ಆ್ಯಪ್ನಗರ

ಮಾನಸ ಸರೋವರಕ್ಕೆ ಹೊರಟ ಎಸ್ಪಿ ಅಣ್ಣಾಮಲೈ

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈ ಉತ್ತರ ಭಾರತದ ಪ್ರಸಿದ್ಧ ಯಾತ್ರಾ ಸ್ಥಳ ಮಾನಸ ಸರೋವರಕ್ಕೆ ಹೊರಟಿದ್ದಾರೆ. ಮುಂದಿನ 21 ದಿನಗಳ ಕಾಲ ಅಣ್ಣಾಮಲೈ ಜಾಗದಲ್ಲಿ ನಕ್ಸಲ್‌ ನಿಗ್ರಹ ದಳದ ಎಸ್ಪಿಯಾಗಿದ್ದ ಲಕ್ಷ್ಮಿಪ್ರಸಾದ್‌ ಕಾರ‍್ಯ ನಿರ್ವಹಿಸಲಿದ್ದಾರೆ.

Vijaya Karnataka 18 Jul 2018, 5:00 am
ಚಿಕ್ಕಮಗಳೂರು: ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈ ಉತ್ತರ ಭಾರತದ ಪ್ರಸಿದ್ಧ ಯಾತ್ರಾ ಸ್ಥಳ ಮಾನಸ ಸರೋವರಕ್ಕೆ ಹೊರಟಿದ್ದಾರೆ. ಮುಂದಿನ 21 ದಿನಗಳ ಕಾಲ ಅಣ್ಣಾಮಲೈ ಜಾಗದಲ್ಲಿ ನಕ್ಸಲ್‌ ನಿಗ್ರಹ ದಳದ ಎಸ್ಪಿಯಾಗಿದ್ದ ಲಕ್ಷ್ಮಿಪ್ರಸಾದ್‌ ಕಾರ‍್ಯ ನಿರ್ವಹಿಸಲಿದ್ದಾರೆ.
Vijaya Karnataka Web sp annamalai who left manasa lake
ಮಾನಸ ಸರೋವರಕ್ಕೆ ಹೊರಟ ಎಸ್ಪಿ ಅಣ್ಣಾಮಲೈ


ಹಾಗಂತ ಎಸ್ಪಿ ಅಣ್ಣಾಮಲೈ ಮಾನಸ ಸರೋವರಕ್ಕೆ ಯಾತ್ರೆ ಕೈಗೊಂಡಿಲ್ಲ. ಬದಲಿಗೆ ರಾಜ್ಯ ಸರಕಾರ ಅವರನ್ನು ಮಾನಸ ಸರೋವರದಲ್ಲಿ ಕರ್ನಾಟಕದ ವಿಶೇಷ ಉಸ್ತುವಾರಿ ಅಧಿಕಾರಿಯನ್ನಾಗಿ ನೇಮಕ ಮಾಡಿದೆ. 21 ದಿನಗಳ ಕಾಲ ಅಣ್ಣಾಮಲೈ ಅಲ್ಲಿ ಕರ್ತವ್ಯ ನಿರ್ವಹಿಸಲಿದ್ದು, ಈ ಅವಧಿಯಲ್ಲಿ ಚಿಕ್ಕಮಗಳೂರು ಎಸ್ಪಿಯಾಗಿ ನಕ್ಸಲ್‌ ನಿಗ್ರಹ ದಳದಲ್ಲಿ ಎಸ್ಪಿಯಾಗಿದ್ದ ಲಕ್ಷ್ಮಿಪ್ರಸಾದ್‌ ಕರ್ತವ್ಯ ನಿರ್ವಹಿಸುತ್ತಾರೆ.

ಸೈಕ್ಲಿಂಗ್‌, ಟ್ರಕ್ಕಿಂಗ್‌ನಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಅಣ್ಣಾಮಲೈ ಇಲಾಖೆಯಿಂದ ಆಯೋಜಿಸುವ ಹಲವು ಕಠಿಣ ತರಬೇತಿಗಳಲ್ಲೂ ಪಾಲ್ಗೊಂಡಿದ್ದಾರೆ. ಪ್ರತಿಕೂಲ ಹವಾಮಾನ, ದುರ್ಗಮ ಹಾದಿಯಲ್ಲಿ ಮಾನಸ ಸರೋವರಕ್ಕೆ ಸಾಗುವ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ರಾಜ್ಯ ಸರಕಾರ ಅಣ್ಣಾಮಲೈ ಅವರನ್ನು ವಿಶೇಷ ಉಸ್ತುವಾರಿ ಅಧಿಕಾರಿಯನ್ನಾಗಿ ನೇಮಕ ಮಾಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ