ಆ್ಯಪ್ನಗರ

ಕಾಫಿ ನಾಡಿಗೆ ಗಾನ ಗಾರುಡಿಗನ ನಂಟು: ತಾನು ಹಾಡಿದ ಕ್ಯಾಸೆಟನ್ನು ಹಣ ಕೊಟ್ಟು‌ ಖರೀದಿಸಿದ್ದರು ಎಸ್‌ಪಿಬಿ!

​​ಮರುದಿನ ಶೃಂಗೇರಿಯ ಕ್ಯಾಸೆಟ್‌ ಅಂಗಡಿಯೊಂದ ರಲ್ಲಿ ತಾವೇ ಹಾಡಿದ್ದ ನಾಗರಾಜ ರಾವ್‌ ಕಲ್ಕಟ್ಟೆ ಸಾಹಿತ್ಯದ 2 ಕ್ಯಾಸೆಟ್‌ಗಳನ್ನು ಹಣ ಕೊಟ್ಟು ಖರೀದಿ ಸಿದ್ದರು. ನೀವೇ ಹಾಡಿರುವ ಕ್ಯಾಸೆಟ್‌ ಸರ್‌.. ಹಣ ಬೇಡವೆಂದರೂ ನನಗೆ ಹಾಡಿದ್ದಕ್ಕೆ ಸಂಭಾವನೆ ಕೊಟ್ಟಿದ್ದಾರೆ. ಇದು ಕ್ಯಾಸೆಟ್‌ನ ಹಣ ಎಂದು ಕೊಟ್ಟು ಖರೀದಿಸಿದ್ದು, ಅವರ ಹೃದಯ ವೈಶಾಲ್ಯಕ್ಕೆ ಹಿಡಿದ ಕನ್ನಡಿಯಾಗಿತ್ತು.

Vijaya Karnataka Web 26 Sep 2020, 12:45 pm
ಚಿಕ್ಕಮಗಳೂರು: ಹಾಡು ಮತ್ತು ವ್ಯಕ್ತಿತ್ವದ ಮೂಲಕವೇ ಕೋಟ್ಯಂತರ ಜನರ ಹೃದಯ ಗೆದ್ದ ಗಾನಗಾರುಡಿಗ ಡಾ.ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಕಾಫಿ ನಾಡಿನೊಂದಿಗೆ ಸಾಕಷ್ಟು ಒಡನಾಟ ಹೊಂದಿದ್ದರು. 2006 ಮೇ 28ರಂದು ಬಾಳೆಹೊನ್ನೂರಿನ ಶ್ರೀಮದ್‌ ರಂಭಾಪುರಿ ಪೀಠಕ್ಕೆ ಆಗಮಿಸಿದ್ದ ಡಾ. ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಮಳೆಯ ಕಾರಣಕ್ಕೆ ಅಂದು ಆಯೋಜಿಸಿದ್ದ ರಸಮಂಜರಿ ಕಾರ‍್ಯಕ್ರಮ ರದ್ದುಗೊಳಿಸಿ ಶೃಂಗೇರಿಯಲ್ಲಿ ವಾಸ್ತವ್ಯ ಮಾಡಿದ್ದರು.
Vijaya Karnataka Web Bala
SP Balasubrahmanyam (File photo)


ಮರುದಿನ ಶೃಂಗೇರಿಯ ಕ್ಯಾಸೆಟ್‌ ಅಂಗಡಿಯೊಂದ ರಲ್ಲಿ ತಾವೇ ಹಾಡಿದ್ದ ನಾಗರಾಜ ರಾವ್‌ ಕಲ್ಕಟ್ಟೆ ಸಾಹಿತ್ಯದ 2 ಕ್ಯಾಸೆಟ್‌ಗಳನ್ನು ಹಣ ಕೊಟ್ಟು ಖರೀದಿ ಸಿದ್ದರು. ನೀವೇ ಹಾಡಿರುವ ಕ್ಯಾಸೆಟ್‌ ಸರ್‌.. ಹಣ ಬೇಡವೆಂದರೂ ನನಗೆ ಹಾಡಿದ್ದಕ್ಕೆ ಸಂಭಾವನೆ ಕೊಟ್ಟಿದ್ದಾರೆ. ಇದು ಕ್ಯಾಸೆಟ್‌ನ ಹಣ ಎಂದು ಕೊಟ್ಟು ಖರೀದಿಸಿದ್ದು, ಅವರ ಹೃದಯ ವೈಶಾಲ್ಯಕ್ಕೆ ಹಿಡಿದ ಕನ್ನಡಿಯಾಗಿತ್ತು.

ಎರಡೂ ದಿನ ಬಾಲಸುಬ್ರಹ್ಮಣ್ಯಂ ಜತೆಗಿದ್ದ ಒಡನಾಟವನ್ನು ಯಕ್ಷಗಾನ ಅಕಾಡೆಮಿ ಸದಸ್ಯ ರಮೇಶ್‌ ಬೇಗಾರ್‌ ಸ್ಮರಿಸುತ್ತಾರೆ. ಮುದ್ದಿನ ಮಾವ ಚಲನಚಿತ್ರದ ಚಿತ್ರೀಕರಣ ಸಂದರ್ಭದಲ್ಲೂ ಬಾಲಸುಬ್ರಹ್ಮಣ್ಯಂ ಶೃಂಗೇರಿ ಯಲ್ಲಿ ವಾಸ್ತವ್ಯ ಹೂಡಿದ್ದರು. ಶೃಂಗೇರಿ ದೇವಾಲಯಕ್ಕೂ ಒಂದೆರಡು ಬಾರಿ ಭೇಟಿ ನೀಡಿದ್ದರು.

ಚಿಕ್ಕಮಗಳೂರು: ರಾತ್ರಿಯಿಡೀ ಮೋರಿಯಡಿ ಬಿದ್ದಿದ್ದರೂ ಬದುಕಿ ಬಂದ ಮಹಿಳೆ

1995 ಮತ್ತು 1997ರಲ್ಲಿಸಾಹಿತಿ ನಾಗರಾಜ ರಾವ್‌ ಕಲ್ಕಟ್ಟೆ ಸಾಹಿತ್ಯದ ಎರಡು ಕ್ಯಾಸೆಟ್‌ಗಳ 14 ಗೀತೆಗಳನ್ನು ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಹಾಡಿದ್ದು, ಮದ್ರಾಸ್‌ನಲ್ಲಿ ರೆಕಾರ್ಡಿಂಗ್‌ ಮಾಡ ಲಾಗಿತ್ತು. ಇದಲ್ಲದೆ ಎದೆ ತುಂಬಿ ಹಾಡುವೆನು ಕಾರ‍್ಯಕ್ರಮದಲ್ಲಿ ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಜತೆ ಹಾಡಿದ ರಶ್ಮಿ ಚಿಕ್ಕಮಗಳೂರು ಸಂಗೀತದಲ್ಲಿ ಅಪಾರ ಆಸಕ್ತಿ ಬೆಳೆಸಿಕೊಳ್ಳಲು ಕಾರಣವಾಯಿತು.

ರೇಡಿಯೊದಲ್ಲೇ ಬಾಂಧವ್ಯ!
ಮಲೆನಾಡು ಭಾಗದಲ್ಲಿ ದೂರದರ್ಶನ ಇಲ್ಲದಿರುವಾಗಲೂ ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಮಾತ್ರ ಕುಗ್ರಾಮ ಗಳನ್ನೂ ತಲುಪಿ ಜನರ ಹೃದಯದಲ್ಲಿ ಶಾಶ್ವತ ಜಾಗ ಪಡೆದುಕೊಂಡಿದ್ದರು. ರೇಡಿಯೋದಲ್ಲಿ ಪ್ರಸಾರ ವಾಗುತ್ತಿದ್ದ ಚಿತ್ರಗೀತೆಗಳಲ್ಲಿಎಸ್‌ಪಿ ಹಾಡಿದ ಗೀತೆಗಳು ಜನರನ್ನು ಮೋಡಿ ಮಾಡಿದ್ದವು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ