ಆ್ಯಪ್ನಗರ

ಸಹಜ ಸ್ಥಿತಿಯತ್ತ ಶೃಂಗೇರಿ

ಚಿಕ್ಕಮಗಳೂರು ಜಿಲ್ಲಾ16ನೇ ಕನ್ನಡ ಸಾಹಿತ್ಯ ಪರಿಷತ್‌ ಸಮ್ಮೇಳನ ಎರಡನೇ ದಿನದ ಕಾರ್ಯಕ್ರಮ ರದ್ದಾಗಿದ್ದು ಸಾಹಿತ್ಯಭಿಮಾನಿಗಳಲ್ಲಿನಿರಾಸೆ ಉಂಟುಮಾಡಿತು. ಪೊಲೀಸ್‌ ಇಲಾಖೆಯ ಸೂಚನೆ ಮೇರೆಗೆ ರದ್ದುಪಡಿಸಿದ್ದು, ಕಸಾಪ ಉಳಿಸಿ ವೇದಿಕೆಗೆ ಅಲ್ಪ ಸಮಾಧಾನ ತಂದಿದೆ. ಮುಂಜಾಗ್ರತಾ ಕ್ರಮವಾಗಿ ಸಮುದಾಯ ಭವನದ ಎದುರು ಪೊಲೀಸ್‌ ರಕ್ಷಣೆ ಮುಂದುವರಿದಿದೆ.

Vijaya Karnataka 12 Jan 2020, 5:00 am
ಶೃಂಗೇರಿ: ಚಿಕ್ಕಮಗಳೂರು ಜಿಲ್ಲಾ16ನೇ ಕನ್ನಡ ಸಾಹಿತ್ಯ ಪರಿಷತ್‌ ಸಮ್ಮೇಳನ ಎರಡನೇ ದಿನದ ಕಾರ್ಯಕ್ರಮ ರದ್ದಾಗಿದ್ದು ಸಾಹಿತ್ಯಭಿಮಾನಿಗಳಲ್ಲಿನಿರಾಸೆ ಉಂಟುಮಾಡಿತು. ಪೊಲೀಸ್‌ ಇಲಾಖೆಯ ಸೂಚನೆ ಮೇರೆಗೆ ರದ್ದುಪಡಿಸಿದ್ದು, ಕಸಾಪ ಉಳಿಸಿ ವೇದಿಕೆಗೆ ಅಲ್ಪ ಸಮಾಧಾನ ತಂದಿದೆ. ಮುಂಜಾಗ್ರತಾ ಕ್ರಮವಾಗಿ ಸಮುದಾಯ ಭವನದ ಎದುರು ಪೊಲೀಸ್‌ ರಕ್ಷಣೆ ಮುಂದುವರಿದಿದೆ.
Vijaya Karnataka Web sringeri towards normal
ಸಹಜ ಸ್ಥಿತಿಯತ್ತ ಶೃಂಗೇರಿ


ಎರಡನೇ ದಿನಕ್ಕಾಗಿ ಅಡುಗೆ ಸಹಿತ ವ್ಯವಸ್ಥೆ ಎಲ್ಲವೂ ಆಗಿತ್ತು. ಆದರೆ ದಿಢೀರ್‌ ಕಾರ್ಯಕ್ರಮ ರದ್ದಾಗಿರುವುದರಿಂದ ಹಾಲು, ಮೊಸರು, ತರಕಾರಿ ಉಪಯೋಗಕ್ಕೆ ಬರದಂತಾಯಿತು. ಉಪಯೋಗಿಸದ ದಿನಸಿ ವಸ್ತುಗಳನ್ನು ದೇಣಿಗೆ ನೀಡಿದವರಿಗೆ ಹಿಂದಿರುಗಿಸಲಾಗುತ್ತಿದೆ. ಕಾರ್ಯಕ್ರಮ ರದ್ದಾದ ನಂತರ ನಿರ್ಮಿಸಿದ್ದ ಪೆಂಡಾಲ್‌ನ್ನು ತೆಗೆಯುವ ಕೆಲಸ ಬೆಳಗ್ಗೆಯಿಂದ ಆರಂಭಗೊಂಡಿದ್ದು, ಖುರ್ಚಿಗಳನ್ನು ತೆರವು ಮಾಡಲಾಗಿದೆ. ಸಮುದಾಯ ಭವನದ ಸುತ್ತ ಸ್ವಚ್ಛತೆ ಮಾಡಲಾಗಿದೆ. ಸಮಿತಿ ಕಾರ್ಯಕರ್ತರು ಬೆಳಗ್ಗೆಯಿಂದ ಹಾಜರಿದ್ದು, ಪೆಂಡಾಲ್‌ ತೆಗೆಯವುದು ಸೇರಿದಂತೆ ಸ್ವಚ್ಛತೆ ಕಾರ್ಯದ ನಿಗಾ ವಹಿಸಿದ್ದರು.
ಶುಕ್ರವಾರದ ಬಂದ್‌ ನಂತರ ಸಹಜ ಸ್ಥಿತಿಯತ್ತ ಮರಳಿದೆ. ಪಟ್ಟಣದಲ್ಲಿವ್ಯಾಪಾರ, ವಹಿವಾಟು ಎಂದಿನಂತೆ ನಡೆದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ