ಶೃಂಗೇರಿ : ಶ್ರೀ ಶಾರದಾ ಪೀಠದಲ್ಲಿ ವಿಕಾರಿ ಸಂವತ್ಸರದ ವೈಶಾಖ ಶುದ್ಧ ಪಾಡ್ಯದಿಂದ ಆರಂಭವಾಗಿದ್ದ ಶ್ರೀ ಶಂಕರ ಜಯಂತಿ ಉತ್ಸವ ಪಂಚಮಿ ದಿನ ಶುಕ್ರವಾರ ರಥೋತ್ಸವದೊಂದಿಗೆ ಮುಕ್ತಾಯಗೊಂಡಿತು.
ಬೆಳಗ್ಗೆ ಗುರುಭವನದಲ್ಲಿ ಉಭಯ ಜಗದ್ಗುರುಗಳಾದ ಶ್ರೀ ಭಾರತೀತೀರ್ಥ ಸ್ವಾಮೀಜಿ ಹಾಗೂ ಶ್ರೀವಿಧುಶೇಖರ ಭಾರತೀ ಸ್ವಾಮೀಜಿ ಆಹ್ನಿಕ ಕಾರ್ಯಕ್ರಮವನ್ನು ಮುಗಿಸಿ,ಅಧಿಷ್ಟಾನ ಮಂದಿರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.ನಂತರ ಜಗದ್ಗುರುಗಳು ಶ್ರೀಮಠಕ್ಕೆ ಭೇಟಿ ನೀಡಿಹೊರ ಪ್ರಾಂಗಣ ಮತ್ತು ಒಳ ಪ್ರಾಂಗಣದ ದೇಗುಲಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.ಹೊರ ಪ್ರಾಂಗಣದ ಶಿಲಾಮಯ ಶ್ರೀ ಶಂಕರಚಾರ್ಯ ದೇಗುಲದಲ್ಲಿ ವಿಶೇಷ ಪೂಜೆ,ಪಂಚಾಮೃತಭಿಷೇಕ ನೆರವೇರಿತು.ಶ್ರೀ ಶಂಕರಜಯಂತಿ ಅಂಗವಾಗಿ ಶ್ರೀ ಶಂಕರ ರಥೋತ್ಸವವು ಪಟ್ಟಣದ ರಥಬೀದಿಯಲ್ಲಿ ವಿಜೃಂಭಣೆಯಿಂದ ನಡೆಯಿತು. ರಥ ಸಾಗುವ ಬೀದಿಯಲ್ಲಿ ಮಹಿಳೆಯರು ರಂಗೋಲಿ ಹಾಕಿದ್ದರು.ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು.
ರಥದ ಎದುರು ಆನೆ, ಅಶ್ವ, ಛತ್ರಿ, ಚಾಮರ, ವಾದ್ಯ ಮೇಳ,ಮಹಿಳೆಯರು ಶ್ರೀ ಶಂಕರ ಅಷ್ಟೊತ್ತರ ಶತನಾಮವಳಿ ಪಠಿಸುತ್ತಾ ಸಾಗಿದರು.ಶ್ರೀ ಮಠದ ಸದ್ವಿದ್ಯಾ ಸಂಜೀವಿನಿ ಸಂಸ್ಕೃತ ಪಾಠಶಾಲೆಯ ವಿದ್ಯಾರ್ಥಿಗಳು ವೇದಘೋಷ, ಭಕ್ತಾದಿಗಳು ಜಯಕಾರದೊಂದಿಗೆ ರಥವನ್ನು ಎಳೆಯಲಾಯಿತು. ರಥೋತ್ಸವ ಆರಂಭವಾಗುವ ಮುನ್ನ ರಥವನ್ನು ಭವ್ಯವಾಗಿ ಅಲಂಕರಿಸಲಾಗಿತ್ತು. ಶ್ರೀಶಂಕರಚಾರ್ಯರ ಉತ್ಸವ ಮೂರ್ತಿಯನ್ನು ವಿಶೇಷ ಪೂಜೆ ಸಲ್ಲಿಸದ ನಂತರ ಮಂಗಳವಾದ್ಯಗಳೊಂದಿಗೆ ರಥಕ್ಕೆ ತರಲಾಯಿತು.ರಥದ ಗಾಲಿಗೆ ಕಾಯಿ ಒಡೆಯಲಾಯಿತು.ರಥಕ್ಕೆ ಮೂರು ಪ್ರದಕ್ಷಿಣೆ ಹಾಕಿದ ನಂತರ ಉತ್ಸವ ಮೂರ್ತಿಯನ್ನು ರಥದಲ್ಲಿರಿಸಲಾಯಿತು. ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸದ ಬಳಿಕ ರಥವನ್ನು ಎಳೆಯುವುದಕ್ಕೆ ಚಾಲನೆ ನೀಡಲಾಯಿತು.ಭಕ್ತರ ಜಯಘೋಷದೊಂದಿಗೆ ರಥವನ್ನು ಪಟ್ಟಣದ ಭಾರತೀಚೌಕದವರೆಗೆ ಎಳೆದು ಅಲ್ಲಿ ಕಟ್ಟೆಬಾಗಿಲಿನ ಶ್ರೀಮಹಾಗಣಪತಿಗೆ ಪೂಜೆ ಸಲ್ಲಿಸಲಾಯಿತು.ನಂತರ ರಥವನ್ನು ಪುನಃ ಎಳೆದು ತರಲಾಯಿತು. ಶ್ರೀ ಮಠದ ಅಧಿಕಾರಿಗಳಾದ ಶ್ರೀಪಾದರಾವ್,ಶಿವಶಂಕರಭಟ್,ರಾಮಕೃಷ್ಣಯ್ಯ,ಗೋಪಾಲಕೃಷ್ಣ, ಶ್ರೀಮಠದ ಪುರೋಹಿತರಾದ ಕೃಷ್ಣಭಟ್,ಶಿವಕುಮಾರ ಶರ್ಮ ಮತ್ತಿತರರು ಉಪಸ್ಥಿತರಿದ್ದರು.
ಬೆಳಗ್ಗೆ ಗುರುಭವನದಲ್ಲಿ ಉಭಯ ಜಗದ್ಗುರುಗಳಾದ ಶ್ರೀ ಭಾರತೀತೀರ್ಥ ಸ್ವಾಮೀಜಿ ಹಾಗೂ ಶ್ರೀವಿಧುಶೇಖರ ಭಾರತೀ ಸ್ವಾಮೀಜಿ ಆಹ್ನಿಕ ಕಾರ್ಯಕ್ರಮವನ್ನು ಮುಗಿಸಿ,ಅಧಿಷ್ಟಾನ ಮಂದಿರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.ನಂತರ ಜಗದ್ಗುರುಗಳು ಶ್ರೀಮಠಕ್ಕೆ ಭೇಟಿ ನೀಡಿಹೊರ ಪ್ರಾಂಗಣ ಮತ್ತು ಒಳ ಪ್ರಾಂಗಣದ ದೇಗುಲಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.ಹೊರ ಪ್ರಾಂಗಣದ ಶಿಲಾಮಯ ಶ್ರೀ ಶಂಕರಚಾರ್ಯ ದೇಗುಲದಲ್ಲಿ ವಿಶೇಷ ಪೂಜೆ,ಪಂಚಾಮೃತಭಿಷೇಕ ನೆರವೇರಿತು.ಶ್ರೀ ಶಂಕರಜಯಂತಿ ಅಂಗವಾಗಿ ಶ್ರೀ ಶಂಕರ ರಥೋತ್ಸವವು ಪಟ್ಟಣದ ರಥಬೀದಿಯಲ್ಲಿ ವಿಜೃಂಭಣೆಯಿಂದ ನಡೆಯಿತು. ರಥ ಸಾಗುವ ಬೀದಿಯಲ್ಲಿ ಮಹಿಳೆಯರು ರಂಗೋಲಿ ಹಾಕಿದ್ದರು.ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು.
ರಥದ ಎದುರು ಆನೆ, ಅಶ್ವ, ಛತ್ರಿ, ಚಾಮರ, ವಾದ್ಯ ಮೇಳ,ಮಹಿಳೆಯರು ಶ್ರೀ ಶಂಕರ ಅಷ್ಟೊತ್ತರ ಶತನಾಮವಳಿ ಪಠಿಸುತ್ತಾ ಸಾಗಿದರು.ಶ್ರೀ ಮಠದ ಸದ್ವಿದ್ಯಾ ಸಂಜೀವಿನಿ ಸಂಸ್ಕೃತ ಪಾಠಶಾಲೆಯ ವಿದ್ಯಾರ್ಥಿಗಳು ವೇದಘೋಷ, ಭಕ್ತಾದಿಗಳು ಜಯಕಾರದೊಂದಿಗೆ ರಥವನ್ನು ಎಳೆಯಲಾಯಿತು. ರಥೋತ್ಸವ ಆರಂಭವಾಗುವ ಮುನ್ನ ರಥವನ್ನು ಭವ್ಯವಾಗಿ ಅಲಂಕರಿಸಲಾಗಿತ್ತು. ಶ್ರೀಶಂಕರಚಾರ್ಯರ ಉತ್ಸವ ಮೂರ್ತಿಯನ್ನು ವಿಶೇಷ ಪೂಜೆ ಸಲ್ಲಿಸದ ನಂತರ ಮಂಗಳವಾದ್ಯಗಳೊಂದಿಗೆ ರಥಕ್ಕೆ ತರಲಾಯಿತು.ರಥದ ಗಾಲಿಗೆ ಕಾಯಿ ಒಡೆಯಲಾಯಿತು.ರಥಕ್ಕೆ ಮೂರು ಪ್ರದಕ್ಷಿಣೆ ಹಾಕಿದ ನಂತರ ಉತ್ಸವ ಮೂರ್ತಿಯನ್ನು ರಥದಲ್ಲಿರಿಸಲಾಯಿತು. ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸದ ಬಳಿಕ ರಥವನ್ನು ಎಳೆಯುವುದಕ್ಕೆ ಚಾಲನೆ ನೀಡಲಾಯಿತು.ಭಕ್ತರ ಜಯಘೋಷದೊಂದಿಗೆ ರಥವನ್ನು ಪಟ್ಟಣದ ಭಾರತೀಚೌಕದವರೆಗೆ ಎಳೆದು ಅಲ್ಲಿ ಕಟ್ಟೆಬಾಗಿಲಿನ ಶ್ರೀಮಹಾಗಣಪತಿಗೆ ಪೂಜೆ ಸಲ್ಲಿಸಲಾಯಿತು.ನಂತರ ರಥವನ್ನು ಪುನಃ ಎಳೆದು ತರಲಾಯಿತು. ಶ್ರೀ ಮಠದ ಅಧಿಕಾರಿಗಳಾದ ಶ್ರೀಪಾದರಾವ್,ಶಿವಶಂಕರಭಟ್,ರಾಮಕೃಷ್ಣಯ್ಯ,ಗೋಪಾಲಕೃಷ್ಣ, ಶ್ರೀಮಠದ ಪುರೋಹಿತರಾದ ಕೃಷ್ಣಭಟ್,ಶಿವಕುಮಾರ ಶರ್ಮ ಮತ್ತಿತರರು ಉಪಸ್ಥಿತರಿದ್ದರು.