ಆ್ಯಪ್ನಗರ

ಕ್ರೀಡಾ ಮನೋಭಾವ ಸ್ಪೂರ್ತಿದಾಯಕ : ಸಿ.ಟಿ.ರವಿ

ಕ್ರೀಡಾ ಮನೋಭಾವವಿದ್ದಲ್ಲಿ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ಶಾಸಕ ಸಿ.ಟಿ.ರವಿ ಹೇಳಿದರು.

Vijaya Karnataka 23 Dec 2018, 5:00 am
ಚಿಕ್ಕಮಗಳೂರು : ಕ್ರೀಡಾ ಮನೋಭಾವವಿದ್ದಲ್ಲಿ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ಶಾಸಕ ಸಿ.ಟಿ.ರವಿ ಹೇಳಿದರು.
Vijaya Karnataka Web CKM-22RUDRAP1


ಐಡಿಎಸ್‌ಜಿ ಸರಕಾರಿ ಕಾಲೇಜಿನಲ್ಲಿ ಎರಡು ದಿನ ಆಯೋಜನೆಗೊಂಡಿರುವ ಕುವೆಂಪು ವಿಶ್ವವಿದ್ಯಾಲಯದ ಅಂತರ ಕಾಲೇಜು ಪುರುಷರ ಬಾಲ್‌ ಬ್ಯಾಡ್ಮಿಂಟನ್‌ ಪಂದ್ಯಾವಳಿಗೆ ಕಾಲೇಜು ಆವರಣದಲ್ಲಿ ಶುಕ್ರವಾರ ಚಾಲನೆ ನೀಡಿ ಮಾತನಾಡಿ,ಕ್ರೀಡಾ ಮನೋಭಾವದಿಂದ ಸ್ಫೂರ್ತಿಯುತವಾಗಿ ಆಟವಾಡಿ ಆ ಮೂಲಕ ಕ್ರೀಡಾಪಟುಗಳು ತಮ್ಮ ಸಾಮರ್ಥ್ಯ‌ ಪ್ರಕಟಪಡಿಸಿ ನಾಡಿಗೆ ಕೀರ್ತಿ ತರಬೇಕು ಎಂದರು.

ಯುವಸಬಲೀಕರಣ ಮತ್ತು ಕ್ರೀಡಾಇಲಾಖೆಯ ಸಹಾಯಕ ನಿರ್ದೇಶಕಿ ಡಾ.ಎಚ್‌.ಪಿ.ಮಂಜುಳಾ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿ, ಓದುವುದರ ಜತೆಗೆ ಕ್ರೀಡೆಯನ್ನು ಹವ್ಯಾಸವಾಗಿ ರೂಢಿಸಿಕೊಂಡ ಪರಿಣಾಮ ಅಂತರ ಕಾಲೇಜು ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿದೆ ಎಂದರು. ಕ್ರೀಡೆಯನ್ನು ಜೀವನಶೈಲಿಗೆ ಅಳವಡಿಸಿಕೊಳ್ಳಬೇಕು ಎಂದರು. ಇದಕ್ಕೆ ಪೂರಕವಾಗಿ ವಿದ್ಯಾರ್ಥಿಗಳ ನಿರೀಕ್ಷೆ, ಆಶೋತ್ತರದ ಬಗ್ಗೆ ಕ್ರೀಡಾಪಟುಗಳು ಪ್ರಬಂಧ ರಚಿಸಿ ವಾರದೊಳಗೆ ಇಲಾಖೆಗೆ ನೀಡಿದರೆ ಅದನ್ನು ಕಾರ‍್ಯಗತಗೊಳಿಸಲು ಪ್ರಯತ್ನಿಸಬಹುದು ಎಂದ ಡಾ.ಮಂಜುಳಾ, ಉತ್ತಮ ಪ್ರಬಂಧಕ್ಕೆ ನಗದು ಬಹುಮಾನ ನೀಡುವುದಾಗಿ ಪ್ರಕಟಿಸಿದರು.

ಪ್ರಾಂಶುಪಾಲ ಪ್ರೊ.ಟಿ.ಸಿ.ಬಸವರಾಜಪ್ಪ ಅಧ್ಯಕ್ಷ ತೆ ವಹಿಸಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಆಟ ಮತ್ತು ಪಾಠ ಮಹತ್ತರವಾದ ಶೈಕ್ಷ ಣಿಕ ಕಲಿಕೆಯ ಅಂಶಗಳು. ಆಟ ದೈಹಿಕ ಸಾಮರ್ಥ್ಯ‌ ಬೆಳೆಸಿದರೆ, ಪಾಠ ಮಾನಸಿಕಸಾಮರ್ಥ್ಯ‌ ಬೆಳೆಸುತ್ತದೆ. ವ್ಯಕ್ತಿತ್ವ ವಿಕಾಸಕ್ಕೆ ಸದೃಢ ದೇಹ ಮತ್ತು ಮನಸ್ಸು ಅಗತ್ಯ. ಇವೆರಡಕ್ಕೂ ಪೂರ್ವತಯಾರಿ ಪ್ರಮುಖ ಎಂದರು.

ದೈಹಿಕ ಶಿಕ್ಷ ಣ ನಿರ್ದೇಶಕ ಡಾ.ಎಸ್‌.ಎಂ.ಪ್ರಕಾಶ್‌ ಮಾತನಾಡಿ ಸೆಮಿಸ್ಟಾರ್‌ ಶಿಕ್ಷ ಣ ಪದ್ಧತಿಯಿಂದ ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಭಾಗವಹಿಸುವಿಕೆ ಕಡಿಮೆಯಾಗಿದೆ. ಮೊಬೈಲ್‌ ಬಿಟ್ಟು ಕ್ರೀಡೆಗಳತ್ತ ಯುವಜನತೆ ಆಸಕ್ತಿತೋರಬೇಕು. ಕ್ರೀಡೆಯಿಂದ ಧೈರ‍್ಯ, ಸ್ಥೈರ್ಯ, ಆರೋಗ್ಯ ವೃದ್ಧಿಯಾಗುತ್ತದೆ ಎಂದರು. ಸಾಗರ ಕಾಲೇಜು ದೈಹಿಕಶಿಕ್ಷ ಣ ನಿರ್ದೇಶಕ ವೆಂಕಟೇಶ್‌, ನಗರಸಭಾಸದಸ್ಯ ಎಚ್‌.ಡಿ.ತಮ್ಮಯ್ಯ ಹಾಜರಿದ್ದರು. ಪಂದ್ಯಾವಳಿಯ ರೂವಾರಿ ಅತಿಥೇಯ ಕಾಲೇಜಿನ ದೈಹಿಕಶಿಕ್ಷ ಣ ನಿರ್ದೇಶಕ ಬಿ.ಯೋಗೀಶ್‌ ಸ್ವಾಗತಿಸಿದರು. ಉಪನ್ಯಾಸಕ ಪುಟ್ಟಸ್ವಾಮಿ ವಂದಿಸಿ, ಸ್ನೇಹಾ ಪ್ರಾರ್ಥಿಸಿದರು. ಕುವೆಂಪು ವಿವಿ ವ್ಯಾಪ್ತಿಯ 16ತಂಡಗಳು ಪಂದ್ಯಾವಳಿಗೆ ನೊಂದಾವಣೆ ಮಾಡಿಸಿದ್ದು, 12ತಂಡಗಳು ವರದಿ ಮಾಡಿಕೊಂಡಿವೆ. ವಿವಿ ಯ ಮಹಿಳಾ ತಂಡವನ್ನು ಇದೇ ಸಂದರ್ಭದಲ್ಲಿ ಆಯ್ಕೆ ಮಾಡಲಾಗುವುದೆಂದು ಯೋಗೀಶ್‌ ತಿಳಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ