ಆ್ಯಪ್ನಗರ

ಶೃಂಗೇರಿ ವ್ಯಾಪ್ತಿ ಸಾಮಾನ್ಯ ಮಳೆ

ಮೃಗಶಿರ ಮಳೆ ತಾಲೂಕಾದ್ಯಂತ ಬುಧವಾರ ಸುರಿದಿದ್ದು, ಆಗಾಗ್ಗೆ ಸುಳಿ ಗಾಳಿಯೊಂದಿಗೆ ಸಾಮಾನ್ಯ ಮಳೆಯಾಗಿದೆ.

Vijaya Karnataka 13 Jun 2019, 5:00 am
ಶೃಂಗೇರಿ : ಮೃಗಶಿರ ಮಳೆ ತಾಲೂಕಾದ್ಯಂತ ಬುಧವಾರ ಸುರಿದಿದ್ದು, ಆಗಾಗ್ಗೆ ಸುಳಿ ಗಾಳಿಯೊಂದಿಗೆ ಸಾಮಾನ್ಯ ಮಳೆಯಾಗಿದೆ.
Vijaya Karnataka Web CKM-12SRI4


ಮಳೆಗಾಲದ ವಾತಾವರಣಕ್ಕೆ ಪೂರಕವಾಗಿ, ಬೆಳಗ್ಗೆಯಿಂದಲೇ ಮಳೆ ಸುರಿಯಿತು. ಕಾರ್ಮಿಕರು ಕೆಲಸಕ್ಕೆ ಹೊರಡುವ ಸಂದರ್ಭದಲ್ಲಿ ಜಡಿ ಮಳೆಯಾಗಿದ್ದರಿಂದ ಬಹುತೇಕ ಕಾರ್ಮಿಕರು ಕೆಲಸಕ್ಕೆ ತೆರಳದೇ ಮನೆಯಲ್ಲಿಯೇ ಉಳಿದರು. ಮಳೆ ಆರಂಭವಾಗಿದ್ದರೂ, ಮುಖ್ಯ ರಸ್ತೆಯ ಚರಂಡಿಯನ್ನು ದುರಸ್ತಿಗೊಳಿಸದ ಕಾರಣ ಅನೇಕ ಕಡೆ ರಸ್ತೆಯಲ್ಲಿ ಕೆಸರು ಮಣ್ಣು ಕಂಡು ಬಂದಿದೆ. ತಡವಾಗಿ ಆರಂಭವಾಗಿರುವ ಮಳೆ ಇನ್ನಷ್ಟೆ ಚುರುಕಾಗಬೇಕಾಗಿದೆ. ಕಳೆದ ವರ್ಷ ಜೂ.12ರ ವೇಳೆಗೆ ತುಂಗಾ ನದಿ ತುಂಬಿ ಹರಿಯುತ್ತಿತ್ತು. ಮಳೆ ಮುಂದುವರಿದಲ್ಲಿ ಕೃಷಿ ಚಟುವಟಿಕೆ ಚುರುಕುಗೊಳ್ಳಲಿದೆ. ಕಿಗ್ಗಾದಲ್ಲಿ 21.8, ಕೆರೆಕಟ್ಟೆ 70.4 ಹಾಗೂ ಶೃಂಗೇರಿಯಲ್ಲಿ 22.8 ಮಿಮೀ ಮಳೆ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ