ಆ್ಯಪ್ನಗರ

ಗಗನಮುಖಿಯಾದ ತರಕಾರಿ ಬೆಲೆ

ವಾರದಿಂದ ತರಕಾರಿ ಬೆಲೆ ಗಗನಮುಖಿಯಾಗಿದ್ದು, ಸಂಕ್ರಾಂತಿ ಹಬ್ಬ ಗ್ರಾಹಕರಿಗೆ ತುಟ್ಟಿಯಾಗಿದೆ.

Vijaya Karnataka 15 Jan 2019, 9:33 pm
ಶೃಂಗೇರಿ : ವಾರದಿಂದ ತರಕಾರಿ ಬೆಲೆ ಗಗನಮುಖಿಯಾಗಿದ್ದು, ಸಂಕ್ರಾಂತಿ ಹಬ್ಬ ಗ್ರಾಹಕರಿಗೆ ತುಟ್ಟಿಯಾಗಿದೆ.
Vijaya Karnataka Web skyrocket vegetable price
ಗಗನಮುಖಿಯಾದ ತರಕಾರಿ ಬೆಲೆ


ಪಟ್ಟಣದಲ್ಲಿ ಸೋಮವಾರ ಸಂತೆ ದಿನವಾಗಿದ್ದು,ತರಕಾರಿ ದಾಸ್ತಾನು ಸಾಕಷ್ಟು ಪ್ರಮಾಣದಲ್ಲಿ ಬಂದಿದ್ದರೂ,ದರ ಏರಿಕೆ ಬಿಸಿ ಮಾತ್ರ ಗ್ರಾಹಕರಿಗೆ ಚುರುಕು ಮುಟ್ಟಿಸಿತ್ತು. ಬಹುತೇಕ ತರಕಾರಿ ದರ ರೂ.30 ಆಸುಪಾಸಿನಲ್ಲಿದ್ದು, ಟೊಮೋಟೋ ದರ ರೂ.50 ನ್ನು ದಾಟಿದೆ. ಸಂತೆಯ ದಿನವೇ ತರಕಾರಿ ವಹಿವಾಟು ಹೆಚ್ಚು ನಡೆಯುತ್ತಿದೆ. ತಾಲೂಕಿಗೆ ಬಹುತೇಕ ಚಿಕ್ಕಮಗಳೂರು,ಬೇಲೂರಿನಿಂದ ತರಕಾರಿ ಬರುತ್ತಿದೆ. ಭತ್ತದ ಕೊಯಿಲಿನ ನಂತರ ತಾಲೂಕಿನ ಕೆಲವೆಡೆ ಅಲ್ಪ ಮಟ್ಟದ ತರಕಾರಿ ಬೆಳೆಯಲಾಗುತ್ತಿದೆ. ತೊಂಡೆ,ಬಸಳೆ,ಹರಿವೆ ಮುಂತಾದ ತರಕಾರಿಯನ್ನು ಇಲ್ಲಿ ಬೆಳೆಯಲಾಗುತ್ತಿದೆ. ಸೊಪ್ಪುನ ದರ ಬೇರೆ ತರಕಾರಿಗೆ ಹೋಲಿಸಿದರೆ ಕಡಿಮೆ ದರ ಕಡಿಮೆ ಇದೆ.

ಬೇಲೂರಿನ ತರಕಾರಿ ವ್ಯಾಪಾರಿ ವೆಂಕಟೇಶ್‌ ದರ ಏರಿಕೆ ಬಗ್ಗೆ ಮಾತನಾಡಿ,ಈಗ ರೈತರ ಜಮೀನಿನಲ್ಲಿ ನಾವು ಕೊಳ್ಳುವ ದರದಲ್ಲಿ ಏರಿಕೆಯಾಗಿದೆ. ಬೆಳೆ ಕಡಿಮೆ ಇರುವುದು, ಚಳಿ ಹೆಚ್ಚಾಗಿರುವುದು ಬೆಳೆ ಕುಸಿತಕ್ಕೆ ಕಾರಣ. ತರಕಾರಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ಬಂದರೆ ದರ ಇಳಕೆಯಾಗಲಿದೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ