ಆ್ಯಪ್ನಗರ

ಶೃಂಗೇರಿ ಕಿರಿಯ ಜಗದ್ಗುರುಗಳ ವಿಜಯಯಾತ್ರೆ

ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಯವರು ಪಟ್ಟಾಭಿಷಿಕ್ತರಾದ ನಂತರ ಮೂರನೇ ಬಾರಿಗೆ ವಿಜಯಯಾತ್ರೆ ಕೈಗೊಂಡಿದ್ದಾರೆ.

Vijaya Karnataka 6 Nov 2018, 5:00 am
ಶೃಂಗೇರಿ: ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಯವರು ಪಟ್ಟಾಭಿಷಿಕ್ತರಾದ ನಂತರ ಮೂರನೇ ಬಾರಿಗೆ ವಿಜಯಯಾತ್ರೆ ಕೈಗೊಂಡಿದ್ದಾರೆ.
Vijaya Karnataka Web CKM-5SRI5


ಶ್ರೀಗಳು ಸೋಮವಾರದಿಂದ ಉತ್ತರ ಕರ್ನಾಟಕ ಭಾಗ ಮತ್ತು ಮಹರಾಷ್ಟ್ರ ರಾಜ್ಯದಲ್ಲಿ ಪ್ರವಾಸ ಮಾಡಲಿದ್ದು, 2019ರ ಶಿವರಾತ್ರಿಗೆ ಪೀಠಕ್ಕೆ ಆಗಮಿಸಲಿದ್ದಾರೆ. ಕಳೆದ ವರ್ಷ ಶ್ರೀಗಳು ತೆಲಂಗಾಣ, ತಮಿಳುನಾಡು, ಕೇರಳ ರಾಜ್ಯದ ಪ್ರವಾಸ ಕೈಗೊಂಡಿದ್ದರು. ಧರ್ಮ ಪ್ರಚಾರಕ್ಕಾಗಿ ಕೈಗೊಳ್ಳುವ ಪ್ರವಾಸದಲ್ಲಿ ಧಾರ್ಮಿಕ ಉಪನ್ಯಾಸವನ್ನು ಜಗದ್ಗುರುಗಳು ನೀಡಲಿದ್ದಾರೆ. ಪ್ರವಾಸಕ್ಕೆ ಹೊರಡುವ ಮುನ್ನ ಮಾತನಾಡಿದ ಶ್ರೀಗಳು, ಪೀಠದ ಪರಂಪರೆಯಂತೆ ನಮ್ಮ ಗುರುಗಳಾದ ಶ್ರೀ ಭಾರತೀತೀರ್ಥ ಸ್ವಾಮೀಜಿಯವರ ಆದೇಶದಂತೆ ಧರ್ಮ ಪ್ರಚಾರ ಯಾತ್ರೆಯನ್ನು ಕೈಗೊಂಡಿರುವುದಾಗಿ ತಿಳಿಸಿದ್ದಾರೆ.

ಪೀಠದಿಂದ ಹೊರಟ ಶ್ರೀಗಳು ದಾವಣಗೆರೆ ಜಿಲ್ಲೆ ಕರೂರಿನಲ್ಲಿ ಸೋಮವಾರ ವಾಸ್ತವ್ಯ ಮಾಡಲಿದ್ದು, ನ.6ರಂದು ಹಾವೇರಿ ಜಿಲ್ಲೆಯ ರಾಣೆಬೆನ್ನೂರಿಗೆ ತೆರಳಿ ಅಲ್ಲಿಯೇ ಮೂರು ದಿನ ವಾಸ್ತವ್ಯ ಮಾಡಲಿದ್ದಾರೆ. ನ.9ರಂದು ಧಾರವಾಡ ಹಾಗೂ ಹುಬ್ಬಳ್ಳಿಯಲ್ಲಿ ನ.13ರವರೆಗೆ ಇರಲಿದ್ದಾರೆ. ನ.14ರಂದು ಗದಗ, 15ರಂದು ಬಾದಾಮಿ, 16ರಂದು ಇಳಕಲ್‌, 17ರಂದು ಬಾಗಲಕೋಟ, 18ಸುರಪುರ, 19ರಂದು ಕಲಬುರಗಿಗೆ ತೆರಳಿ ಮೂರು ದಿನ ಇರಲಿದ್ದಾರೆ. 21ಕ್ಕೆ ಗಂಗಾಪುರ, 22ರಂದು ಅಫ್ಜಲ್‌ಪುರ, 23ರಂದು ಸಿಂಧಗಿ, 24ರಂದು ವಿಜಯಪುರ, 26ರಂದು ಬಾಗಲಕೋಟ ಜಿಲ್ಲೆ ಜಮಖಂಡಿ, 27ರಂದು ಮುಧೋಳ್‌, 28ರಿಂದ ಎರಡು ದಿನ ಬೆಳಗಾವಿಯಲ್ಲಿ ಇರಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪ್ರವಾಸಕ್ಕೂ ಮೊದಲು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಜಗದ್ಗುರು ಭಾರತೀತೀರ್ಥ ಸ್ವಾಮೀಜಿಯವರ ಆಶೀರ್ವಾದ ಪಡೆದರು. ನಂತರ ಶ್ರೀ ಶಾರದಾ ಪೀಠದ ಎಲ್ಲ ದೇಗುಲ ಹಾಗೂ ಶ್ರೀ ಶಾರದಾಂಬೆಗೆ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಶ್ರೀಮಠದ ಆಡಳಿತಾಧಿಕಾರಿ ಗೌರಿಶಂಕರ್‌, ಅಧಿಕಾರಿಗಳಾದ ಶಿವಶಂಕರಭಟ್‌, ಶ್ರೀಪಾದರಾವ್‌, ರಾಮಕೃಷ್ಣಯ್ಯ, ದಕ್ಷಿಣಾಮೂರ್ತಿ, ಪುರೋಹಿತರಾದ ಕೃಷ್ಣಭಟ್‌, ಶಿವಕುಮಾರಶರ್ಮ, ಸೀತಾರಾಮಶರ್ಮ ಮತ್ತಿತರರು ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ