಶುಭಹಾರೈಸಿದ ಬಸವರಾಜ ಬೊಮ್ಮಾಯಿ

ದ್ವಿತೀಯ ಪಿಯು ಪರೀಕ್ಷೆ ಸುಸೂತ್ರ

ಜಿಲ್ಲೆಯಲ್ಲಿಆರಂಭವಾಗಿರುವ ದ್ವಿತೀಯ ಪಿಯು ಪರೀಕ್ಷೆ ಶುಕ್ರವಾರ ಸುಸೂತ್ರವಾಗಿ ನಡೆಯಿತು. ಮೊದಲ ದಿನ ವ್ಯವಹಾರ ಅಧ್ಯಯನ ಹಾಗೂ ತರ್ಕಶಾಸ್ತ್ರ ವಿಷಯಗಳ ಬಗ್ಗೆ ಪರೀಕ್ಷೆ ನಡೆಯಿತು. ಜಿಲ್ಲೆಯಲ್ಲಿ ಶುಕ್ರವಾರದ ಪರೀಕ್ಷೆಗೆ 3481 ಅಭ್ಯರ್ಥಿಗಳು ನೋಂದಾಯಿಸಿದ್ದು, ಈ ಪೈಕಿ 3324 ಮಂದಿ ಹಾಜರಾಗಿದ್ದು, 157 ಮಂದಿ ಗೈರುಹಾಜರಾಗಿದ್ದರು ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ. ಜಿಲ್ಲೆಯ ವಿವಿದೆಡೆ ತೆರೆದಿದ್ದ 18 ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ