ಆ್ಯಪ್ನಗರ

ಶೃಂಗೇರಿಯಲ್ಲಿ ಉಭಯ ಜಗದ್ಗುರುಗಳಿಂದ ವಿಶೇಷ ಪೂಜೆ

ಬೆಳಗ್ಗೆಯೇ ಬೆಟ್ಟದ ಮಲ್ಲಪ್ಪನ ಬೀದಿಯಲ್ಲಿ ವಾಹನ ಮತ್ತು ರಿಕ್ಷಾ ಚಾಲಕರ ಸಂಘದ ಸದಸ್ಯರು ತಳಿರು ತೋರಣಗಳಿಂದ ಬೀದಿಯನ್ನು ಶೃಂಗರಿಸಿದ್ದರು. ಬೆಟ್ಟಕ್ಕೆ ಸಾಗುವ ಮೆಟ್ಟಿಲುಗಳಲ್ಲಿ ರಂಗೋಲಿ, ತಳಿರು ತೋರಣ, ವಿದ್ಯುದೀಪಾಲಂಕಾರ ಮಾಡಲಾಗಿತ್ತು. ಶಿವರಾತ್ರಿ ಅಲಂಕಾರ ಸಮಿತಿಯಿಂದ ಪ್ರತಿ ವರ್ಷದಂತೆ ಉಚಿತ ಪಾನಕ ಸೇವೆ ನಡೆಯಿತು.

Vijaya Karnataka Web 11 Mar 2021, 8:47 pm
ಶೃಂಗೇರಿ: ಶಿವರಾತ್ರಿ ಅಂಗವಾಗಿ ತಾಲೂಕಿನಾದ್ಯಂತ ಗುರುವಾರ ಪಟ್ಟಣ ಹಾಗೂ ಗ್ರಾಮೀಣ ಭಾಗದ ಶಿವಾಲಯಗಳಲ್ಲಿ ವಿಶೇಷ ಪೂಜೆ, ಶಿವನಾಮಸ್ಮರಣೆ ನಡೆಯಿತು.
Vijaya Karnataka Web ಶೃಂಗೇರಿ
ಶೃಂಗೇರಿ


ಶಾರದಾ ಪೀಠದ ಜಗದ್ಗುರು ಶ್ರೀಭಾರತೀತೀರ್ಥ ಸ್ವಾಮೀಜಿ ಮತ್ತು ಶ್ರೀವಿಧುಶೇಖರ ಭಾರತೀ ಸ್ವಾಮೀಜಿಗಳು ಬೆಳಗ್ಗೆ ಶ್ರೀಮಠದ ಎಲ್ಲಾ ದೇವಾಲಯಗಳಿಗೂ ತೆರಳಿ ದೇವರ ದರ್ಶನ ಪಡೆದು ಶ್ರೀ ಶಾರದಾ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿದರು. ಬಳಿಕ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಗಳು ಕಾಲ್ನಡಿಗೆಯಲ್ಲಿ ಬೆಟ್ಟದ ಶ್ರೀ ಮಲಹಾನಿಕರೇಶ್ವರ ಸ್ವಾಮಿ ಸನ್ನಿಧಿಗೆ ತೆರಳಿ ಸ್ವಾಮಿಗೆ ಪೂಜೆ ಸಲ್ಲಿಸಿ, ಗುರುಭವನಕ್ಕೆ ತೆರಳಿ ಭಕ್ತರಿಗೆ ದರ್ಶನ ನೀಡಿದರು. ಸಾವಿರಾರು ಭಕ್ತರು ಬೆಳಗ್ಗೆಯಿಂದಲೇ ಬೆಟ್ಟಕ್ಕೆ ತೆರಳಿ ಹಣ್ಣು, ಕಾಯಿ, ಪುಷ್ಪ ಸಮರ್ಪಿಸಿ ದೇವರ ದರ್ಶನ ಪಡೆದರು.

ಶ್ರೀ ಮಠದ ಆಡಳಿತಾಧಿಕಾರಿ ಡಾ.ಗೌರಿಶಂಕರ್‌, ಪುರೋಹಿತರಾದ ಕೃಷ್ಣಭಟ್‌, ಶಿವಕುಮಾರಶರ್ಮ, ಸೀತಾರಾಮಶರ್ಮ, ನಾಗರಾಜಭಟ್‌, ಶ್ರೀ ಸದ್ವಿದ್ಯಾ ಸಂಜೀವಿನಿ ಸಂಸ್ಕೃತ ಪಾಠಶಾಲೆಯ ವಿದ್ಯಾರ್ಥಿಗಳಿಂದ ರುದ್ರ ಪಠಣ ನಡೆಯಿತು.

ಬೆಳಗ್ಗೆಯೇ ಬೆಟ್ಟದ ಮಲ್ಲಪ್ಪನ ಬೀದಿಯಲ್ಲಿ ವಾಹನ ಮತ್ತು ರಿಕ್ಷಾ ಚಾಲಕರ ಸಂಘದ ಸದಸ್ಯರು ತಳಿರು ತೋರಣಗಳಿಂದ ಬೀದಿಯನ್ನು ಶೃಂಗರಿಸಿದ್ದರು. ಬೆಟ್ಟಕ್ಕೆ ಸಾಗುವ ಮೆಟ್ಟಿಲುಗಳಲ್ಲಿ ರಂಗೋಲಿ, ತಳಿರು ತೋರಣ, ವಿದ್ಯುದೀಪಾಲಂಕಾರ ಮಾಡಲಾಗಿತ್ತು. ಶಿವರಾತ್ರಿ ಅಲಂಕಾರ ಸಮಿತಿಯಿಂದ ಪ್ರತಿ ವರ್ಷದಂತೆ ಉಚಿತ ಪಾನಕ ಸೇವೆ ನಡೆಯಿತು.

ಶ್ರೀ ಮಠದ ಗುರುಭವನದಲ್ಲಿ ಗುರುವಾರ ರಾತ್ರಿ ಉಭಯ ಜಗದ್ಗುರುಗಳು ಶ್ರೀ ಚಂದ್ರಮೌಳೇಶ್ವರ ಸ್ವಾಮಿಗೆ ವಿಶೇಷ ಪೂಜೆ ನೆರವೇರಿಸಿದರು.

ತಾಲೂಕಿನ ವಿವಿಧೆಡೆ ಶಿವಾಲಯಗಳಲ್ಲಿ ಪೂಜೆ

ಮಳೆಯ ದೇವರೆಂದು ಪ್ರಸಿದ್ಧಿಯಾದ ಶ್ರೀ ಋುಷ್ಯಶೃಂಗೇಶ್ವರ ಸ್ವಾಮಿ ಸನ್ನಿಧಿಯಲ್ಲಿ ವಿಶೇಷ ಪೂಜಾದಿಗಳು ನಡೆಯಿತು. ತಾಲೂಕಿನ ಕಾವಡಿ ಶ್ರೀ ಉಮಾ ಮಹೇಶ್ವರಸ್ವಾಮಿ ದೇವಸ್ಥಾನ, ಕೊಡೂರು ಶ್ರೀ ಈಶ್ವರ ದೇವಸ್ಥಾನ, ಪಡುಬೈಲು ಶ್ರೀ ಈಶ್ವರ ದೇವಸ್ಥಾನ,ಕೆಲವಳ್ಳಿ ಶ್ರೀ ಹರಿಹರೇಶ್ವರ ದೇವಸ್ಥಾನ, ಆನೆಗುಂದ ಗಂಗಾಧರೇಶ್ವರ, ನೆಮ್ಮಾರಿನ ಸರ್ವೇಶ್ವರ ದೇವಸ್ಥಾನ, ಹಗಡೂರಿನ ಮಲ್ಲಿಕಾರ್ಜುನ ಸ್ವಾಮಿ, ಪಟ್ಟಣದ ಹರಿಹರೇಶ್ವರಸ್ವಾಮಿ, ಧರೆಕೊಪ್ಪದ ಮಲ್ಲಿಕಾರ್ಜುನ ಸ್ವಾಮಿ, ಬೆಣ್ಣೆಗುಡ್ಡೆ ಶ್ರೀ ಶಂಕರ ದೇವಸ್ಥಾನ, ಮಲ್ನಾಡಿನ ಈಶ್ವರ ದೇವಸ್ಥಾನ, ತೆಕ್ಕೂರಿನ ಮಲ್ಲಿಕಾರ್ಜುನ, ಉಳವಳ್ಳಿ ವಡ್ಡಮಲ್ಲೇಶ್ವರ ಸ್ವಾಮಿ ದೇವಸ್ಥಾನ ದೇವಸ್ಥಾನಗಳಲ್ಲಿವಿಶೇಷ ಪೂಜೆ, ಅಖಂಡ ಭಜನೆ ನಡೆಯಿತು.

ಮಾ.13 ರಂದು ಶಿವರಾತ್ರಿ ಅಂಗವಾಗಿ ಬೆಟ್ಟದ ಶ್ರೀ ಮಲಹಾನಿಕರೇಶ್ವರ ಸ್ವಾಮಿಯ ರಥೋತ್ಸವ ನಡೆಯಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ