ಸಿ.ಕೆ.ಮೂರ್ತಿ ಕಡೂರು: ಪಟ್ಟಣದ ಪ್ರಮುಖ ಮತ್ತು ವಿವಿಧ ಬಡಾವಣೆ ರಸ್ತೆಗಳ ಮಗ್ಗುಲಲ್ಲಿ ಕಟ್ಟಡ ನಿರ್ಮಾಣದ ಘನತಾಜ್ಯ, ಕಸ ಕಡಿಯನ್ನು ಗುಡ್ಡೆ ಹಾಕುತ್ತಿರುವುದು ಪಟ್ಟಣದ ಸೌಂದರ್ಯಕ್ಕೆ ಅಡ್ಡಿಯಾಗಿದ್ದು, ಸಾರ್ವಜನಿಕರಿಗೂ ಕಿರಿಕಿರಿ ಉಂಟು ಮಾಡಿದೆ.
ರಾಜ್ಯ ಹೆದ್ದಾರಿಯಾದ ಕಡೂರಿನಿಂದ ಕೊತ್ತಿಗೆರೆ ಗೇಟ್ವರೆಗಿನ ರಸ್ತೆಯನ್ನು ಹಿಂದಿನ ಶಾಸಕ ವೈ.ಎಸ್.ವಿ.ದತ್ತ ಅವರ ಅಧಿಕಾರ ಅವಧಿಯಲ್ಲಿ ನಿರ್ಮಿಸಿದ್ದು, ಇದೀಗ ಈ ರಸ್ತೆಯಲ್ಲಿ ಮಲ್ಲೇಶ್ವರ ಗ್ರಾಮದ ವರೆಗಿನ 2 ಕಿ.ಮೀ. ಉದ್ದಕ್ಕೆ ಅಕ್ಕ ಪಕ್ಕದಲ್ಲಿ ಕಟ್ಟಡ ನಿರ್ಮಾಣಕ್ಕೆ ಬಳಸಿದ ಇಟ್ಟಿಗೆ, ಮಣ್ಣು ಮತ್ತಿತರ ಕಸ ತಂದು ಸುರಿಯಲಾಗುತ್ತಿದೆ. ಇದು ರಸ್ತೆ ಸಂಚಾರಕ್ಕೆ ಅಪಾಯಕಾರಿಯಾಗಿ ಪರಿಣಮಿಸಿದೆ.
ಇದೇ ರೀತಿ ಚಿಕ್ಕಮಗಳೂರು ಸಂಪರ್ಕದ ಅಂಡರ್ಬ್ರಿಡ್ಜ್ ರಸ್ತೆಯಲ್ಲಿ ಸಾಮಾಜಿಕ ಅರಣ್ಯ ಇಲಾಖೆ ಆಜುಬಾಜಿನಲ್ಲಿ ಹಾಗೂ ಕೆ.ಎಚ್.ಮುದಿಯಪ್ಪ ಬಡಾವಣೆ ಮತ್ತು ದೊಡ್ಡಪಟ್ಟಣಗೆರೆ ಸೇರಿದಂತೆ ವಿವಿಧ ಗ್ರಾಮಗಳಿಗೆ ತೆರಳುವ ರಸ್ತೆಯಲ್ಲಿಯೂ ಕಿಲೋಮೀಟರ್ಗಟ್ಟಲೆ ದೂರದವರೆಗೆ ಎರಡೂ ಬದಿಯಲ್ಲಿ ಕಟ್ಟಡದ ಘನತಾಜ್ಯವನ್ನು ಸುರಿಯಲಾಗುತ್ತಿದೆ. ಇಲ್ಲೂ ಸಹ ಜನರ ತಿರುಗಾಟಕ್ಕೆ ಅಡ್ಡಿಯಾಗಿದೆ.
ಪುರಸಭೆ ಕಸವನ್ನೂ ಕೂಡ ಕೆಲವೊಮ್ಮೆ ಪಟ್ಟಣ ಹೊರ ವಲಯದಲ್ಲಿ ವಿವಿಧ ರಸ್ತೆಗಳ ಬದಿಯಲ್ಲಿ ಟ್ರ್ಯಾಕ್ಟರ್ನಿಂದ ಸುರಿಯುತ್ತಿದ್ದು, ಅರಸೀಕೆರೆ ರಸ್ತೆಯಲ್ಲಿರುವ ತಂಗಲಿ ಹಳ್ಳದ ಬಳಿ ಇಂತಹ ಕಸದ ರಾಶಿಯೇ ಕಾಣುತ್ತದೆ. ಈ ಕಸದ ರಾಶಿಯ ಬಳಿಯೇ ದೀಕ್ಷಾ ಶಾಲೆ, ಭಾರತ್ ಪೆಟ್ರೋಲಿಯಂ ಬಂಕ್ ಜತೆಗೆ ಎರಡು ರೆಸ್ಟೋರೆಂಟ್ಸ್ ಕೂಡ ಇವೆ. ಜನರಿಗೆ ತೀವ್ರ ತೊಂದರೆಯನ್ನು ಉಂಟುಮಾಡಿದೆ.
ಈ ರೀತಿ ಘನತಾಜ್ಯ ಸುರಿಯುವುದರಿಂದ ಗಾಳಿ ಬಂದಾಗ ಧೂಳು ಎದ್ದು ದ್ವಿಚಕ್ರ ವಾಹನ ಸವಾರರ ಕಣ್ಣಿಗೆ ರಾಚುವ ಅಪಾಯವಿದೆ. ಮಳೆ ಬಂದಾಗ ಹಾಕಿದ ಮಣ್ಣು ಕೆಸರುಮಯವಾಗಿ ರಸ್ತೆ ಸಂಚಾರಕ್ಕೆ ಮಾರಕವಾಗಲಿದೆ. ಪುರಸಭೆ ಅಧಿಕಾರಿಗಳು, ಪೊಲೀಸರು ಘನತ್ಯಾಜ್ಯ ಸುರಿಯುವವರನ್ನು ಪತ್ತೆಹಚ್ಚಿ ಶಿಸ್ತುಕ್ರಮ ಕೈಗೊಳ್ಳಬೇಕಿದೆ. ನೋಟಿಸ್ ನೀಡುವ ಇಲ್ಲವೇ, ದಂಡ ವಿಧಿಸುವ ಪ್ರಕ್ರಿಯೆ ನಡೆಸಿದರೆ ಸಮಸ್ಯೆಗೆ ಒಂದಿಷ್ಟು ಪರಿಹಾರ ಕಂಡುಕೊಳ್ಳಲು ಸಹಕಾರಿಯಾಗಲಿದೆ.
ರಾಜ್ಯ ಹೆದ್ದಾರಿಯಾದ ಕಡೂರಿನಿಂದ ಕೊತ್ತಿಗೆರೆ ಗೇಟ್ವರೆಗಿನ ರಸ್ತೆಯನ್ನು ಹಿಂದಿನ ಶಾಸಕ ವೈ.ಎಸ್.ವಿ.ದತ್ತ ಅವರ ಅಧಿಕಾರ ಅವಧಿಯಲ್ಲಿ ನಿರ್ಮಿಸಿದ್ದು, ಇದೀಗ ಈ ರಸ್ತೆಯಲ್ಲಿ ಮಲ್ಲೇಶ್ವರ ಗ್ರಾಮದ ವರೆಗಿನ 2 ಕಿ.ಮೀ. ಉದ್ದಕ್ಕೆ ಅಕ್ಕ ಪಕ್ಕದಲ್ಲಿ ಕಟ್ಟಡ ನಿರ್ಮಾಣಕ್ಕೆ ಬಳಸಿದ ಇಟ್ಟಿಗೆ, ಮಣ್ಣು ಮತ್ತಿತರ ಕಸ ತಂದು ಸುರಿಯಲಾಗುತ್ತಿದೆ. ಇದು ರಸ್ತೆ ಸಂಚಾರಕ್ಕೆ ಅಪಾಯಕಾರಿಯಾಗಿ ಪರಿಣಮಿಸಿದೆ.
ಇದೇ ರೀತಿ ಚಿಕ್ಕಮಗಳೂರು ಸಂಪರ್ಕದ ಅಂಡರ್ಬ್ರಿಡ್ಜ್ ರಸ್ತೆಯಲ್ಲಿ ಸಾಮಾಜಿಕ ಅರಣ್ಯ ಇಲಾಖೆ ಆಜುಬಾಜಿನಲ್ಲಿ ಹಾಗೂ ಕೆ.ಎಚ್.ಮುದಿಯಪ್ಪ ಬಡಾವಣೆ ಮತ್ತು ದೊಡ್ಡಪಟ್ಟಣಗೆರೆ ಸೇರಿದಂತೆ ವಿವಿಧ ಗ್ರಾಮಗಳಿಗೆ ತೆರಳುವ ರಸ್ತೆಯಲ್ಲಿಯೂ ಕಿಲೋಮೀಟರ್ಗಟ್ಟಲೆ ದೂರದವರೆಗೆ ಎರಡೂ ಬದಿಯಲ್ಲಿ ಕಟ್ಟಡದ ಘನತಾಜ್ಯವನ್ನು ಸುರಿಯಲಾಗುತ್ತಿದೆ. ಇಲ್ಲೂ ಸಹ ಜನರ ತಿರುಗಾಟಕ್ಕೆ ಅಡ್ಡಿಯಾಗಿದೆ.
ಪುರಸಭೆ ಕಸವನ್ನೂ ಕೂಡ ಕೆಲವೊಮ್ಮೆ ಪಟ್ಟಣ ಹೊರ ವಲಯದಲ್ಲಿ ವಿವಿಧ ರಸ್ತೆಗಳ ಬದಿಯಲ್ಲಿ ಟ್ರ್ಯಾಕ್ಟರ್ನಿಂದ ಸುರಿಯುತ್ತಿದ್ದು, ಅರಸೀಕೆರೆ ರಸ್ತೆಯಲ್ಲಿರುವ ತಂಗಲಿ ಹಳ್ಳದ ಬಳಿ ಇಂತಹ ಕಸದ ರಾಶಿಯೇ ಕಾಣುತ್ತದೆ. ಈ ಕಸದ ರಾಶಿಯ ಬಳಿಯೇ ದೀಕ್ಷಾ ಶಾಲೆ, ಭಾರತ್ ಪೆಟ್ರೋಲಿಯಂ ಬಂಕ್ ಜತೆಗೆ ಎರಡು ರೆಸ್ಟೋರೆಂಟ್ಸ್ ಕೂಡ ಇವೆ. ಜನರಿಗೆ ತೀವ್ರ ತೊಂದರೆಯನ್ನು ಉಂಟುಮಾಡಿದೆ.
ಈ ರೀತಿ ಘನತಾಜ್ಯ ಸುರಿಯುವುದರಿಂದ ಗಾಳಿ ಬಂದಾಗ ಧೂಳು ಎದ್ದು ದ್ವಿಚಕ್ರ ವಾಹನ ಸವಾರರ ಕಣ್ಣಿಗೆ ರಾಚುವ ಅಪಾಯವಿದೆ. ಮಳೆ ಬಂದಾಗ ಹಾಕಿದ ಮಣ್ಣು ಕೆಸರುಮಯವಾಗಿ ರಸ್ತೆ ಸಂಚಾರಕ್ಕೆ ಮಾರಕವಾಗಲಿದೆ. ಪುರಸಭೆ ಅಧಿಕಾರಿಗಳು, ಪೊಲೀಸರು ಘನತ್ಯಾಜ್ಯ ಸುರಿಯುವವರನ್ನು ಪತ್ತೆಹಚ್ಚಿ ಶಿಸ್ತುಕ್ರಮ ಕೈಗೊಳ್ಳಬೇಕಿದೆ. ನೋಟಿಸ್ ನೀಡುವ ಇಲ್ಲವೇ, ದಂಡ ವಿಧಿಸುವ ಪ್ರಕ್ರಿಯೆ ನಡೆಸಿದರೆ ಸಮಸ್ಯೆಗೆ ಒಂದಿಷ್ಟು ಪರಿಹಾರ ಕಂಡುಕೊಳ್ಳಲು ಸಹಕಾರಿಯಾಗಲಿದೆ.