ಆ್ಯಪ್ನಗರ

ಶ್ರೀಚಪ್ಪರದಾಂಜನೇಯ ಸ್ವಾಮಿಗೆ ವಿಶೇಷ ಅಲಂಕಾರ

ಪಟ್ಟಣದ ಶ್ರೀ ಚಪ್ಪರದಾಂಜನೇಯಸ್ವಾಮಿ ದೇವಸ್ಥಾನ ಸೇವಾ ಸಮಿತಿ ಶನಿವಾರ ಶ್ರೀ ರಾಮೋತ್ಸವದ ಅಂಗವಾಗಿ ಶ್ರೀ ಚಪ್ಪರದಾಂಜನೇಯ ಸ್ವಾಮಿಗೆ ವಿಶೇಷ ಅಲಂಕಾರದೊಂದಿಗೆ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮ ನೆರವೇರಿಸಿತು.

Vijaya Karnataka 1 Apr 2018, 5:00 am
ಶೃಂಗೇರಿ : ಪಟ್ಟಣದ ಶ್ರೀ ಚಪ್ಪರದಾಂಜನೇಯಸ್ವಾಮಿ ದೇವಸ್ಥಾನ ಸೇವಾ ಸಮಿತಿ ಶನಿವಾರ ಶ್ರೀ ರಾಮೋತ್ಸವದ ಅಂಗವಾಗಿ ಶ್ರೀ ಚಪ್ಪರದಾಂಜನೇಯ ಸ್ವಾಮಿಗೆ ವಿಶೇಷ ಅಲಂಕಾರದೊಂದಿಗೆ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮ ನೆರವೇರಿಸಿತು.
Vijaya Karnataka Web special decoration for srichaparadanjaneya swami
ಶ್ರೀಚಪ್ಪರದಾಂಜನೇಯ ಸ್ವಾಮಿಗೆ ವಿಶೇಷ ಅಲಂಕಾರ


ಹನುಮ ಜಯಂತಿ ಪ್ರಯುಕ್ತ ಸ್ವಾಮಿಗೆ ಪವಮಾನಭಿಷೇಕ,ಎಳನೀರು ಅಭಿಷೇಕ, ಪಂಚಾಮೃತಭಿಷೇಕ,ವಾಯುಸ್ಥಿತಿ ಅಭಿಷೇಕ ನಡೆಯಿತು. ಶ್ರೀ ರಾಮ ದೇವರ ಜನ್ಮ ಸಂವತ್ಸರ ವಿಳಂಬಿ ಸಂವತ್ಸರವಾಗಿದ್ದು, ಶ್ರೀ ಸ್ವಾಮಿಗೆ ಶ್ರೀಗಂಧದ ಲೇಪನಲಂಕಾರ,ಸಹಸ್ರ ವಿಳೆದೆಲೆ,ಸಹಸ್ರ ಬಾಳೆಹಣ್ಣಿನಲಂಕಾರ, 108 ಶ್ರೀ ಸತ್ಯನಾರಾಯಣ ವ್ರತ,ಪಾನಕ ಸೇವೆ ನಡೆಸಲಾಯಿತು.ಎರಡು ದಿನ ಪಟ್ಟಣದ ಮುಖ್ಯ ರಸ್ತೆಯಲ್ಲಿ ರಾಮೋತ್ಸವ ಹಾಗೂ ಹನುಮೋತ್ಸವ ನಡೆಯಿತು.ರಾಮನಾಮ ಭಜನೆಯೊಂದಿಗೆ ನಗರ ಸಂಕೀರ್ತನೆ,ದೇವರಿಗೆ ಪುಷ್ಪ ತೊಟ್ಟಿಲು ಅಲಂಕಾರ,ರಾಮನಾಮ ಜಪದೊಂದಿಗೆ ಪ್ರಾಕಾರೋತ್ಸವ,ಪ್ರಸಾದ ಹಾಗೂ ಅನ್ನಸಂತರ್ಪಣೆ ನಡೆಯಿತು.

ಎಸ್‌.ವಿ.ದಿವಾಕರಭಟ್‌ ಮತ್ತು ಸುಧಾಕರಭಟ್‌ ಲೋಕ ಕಲ್ಯಾಣಾರ್ಥವಾಗಿ ಪ್ರಾರ್ಥಿಸಿದರು.ಮುಖ್ಯ ಅರ್ಚಕ ಕೇಶವ ಭಟ್‌,ಸೇವಾ ಸಮಿತಿಯ ಅಧ್ಯಕ್ಷ ಎಚ್‌.ಆರ್‌.ಕೃಷ್ಣಮೂರ್ತಿ,ಕಾರ‍್ಯದರ್ಶಿ ಕೃಷ್ಣನಾಯ್ಕ್‌,ಬಿ.ಜಿ.ಮಂಜುನಾಥ್‌,ಶಿವಪ್ರಸಾದ್‌,ಜಯಪ್ರಕಾಶ್‌ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ