ಆ್ಯಪ್ನಗರ

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಹೃದಯಾಘಾತಕ್ಕೆ ಬಲಿ

ತಾಲೂಕಿನ ಬೇಗಾರ್‌ ಮೊರಾರ್ಜಿ ವಸತಿ ಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಶಾರೂನ್‌(16) ಹೃದಯಾಘಾತದಿಂದ ಭಾನುವಾರ ನಿಧನ ಹೊಂದಿದ್ದಾರೆ.

Vijaya Karnataka 15 Jul 2019, 5:00 am
ಶೃಂಗೇರಿ (ಚಿಕ್ಕಮಗಳೂರು) : ತಾಲೂಕಿನ ಬೇಗಾರ್‌ ಮೊರಾರ್ಜಿ ವಸತಿ ಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಶಾರೂನ್‌(16) ಹೃದಯಾಘಾತದಿಂದ ಭಾನುವಾರ ನಿಧನ ಹೊಂದಿದ್ದಾರೆ.
Vijaya Karnataka Web CKM-14SRI2


ಬೆಳಗ್ಗೆ 5ಗಂಟೆ ವೇಳೆಗೆ ತೀವ್ರ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶೃಂಗೇರಿ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದು, ಇಸಿಜಿ ಮೂಲಕ ವೈದ್ಯ ಡಾ.ಮಂಜುನಾಥ್‌ ತಪಾಸಣೆ ನಡೆಸಿದಾಗ ತೀವ್ರ ಹೃದಯಾಘಾತವಾಗಿರುವುದು ಗೊತ್ತಾಗಿದೆ. ತುರ್ತು ಚಿಕಿತ್ಸೆಯ ಅಗತ್ಯವಿದ್ದು, ಸಮೀಪದ ಕೊಪ್ಪದ ಫಿಸಿಷಿಯನ್‌ಗೆ ತೋರಿಸಲು ವೈದ್ಯರು ತಿಳಿಸಿದ್ದಾರೆ. ಬಳಿಕ ಕೊಪ್ಪ ಸರಕಾರಿ ಆಸ್ಪತ್ರೆಯ ಫಿಜಿಷಿಯನ್‌ ಡಾ.ನೀಲಕಂಠಪ್ಪ ಅವರು ತಪಾಸಣೆ ನಡೆಸಿದ್ದು, ರೋಗಿಯನ್ನು ತಕ್ಷ ಣ ದೊಡ್ಡ ಆಸ್ಪತ್ರೆಗೆ ಕರೆದೊಯ್ಯಲು ತಿಳಿಸಿದ್ದಾರೆ.

ಮೊರಾರ್ಜಿ ಶಾಲಾ ಪ್ರಾಂಶುಪಾಲ ತಮ್ಮಣ್ಣಗೌಡ ಹಾಗೂ ಸಹಶಿಕ್ಷ ಕರೊಂದಿಗೆ ನರಸಿಂಹರಾಜಪುರದಲ್ಲಿದ್ದ ಪೋಷಕರನ್ನು ಕರೆದುಕೊಂಡು ಶಿವಮೊಗ್ಗ ಖಾಸಗಿ ಆಸ್ಪತ್ರೆಗೆ ತೆರಳಿದ್ದಾರೆ. ಆಸ್ಪತ್ರೆಗೆ ತಲುಪಿದ ಸಂದರ್ಭದಲ್ಲಾಗಲೇ ವಿದ್ಯಾರ್ಥಿ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಪಟ್ಟಣದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನರಸಿಂಹರಾಜಪುರ ತಾಲೂಕಿನ ಮೆಣಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾವೂರಿನ ಕೃಷಿಕ ತಂದೆ ಶೈಲಿ ದೇವಾಸಿಯಾ ಮತ್ತು ತಾಯಿ ಶೈಲಾ ದಂಪತಿಯ ಪುತ್ರ ಶಾರೂನ್‌. ಈ ದಂಪತಿಗೆ ಮತ್ತೊಬ್ಬ ಮಗ ಇದ್ದಾನೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ