ಆ್ಯಪ್ನಗರ

ಸಮಾಜ ಸೇವೆ ಸರ್ವರ ಜವಾಬ್ದಾರಿ

ಸಮಾಜದಲ್ಲಿ ಸೇವೆ ಮಾಡುವುದು ಯಾವುದೇ ಒಂದು ಧರ್ಮಕ್ಕೆ ಸೀಮಿತವಲ್ಲ. ಸರ್ವರೂ ಸಮಾಜ ಸೇವೆಯ ಜವಾಬ್ದಾರಿ ನಿರ್ವಹಿಸಬೇಕು ಎಂದು ಮಲೆನಾಡು ಕ್ರೈಸ್ತರ ಅಭಿವೃದ್ಧಿ ಸಂಘದ ಅಧ್ಯಕ್ಷ ರೂಬೆನ್‌ ಮೊಸೆಸ್‌ ಹೇಳಿದರು.

Vijaya Karnataka 30 Nov 2018, 5:00 am
ಚಿಕ್ಕಮಗಳೂರು: ಸಮಾಜದಲ್ಲಿ ಸೇವೆ ಮಾಡುವುದು ಯಾವುದೇ ಒಂದು ಧರ್ಮಕ್ಕೆ ಸೀಮಿತವಲ್ಲ. ಸರ್ವರೂ ಸಮಾಜ ಸೇವೆಯ ಜವಾಬ್ದಾರಿ ನಿರ್ವಹಿಸಬೇಕು ಎಂದು ಮಲೆನಾಡು ಕ್ರೈಸ್ತರ ಅಭಿವೃದ್ಧಿ ಸಂಘದ ಅಧ್ಯಕ್ಷ ರೂಬೆನ್‌ ಮೊಸೆಸ್‌ ಹೇಳಿದರು.
Vijaya Karnataka Web social service is responsible
ಸಮಾಜ ಸೇವೆ ಸರ್ವರ ಜವಾಬ್ದಾರಿ


ಮಲೆನಾಡು ಕ್ರೈಸ್ತರ ಅಭಿವೃದ್ಧಿ ಸಂಘದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕ್ರೈಸ್ತರು ಶಿಕ್ಷಣ, ಆರೋಗ್ಯ, ಸಮಾಜ ಸೇವೆ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ. ಮತ್ತಷ್ಟು ಜನ ಸೇವಾ ಕಾರ‍್ಯಗಳಲ್ಲಿ ಕೈಜೋಡಿಸಬೇಕು. ಕೊಡಗು, ಕೇರಳ ಪ್ರವಾಹ ನಿರಾಶ್ರಿತರಿಗೆ ಸದಸ್ಯರು ನೆರವು ನೀಡಿದ್ದರಿಂದ ಉತ್ತಮ ಸೇವೆ ಒದಗಿಸಲು ಸಾಧ್ಯವಾಯಿತು ಎಂದರು.

ಮಲೆನಾಡು ಕ್ರೈಸ್ತ ಸಮಾಜ ಸೇವಾ ಪ್ರಶಸ್ತಿ ನೀಡಲು ಸಂಘದ ಕಾರ‍್ಯಕಾರಿ ಸಭೆಯಲ್ಲಿ ನಿರ್ಧರಿಸಲಾಗಿದೆ. ಈ ಸಾಲಿನ ಪ್ರಶಸ್ತಿಯನ್ನು ತುಮಕೂರು ಸಿದ್ದಗಂಗಾ ಮಠದ ಶ್ರೀಶಿವಕುಮಾರ ಸ್ವಾಮೀಜಿಗಳಿಗೆ ನೀಡಲು ತೀರ್ಮಾನಿಸಲಾಗಿದೆ. ಜಿಲ್ಲೆಯ ಸಂಕ್ಷಿಪ್ತ ಮಾಹಿತಿ ಇರುವ ಕೈಪಿಡಿಯನ್ನು ಸದಸ್ಯರ ಸಹಕಾರದೊಂದಿಗೆ ಮಾಡಲಾಗುವುದು ಎಂದು ಹೇಳಿದರು.

ವಿಕಲಚೇತನ ಬ್ರಿಜೇಶ್‌ ಅವರಿಗೆ ತ್ರಿಚಕ್ರ ಬೈಸಿಕಲ್‌ನ್ನು ಸಂಘದ ನಿರ್ದೇಶಕರ ನೆರವಿನೊಂದಿಗೆ ವಿತರಿಸಲಾಯಿತು. ಪ್ರಧಾನ ಕಾರ‍್ಯದರ್ಶಿ ಜಾರ್ಜ್‌ ಡಿಸೋಜ ವಾರ್ಷಿಕ ವರದಿ ಮಂಡಿಸಿದರು. ಖಜಾಂಚಿ ಪಿ.ಜೆ.ಫ್ರಾನ್ಸಿಸ್‌ ಲೆಕ್ಕಪತ್ರ ಮಂಡಿಸಿದರು. ಸಂಘದ ಮಾಜಿ ಅಧ್ಯಕ್ಷ ಜೇಮ್ಸ್‌ ಡಿಸೋಜ ಅನಿಸಿಕೆ ಹಂಚಿಕೊಂಡರು.

ಸಂಘದ ಉಪಾಧ್ಯಕ್ಷ ಸಿ.ಎಂ.ಜಾರ್ಜ್‌, ಸುರೇಖಾ ಸಂಪತ್‌ರಾಜ್‌, ಸಹ ಕಾರ‍್ಯದರ್ಶಿ ಕಿರಣ್‌ ಡಿಸೋಜ, ದೀಪಕ್‌ ಸಾಲ್ಡಾನ, ನಿರ್ದೇಶಕರಾದ ಫೆಲಿಕ್ಸ್‌ ಸಿಕ್ವೇರಾ, ರೊನಾಲ್ಡ್‌ ಸೆರಾವೊ, ಡೆನ್ನಿಸ್‌ ಫೆರ್ನಾಂಡಿಸ್‌, ಝಿನೊ ಪೆರೊ, ಲೀನಾ ಡೇಸಾ, ನವೀನ್‌ ಪೆರೇರಾ, ಸಿಲ್ವಸ್ಟರ್‌ ಹಾಜರಿದ್ದರು. ನಿರ್ದೇಶಕರಾದ ಸತ್ಯರಾಜ್‌ ಸ್ವಾಗತಿಸಿ, ಸ್ಟಿಫನ್‌ ಶಶಿಕಾಂತ್‌ ನಿರೂಪಿಸಿದರು. ಕ್ರಿಸ್ಟೋಫರ್‌ ಜಾರ್ಜ್‌ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ