ಶೃಂಗೇರಿ: ಪಟ್ಟಣದ ಮಧ್ಯ ಭಾಗದಲ್ಲಿರುವ ಬೆಟ್ಟದ ಇತಿಹಾಸ ಪ್ರಸಿದ್ಧ ಶ್ರೀಮಲಹಾನಿಕರೇಶ್ವರ ಸ್ವಾಮಿಯ ರಥೋತ್ಸವವು ಬುಧವಾರ ಪಟ್ಟಣದ ಮುಖ್ಯ ರಸ್ತೆಯಲ್ಲಿ ಸಂಭ್ರಮದಿಂದ ನಡೆಯಿತು.
ಶಿವರಾತ್ರಿ ಅಂಗವಾಗಿ ಅನಾದಿ ಕಾಲದಿಂದ ನಡೆಯುತ್ತಿರುವ ರಥೋತ್ಸವದಲ್ಲಿ ಭಕ್ತಾದಿಗಳು ಪಾಲ್ಗೊಂಡರು. ಬೆಟ್ಟದ ಶ್ರೀಮಲಹಾನಿಕರೇಶ್ವರಸ್ವಾಮಿ ದೇವಸ್ಥಾನದಲ್ಲಿ ಬೆಳಗ್ಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.ಬೆಳಗ್ಗೆ ಜಗದ್ಗುರು ಶ್ರೀಭಾರತೀತೀರ್ಥ ಸ್ವಾಮಿಗಳು ಹಾಗೂ ಕಿರಿಯ ಶ್ರೀ ವಿಧುಶೇಖರ ಭಾರತೀ ಸ್ವಾಮಿಗಳು ಶಾರದಾ ಸನ್ನಿಧಿಯಲ್ಲಿ ವಿಶೇಷ ಪೂಜೆ ನೆರವೇರಿಸಿದ ಬಳಿಕ ಬೆಟ್ಟದ ಮಲಹಾನಿಕರೇಶ್ವರ ಸ್ವಾಮಿ ದೇವಸ್ಥಾನಕ್ಕೆ ತೆರಳಿದರು. ಬೆಟ್ಟದಲ್ಲಿ ಇರುವ ಸ್ತಂಭಗಣಪತಿಗೆ ಪೂಜೆ ಸಲ್ಲಿಸಿದ ಬಳಿಕ ಶ್ರೀಭವಾನಿ ಅಮ್ಮನವರ ಸನ್ನಿಧಿಯಲ್ಲಿ ಪೂಜೆ, ಮಹಾಮಂಗಳಾರತಿ ನೆರವೇರಿಸಿದರು.
ನಂತರ ಮಲಹಾನಿಕರೇಶ್ವರ ಸ್ವಾಮಿಗೆ ರುದ್ರಾಭಿಷೇಕ ಸಹಿತ ವಿಶೇಷ ಪೂಜೆ ನೆರವೇರಿಸಿದರು. ಉತ್ಸವ ಮೂರ್ತಿಯನ್ನು ಮಂಗಳ ವಾದ್ಯದೊಂದಿಗೆ ಶ್ರೀ ಮಠದವರೆಗೆ ತಂದು ಅಲ್ಲಿ ಅಲಂಕೃತ ರಥದಲ್ಲಿ ಮೂರು ಪ್ರದಕ್ಷಿಣೆ ನಂತರ ಪ್ರತಿಷ್ಠಾಪಿಸಲಾಯಿತು. ಕಿರಿಯ ಶ್ರೀಗಳು ರಥದ ಮುಂದೆ ಹೆಜ್ಜೆ ಹಾಕಿದರು.
ರಥೋತ್ಸವದ ಅಂಗವಾಗಿ ಪಟ್ಟಣದ ರಥಬೀದಿಯನ್ನು ರಂಗೋಲಿ ಚಿತ್ತಾರಗಳಿಂದ ಸಿಂಗರಿಸಲಾಗಿತ್ತು. ಶ್ರೀ ಸದ್ವಿದ್ಯಾ ಸಂಸ್ಕೃತ ಪಾಠಶಾಲೆ ವಿದ್ಯಾರ್ಥಿಗಳ ವೇದಘೋಷದ ಸಹಿತ ರಥದ ಎದುರು ಆನೆ, ಕುದುರೆ, ತಟ್ಟಿರಾಯ, ಛತ್ರಿ, ಚಾಮರ, ವಾದ್ಯ ಮೆರವಣಿಗೆಗೆ ವಿಶೇಷ ಮೆರಗು ನೀಡಿತು. ರಥ ಸಾಗುವ ಮಾರ್ಗದ ಉದ್ದಕ್ಕೂ ಸುಡುಬಿಸಿಲು ಲೆಕ್ಕಿಸದೆ ಇಕ್ಕೆಲುಗಳಲ್ಲಿ ನಿಂತು ಭಕ್ತ ಸಮೂಹ ಭಕ್ತಿ ಭಾವದಿಂದ ಶ್ರೀ ಸ್ವಾಮಿಗೆ ನಮಿಸುತ್ತಿದ್ದರು. ಭಾರತೀ ಚೌಕದಲ್ಲಿರುವ ಕಟ್ಟೆಬಾಗಿಲು ಗಣಪತಿ ದೇವಸ್ಥಾನದಲ್ಲಿ ಮಂಗಳಾರತಿ ನೆರವೇರಿಸಿದ ಬಳಿಕ ರಥವನ್ನು ಶ್ರೀ ಮಠದವರೆಗೂ ಎಳೆದು ತರಲಾಯಿತು.
ಸುಮಾರು 397 ವರ್ಷಗಳ ಇತಿಹಾಸವಿರುವ ಈ ರಥೋತ್ಸವವು ಮಹತ್ವಪೂರ್ಣದ್ದಾಗಿದೆ.
ಕ್ರಿ.ಶ 1623-1663ರಲ್ಲಿ ಜಗದ್ಗುರು ಶ್ರೀಸಚ್ಚಿದಾನಂದ ಭಾರತೀ ಸ್ವಾಮಿಗಳು ಬೆಟ್ಟದಲ್ಲಿ ಭವಾನಿ ಅಮ್ಮನವರನ್ನು ಪ್ರತಿಷ್ಠಾಪಿಸಿದ್ದರು. ಅಂದಿನಿಂದ ಭವಾನಿ ಮಲಹಾನಿಕರೇಶ್ವರ ರಥೋತ್ಸವ ನಡೆಯುತ್ತಿದೆ.
ಶಿವರಾತ್ರಿ ಅಂಗವಾಗಿ ಅನಾದಿ ಕಾಲದಿಂದ ನಡೆಯುತ್ತಿರುವ ರಥೋತ್ಸವದಲ್ಲಿ ಭಕ್ತಾದಿಗಳು ಪಾಲ್ಗೊಂಡರು. ಬೆಟ್ಟದ ಶ್ರೀಮಲಹಾನಿಕರೇಶ್ವರಸ್ವಾಮಿ ದೇವಸ್ಥಾನದಲ್ಲಿ ಬೆಳಗ್ಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.ಬೆಳಗ್ಗೆ ಜಗದ್ಗುರು ಶ್ರೀಭಾರತೀತೀರ್ಥ ಸ್ವಾಮಿಗಳು ಹಾಗೂ ಕಿರಿಯ ಶ್ರೀ ವಿಧುಶೇಖರ ಭಾರತೀ ಸ್ವಾಮಿಗಳು ಶಾರದಾ ಸನ್ನಿಧಿಯಲ್ಲಿ ವಿಶೇಷ ಪೂಜೆ ನೆರವೇರಿಸಿದ ಬಳಿಕ ಬೆಟ್ಟದ ಮಲಹಾನಿಕರೇಶ್ವರ ಸ್ವಾಮಿ ದೇವಸ್ಥಾನಕ್ಕೆ ತೆರಳಿದರು. ಬೆಟ್ಟದಲ್ಲಿ ಇರುವ ಸ್ತಂಭಗಣಪತಿಗೆ ಪೂಜೆ ಸಲ್ಲಿಸಿದ ಬಳಿಕ ಶ್ರೀಭವಾನಿ ಅಮ್ಮನವರ ಸನ್ನಿಧಿಯಲ್ಲಿ ಪೂಜೆ, ಮಹಾಮಂಗಳಾರತಿ ನೆರವೇರಿಸಿದರು.
ನಂತರ ಮಲಹಾನಿಕರೇಶ್ವರ ಸ್ವಾಮಿಗೆ ರುದ್ರಾಭಿಷೇಕ ಸಹಿತ ವಿಶೇಷ ಪೂಜೆ ನೆರವೇರಿಸಿದರು. ಉತ್ಸವ ಮೂರ್ತಿಯನ್ನು ಮಂಗಳ ವಾದ್ಯದೊಂದಿಗೆ ಶ್ರೀ ಮಠದವರೆಗೆ ತಂದು ಅಲ್ಲಿ ಅಲಂಕೃತ ರಥದಲ್ಲಿ ಮೂರು ಪ್ರದಕ್ಷಿಣೆ ನಂತರ ಪ್ರತಿಷ್ಠಾಪಿಸಲಾಯಿತು. ಕಿರಿಯ ಶ್ರೀಗಳು ರಥದ ಮುಂದೆ ಹೆಜ್ಜೆ ಹಾಕಿದರು.
ರಥೋತ್ಸವದ ಅಂಗವಾಗಿ ಪಟ್ಟಣದ ರಥಬೀದಿಯನ್ನು ರಂಗೋಲಿ ಚಿತ್ತಾರಗಳಿಂದ ಸಿಂಗರಿಸಲಾಗಿತ್ತು. ಶ್ರೀ ಸದ್ವಿದ್ಯಾ ಸಂಸ್ಕೃತ ಪಾಠಶಾಲೆ ವಿದ್ಯಾರ್ಥಿಗಳ ವೇದಘೋಷದ ಸಹಿತ ರಥದ ಎದುರು ಆನೆ, ಕುದುರೆ, ತಟ್ಟಿರಾಯ, ಛತ್ರಿ, ಚಾಮರ, ವಾದ್ಯ ಮೆರವಣಿಗೆಗೆ ವಿಶೇಷ ಮೆರಗು ನೀಡಿತು. ರಥ ಸಾಗುವ ಮಾರ್ಗದ ಉದ್ದಕ್ಕೂ ಸುಡುಬಿಸಿಲು ಲೆಕ್ಕಿಸದೆ ಇಕ್ಕೆಲುಗಳಲ್ಲಿ ನಿಂತು ಭಕ್ತ ಸಮೂಹ ಭಕ್ತಿ ಭಾವದಿಂದ ಶ್ರೀ ಸ್ವಾಮಿಗೆ ನಮಿಸುತ್ತಿದ್ದರು. ಭಾರತೀ ಚೌಕದಲ್ಲಿರುವ ಕಟ್ಟೆಬಾಗಿಲು ಗಣಪತಿ ದೇವಸ್ಥಾನದಲ್ಲಿ ಮಂಗಳಾರತಿ ನೆರವೇರಿಸಿದ ಬಳಿಕ ರಥವನ್ನು ಶ್ರೀ ಮಠದವರೆಗೂ ಎಳೆದು ತರಲಾಯಿತು.
ಸುಮಾರು 397 ವರ್ಷಗಳ ಇತಿಹಾಸವಿರುವ ಈ ರಥೋತ್ಸವವು ಮಹತ್ವಪೂರ್ಣದ್ದಾಗಿದೆ.
ಕ್ರಿ.ಶ 1623-1663ರಲ್ಲಿ ಜಗದ್ಗುರು ಶ್ರೀಸಚ್ಚಿದಾನಂದ ಭಾರತೀ ಸ್ವಾಮಿಗಳು ಬೆಟ್ಟದಲ್ಲಿ ಭವಾನಿ ಅಮ್ಮನವರನ್ನು ಪ್ರತಿಷ್ಠಾಪಿಸಿದ್ದರು. ಅಂದಿನಿಂದ ಭವಾನಿ ಮಲಹಾನಿಕರೇಶ್ವರ ರಥೋತ್ಸವ ನಡೆಯುತ್ತಿದೆ.