ಆ್ಯಪ್ನಗರ

ಕನ್ನಡ ಸಂಸ್ಕೃತಿಯ ಕಂಪು ಹರಡಲಿ

ಕನ್ನಡ ನಾಡಿನ ಸಂಸ್ಕೃತಿಯ ಕಂಪನ್ನು ಎಲ್ಲೆಡೆ ಹರಡುವ ಜತೆಗೆ ಸಮಾಜ ಸೇವೆಯಲ್ಲಿ ಆತ್ಮತೃಪ್ತಿ ಕಾಣಬೇಕು ಎಂದು ಅಮೆರಿಕ ಅಕ್ಕ ಸಂಘಟನೆ ಅಧ್ಯಕ್ಷ ಡಾ.ಹಳೆಕೋಟೆ ವಿಶ್ವಾಮಿತ್ರ ಹೇಳಿದರು.

Vijaya Karnataka 19 Dec 2018, 5:00 am
ಚಿಕ್ಕಮಗಳೂರು: ಕನ್ನಡ ನಾಡಿನ ಸಂಸ್ಕೃತಿಯ ಕಂಪನ್ನು ಎಲ್ಲೆಡೆ ಹರಡುವ ಜತೆಗೆ ಸಮಾಜ ಸೇವೆಯಲ್ಲಿ ಆತ್ಮತೃಪ್ತಿ ಕಾಣಬೇಕು ಎಂದು ಅಮೆರಿಕ ಅಕ್ಕ ಸಂಘಟನೆ ಅಧ್ಯಕ್ಷ ಡಾ.ಹಳೆಕೋಟೆ ವಿಶ್ವಾಮಿತ್ರ ಹೇಳಿದರು.
Vijaya Karnataka Web CKM-18aragap5


ನಗರದ ಆದಿಚುಂಚನಗಿರಿ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಹಳೆ ವಿದ್ಯಾರ್ಥಿಗಳ ಸಮಾವೇಶದಲ್ಲಿ ಮಾತನಾಡಿ, ಕನ್ನಡ ನಾಡು, ನುಡಿಯ ಬಗ್ಗೆ ಪ್ರತಿಯೊಬ್ಬರೂ ಅಭಿಮಾನ ಬೆಳೆಸಿಕೊಳ್ಳುವ ಜತೆಗೆ ನಾವು ಎಲ್ಲೇ ವಾಸವಾಗಿದ್ದರೂ ಕನ್ನಡ ನಾಡಿನ ಕಂಪನ್ನು ಪಸರಿಸುವ ಕೆಲಸ ಮಾಡಬೇಕು ಎಂದರು.

ಪ್ರಾಂಶುಪಾಲ ಡಾ.ಸಿ.ಟಿ.ಜಯದೇವ್‌ ಪ್ರಾಸ್ತಾವಿಕ ಮಾತನಾಡಿ, ಹಿರಿಯ ವಿದ್ಯಾರ್ಥಿಗಳು ಕಾಲೇಜಿನ ಆಸ್ತಿ ಇದ್ದಂತೆ. ಪ್ರಸ್ತುತ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ತಂತ್ರಜ್ಞಾನದ ಸವಾಲು ಎದುರಿಸಲು ಹಾಗೂ ನಿರ್ದಿಷ್ಟವಾದ ಪಥದಲ್ಲಿ ಮುನ್ನಡೆಯಲು ಉತ್ತೇಜನ ಮತ್ತು ಮಾರ್ಗದರ್ಶನ ನೀಡಬೇಕು ಎಂದು ಮನವಿ ಮಾಡಿದರು.

ಆದಿಚುಂಚನಗಿರಿ ವಿಶ್ವ ವಿದ್ಯಾಲಯದ ಕುಲಸಚಿವ ಡಾ.ಸಿ.ಕೆ.ಸುಬ್ಬರಾಯ ಮಾತನಾಡಿ, ಈ ಕಾಲೇಜಿನಲ್ಲಿ ಪದವಿ ಪಡೆದ ಪ್ರತಿಭಾವಂತ ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ದೇಶ-ವಿದೇಶಗಳಲ್ಲಿ ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕಾಲೇಜಿನಲ್ಲಿ ವರ್ಷದಿಂದ ವರ್ಷಕ್ಕೆ ರಾರ‍ಯಂಕ್‌ ಪಡೆಯುವವರ ಸಂಖ್ಯೆಯೂ ಹೆಚ್ಚುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಹಳೆಯ ವಿದ್ಯಾರ್ಥಿ ಸಮಾವೇಶದ ಸಂಘಟಕ, ಎಐಟಿ ಅಲ್ಯುಮಿನಿ ಅಸೋಸಿಯೇಷನ್‌ ಕಾರ‍್ಯದರ್ಶಿ ಡಾ.ಜಿ.ಎಂ.ಸತ್ಯನಾರಾಯಣ ವಾರ್ಷಿಕ ವರದಿ ವಾಚಿಸಿದರು. ಜಿಲ್ಲಾ ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷ ಹಳಸೆ ಶಿವಣ್ಣ ಮಾತನಾಡಿದರು. ಎಐಟಿ ಆಡಳಿತ ಸದಸ್ಯ ಕೆ.ಮೋಹನ್‌, ಶೀಲಾ, ಎ.ಎನ್‌.ಮಹೇಶ್‌, ಮಧುರಂಗಯ್ಯ, ಕೃಷ್ಣೇಗೌಡ ಹಾಜರಿದ್ದರು. ಪೃಥ್ವಿಶ್ರೀ ಪ್ರಾರ್ಥಿಸಿ, ಪ್ರಾಧ್ಯಾಪಕಿ ಅಂಜಲಿ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ