ಆ್ಯಪ್ನಗರ

ವಿಜ್ಞಾನಕ್ಕೆ ವಿಶೇಷ ಮಹತ್ವ: ಶಂಕರಮೂರ್ತಿ

ಆಧುನಿಕ ತಂತ್ರಜ್ಞಾನದಲ್ಲಿ ವಿಜ್ಞಾನವು ವಿಶೇಷ ಮಹತ್ವ ಪಡೆದಿದ್ದು, ಇದು ಕೈಗೆ ಸಿಕ್ಕುವ ಕಲೆಯಾಗಿದೆ ಎಂದು ತಾಲೂಕು ದೈಹಿಕ ಶಿಕ್ಷ ಣ ಪರಿವೀಕ್ಷ ಕ ಶಂಕರಮೂರ್ತಿ ತಿಳಿಸಿದರು.

Vijaya Karnataka 30 Jul 2019, 5:00 am
ನರಸಿಂಹರಾಜಪುರ : ಆಧುನಿಕ ತಂತ್ರಜ್ಞಾನದಲ್ಲಿ ವಿಜ್ಞಾನವು ವಿಶೇಷ ಮಹತ್ವ ಪಡೆದಿದ್ದು, ಇದು ಕೈಗೆ ಸಿಕ್ಕುವ ಕಲೆಯಾಗಿದೆ ಎಂದು ತಾಲೂಕು ದೈಹಿಕ ಶಿಕ್ಷ ಣ ಪರಿವೀಕ್ಷ ಕ ಶಂಕರಮೂರ್ತಿ ತಿಳಿಸಿದರು.
Vijaya Karnataka Web special emphasis on science sankaramoorthy
ವಿಜ್ಞಾನಕ್ಕೆ ವಿಶೇಷ ಮಹತ್ವ: ಶಂಕರಮೂರ್ತಿ


ಪಟ್ಟಣದ ಜ್ವಾಲಾಮಾಲಿನಿ ಬಾಲಿಕಾ ಪ್ರೌಢ ಶಾಲೆಯಲ್ಲಿ ಕೊಪ್ಪ,ಶೃಂಗೇರಿ ಹಾಗೂ ನರಸಿಂಹರಾಜಪುರ ತಾಲೂಕುಗಳ ವಿಜ್ಞಾನ ಶಿಕ್ಷ ಕರ ಪ್ರಶ್ನೆ ಪತ್ರಿಕೆ ಕಾರ್ಯಾಗಾರವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು. ವಿಜ್ಞಾನ ನಮ್ಮ ಜ್ಞಾನವನ್ನು ಹೆಚ್ಚಿಸುತ್ತದೆ. ಇಂತಹ ಕಾರ್ಯಾಗಾರ ಹೆಚ್ಚು ಉಪಯುಕ್ತವಾಗಲಿದೆ ಎಂದರು.

ಶಾಲೆ ಮುಖ್ಯಶಿಕ್ಷಕ ಜಿನ ರಾಜೇಂದ್ರ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಪ್ರೌಢ ಶಾಲಾ ಸಹ ಶಿಕ್ಷ ಕರ ಸಂಘದ ಪ್ರತಿನಿಧಿ ಸದಾನಂದ, ಕೊಪ್ಪ ತಾಲೂಕು ಪ್ರೌಢ ಶಾಲೆ ಸಹ ಶಿಕ್ಷ ಕರ ಸಂಘದ ಪದಾಧಿಕಾರಿ ಸಣ್ಣೇಗೌಡ, ಶೃಂಗೇರಿ ತಾಲೂಕು ಸಂಘದ ಅಧ್ಯಕ್ಷ ಶಿವಕುಮಾರ್‌ ಉಪಸ್ಥಿತರಿದ್ದರು. 3 ತಾಲೂಕುಗಳ 41 ವಿಜ್ಞಾನ ಶಿಕ್ಷ ಕರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. 10ನೇ ತರಗತಿ ಪಠ್ಯಪುಸ್ತಕದ 6 ಅಧ್ಯಾಯಗಳ ಕ್ಲಿಷ್ಟ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಯಿತು. ಪ್ರಶ್ನೆ ಪತ್ರಿಕೆಯ ನೀಲ ನಕಾಶೆ ಬಗ್ಗೆ ಗುಂಪು ಚರ್ಚೆನಡೆಸಿ ಪ್ರಶ್ನೆ ಪತ್ರಿಕೆ ಹಾಗೂ ಉತ್ತರ ಪತ್ರಿಕೆಗಳನ್ನು ರಚಿಸಲಾಯಿತು.

ಗುಣಪಾಲ್‌ ಜೈನ್‌ ಸ್ವಾಗತಿಸಿ, ಗಣಪತಿ ತಂತ್ರಿ ನಿರೂಪಿಸಿ, ಪವನಂಜಯ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ