ಆ್ಯಪ್ನಗರ

ವೀರಶೈವ ಸಮಾಜದಿಂದ ಸಮ ಸಮಾಜ ನಿರ್ಮಾಣ

ಸಮಸಮಾಜದ ನಿರ್ಮಾಣವೇ ವೀರಶೈವ ಮಹಾಸಭಾದ ಉದ್ದೇಶ ಎಂದು ಶಾಸಕ,ವೀರಶೈವ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಈಶ್ವರ್‌ ಖಂಡ್ರೆ ಹೇಳಿದರು.

Vijaya Karnataka 15 Oct 2018, 5:00 am
ಚಿಕ್ಕಮಗಳೂರು :ಸಮಸಮಾಜದ ನಿರ್ಮಾಣವೇ ವೀರಶೈವ ಮಹಾಸಭಾದ ಉದ್ದೇಶ ಎಂದು ಶಾಸಕ,ವೀರಶೈವ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಈಶ್ವರ್‌ ಖಂಡ್ರೆ ಹೇಳಿದರು.
Vijaya Karnataka Web CKM-14rudrap2


ಅಖಿಲ ಭಾರತ ವೀರಶೈವ ಮಹಾಸಭಾದಿಂದ ನಗರದ ರೇಣುಕಾಚಾರ್ಯ ಸಮುದಾಯ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಎಸ್‌ಎಸ್‌ಎಲ್‌ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. 12ನೇ ಶತಮಾನದ ಬಸವಾದಿ ಶರಣರು ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂದು ಹೇಳಿರುವಂತೆ ಜಾತಿ, ಧರ್ಮ ಮೀರಿದ ಸಮಸಮಾಜ ನಿರ್ಮಾಣಕ್ಕೆ ಅಖಿಲ ಭಾರತ ವೀರಶೈವ ಮಹಾಸಭಾ ಕಾರ್ಯ ನಿರ್ವಹಿಸುತ್ತಿದೆ ಎಂದರು.

ಪ್ರತಿಯೊಂದು ಸಮುದಾಯವೂ ತನ್ನದೇ ಆದ ಮಠಮಾನ್ಯಗಳ ಮೂಲಕ ಧರ್ಮ ಪ್ರಚಾರ ಮಾಡುತ್ತವೆ. ಆದರೆ, ವೀರಶೈವ ಸಮಾಜವೂ ಧರ್ಮಪ್ರಚಾರದ ಜತೆಗೆ ಎಲ್ಲ ಸಮುದಾಯದ ವಿದ್ಯಾರ್ಥಿಗಳಿಗೆ ವಿದ್ಯೆಯ ಜತೆಗೆ ಅನ್ನದಾಸೋಹದ ನೀಡಿ ಸಂಸ್ಕಾರ ನೀಡಿ ಜ್ಞಾನ ಬೆಳೆಸುವ ಕೆಲಸ ಮಾಡುತ್ತಿದೆ. ಯುವ ಜನತೆ ಈ ದೇಶದ ಸಂಪನ್ಮೂಲ, ದೇಶ ವಿದೇಶದಲ್ಲಿ ಅವರು ಸೇವೆ ಸಲ್ಲಿಸುತ್ತಿದ್ದಾರೆ. ಅವರಲ್ಲಿರುವ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಲಾಗುತ್ತಿದೆ ಎಂದರು.

ಪ್ರಸ್ತುತ ದಿನದಲ್ಲಿ ಸಾಮಾಜಿಕ ,ರಾಜಕೀಯ ಹಾಗೂ ಧಾರ್ಮಿಕ ಕ್ಷೇತ್ರವೂ ಕಲುಷಿತಗೊಳ್ಳುತ್ತಿದೆ. ಮಾನವೀಯ, ನೈತಿಕ ಮೌಲ್ಯ ಅದಃಪತನ ವಾಗುತ್ತಿವೆ. ಆಧುನಿಕ ಯುಗದಲ್ಲಿ ಪಾಶ್ಚಿಮಾತ್ಯ ರಾಷ್ಟ್ರದ ಸಂಸ್ಕೃತಿ, ಅನುಕರಣೆ ಮಾಡಿ ಯುವ ಸಮುದಾಯ ದಾರಿ ತಪ್ಪುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಸಮಾಜದ ಆಧಾರಸ್ಥಂಭವಾಗಿರುವ ಯುವ ಜನತೆಗೆ ಮೇಲೆ ಬಹಳಷ್ಟು ಜವಬ್ದಾರಿ ಇದೆ ಎಂದು ಹೇಳಿದರು.

ಮಾನವೀಯ , ನೈತಿಕ ಮೌಲ್ಯ ಬೆಳೆಸಿಕೊಳ್ಳಬೇಕಾದರೆ ರೇಣುಕಾಚಾರ್ಯರು ಹೇಳಿರುವ ತತ್ವ ಆದರ್ಶಗಳು, 12ನೇ ಶತಮಾನದ ಬಸವಾದಿ ಶರಣರು ನೀಡಿರುವ ವಚನ ಸಾಹಿತ್ಯವನ್ನು ಅಧ್ಯಯನ ಮಾಡುವ ಮೂಲಕ ಉತ್ತಮ ಸಂಸ್ಕಾರ, ಒಳ್ಳೆಯ ವಿಚಾರ ಕಲಿತು ಉತ್ತಮ ದಾರಿಯಲ್ಲಿ ನಡೆಯಬಹುದು. ಸಮಾಜಕ್ಕೆ ದೊಡ್ಡ ಕೊಡುಗೆ ನೀಡಲು ಸಾಧ್ಯ ಎಂದರು. ಹುಲಿಕೆರೆ ದೊಡ್ಡಮಠದ ಶ್ರೀ ವಿರೂಪಾಕ್ಷ ಲಿಂಗ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಅಖಿಲ ಭಾತರ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಎಚ್‌.ಎಂ. ಲೋಕೇಶ್‌ ಅಧ್ಯಕ್ಷ ತೆ ವಹಿಸಿದ್ದರು. ವೀರಶೈವ ಮಹಾಸಭಾದ ಎ.ಎಸ್‌. ದಿವಾಕರ್‌, ಎನ್‌. ಈಶ್ವರಪ್ಪ ಕೋಟೆ, ಪಿ.ಚಂದ್ರಮೌಳಿ, ರೇಣುಕ ಪ್ರಸನ್ನ, ನಟರಾಜ್‌ ಸಾಗರನಹಳ್ಳಿ, ಮಾಜಿ ಶಾಸಕ ಎಸ್‌.ಎಂ. ನಾಗರಾಜ್‌, ಪ್ರಗತಿಪರ ಕೃಷಿಕ ಚಂದ್ರಶೇಖರ್‌ ನಾರಣಾಪುರ, ರವೀಶ್‌ಬಸಪ್ಪ, ಓಂಕಾರಸ್ವಾಮಿ, ವೀರೇಶ್‌, ಬೊಮ್ಮನಲಿಂಗೇಗೌಡ ಹಾಜರಿದ್ದರು. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.

---------------
ವೀರಶೈವ ಧರ್ಮಕ್ಕೆ ವಿಶಿಷ್ಟ ಸ್ಥಾನ, ಸಂಸ್ಕೃತಿ ಇದೆ. ಸುಧೀರ್ಘ ಪರಂಪರೆ ಇದೆ. ಮಾನವ ಧರ್ಮದಿಂದ ವಿಶ್ವಕ್ಕೆ ಶಾಂತಿ, ಎಲ್ಲರಿಗೂ ಒಳ್ಳೇಯದನ್ನು ಬಯಸುವ ಸಮಾಜ ವೀರಶೈವ ಲಿಂಗಾಯುತ ಸಮುದಾಯ. 12ನೇ ಶತಮಾನದಲ್ಲಿ ಸಾಮಾಜಿಕ, ಧಾರ್ಮಿಕ ಕ್ರಾಂತಿ ವಿಶ್ವಕ್ಕೆ ಮಾದರಿ. ಸಮಾಜದಲ್ಲಿರುವ ಸಂಘ ಸಂಸ್ಥೆಗಳು, ಮಠಮಾನ್ಯಗಳು ದೇಶ,ಸಮಾಜಕ್ಕಾಗಿ ಸಾಮಾಜಿಕ,ಆರ್ಥಿಕ, ಶೈಕ್ಷ ಣಿಕ, ಧಾರ್ಮಿಕ ಕ್ಷೇತ್ರದಲ್ಲಿ ಅಪಾರ ಕೊಡುಗೆ ನೀಡಿವೆ. ಎಲ್ಲದನ್ನೂ ಅಪ್ಪಿಕೊಂಡು ಒಪ್ಪಿಕೊಳ್ಳುವ ಸಮಾಜ ಇದ್ದರೆ ಅದು ವೀರಶೈವ ಸಮಾಜ.

-ಈಶ್ವರ್‌ ಖಂಡ್ರೆ ,ಶಾಸಕ,ವೀರಶೈವ ಮಹಾಸಭಾದ ಪ್ರಧಾನ ಕಾರ್ಯದರ್ಶಿ.

-----------

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ