ಆ್ಯಪ್ನಗರ

ಮುಂದುವರಿದ ರೇವಣ್ಣ ಟೆಂಪಲ್ ರನ್: ಶೃಂಗೇರಿ ಶಾರದಾಂಬೆಗೆ ತೆರಳಿ ಬೆಳ್ಳಂಬೆಳಗ್ಗೆ ವಿಶೇಷ ಪೂಜೆ

ಬಹುಮತ ಕಳೆದುಕೊಂಡಂತಾಗಿರುವ ಸಮ್ಮಿಶ್ರ ಸರಕಾರವನ್ನು ಸಂಕಷ್ಟದಿಂದ ಪಾರು ಮಾಡಲು ಸಿಎಂ ಕುಮಾರಸ್ವಾಮಿ ಸಹೋದರ ಹಾಗೂ ಸಚಿವ ರೇವಣ್ಣ ದೇವರ ಮೊರೆ ಹೋಗುತ್ತಿದ್ದಾರೆ. ಜುಲೈ ತಿಂಗಳಲ್ಲೇ ಅವರು 3 ಬಾರಿ ಶಾರದಾಂಬೆಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

Vijaya Karnataka Web 21 Jul 2019, 11:33 am
ಚಿಕ್ಕಮಗಳೂರು: ನಾಳೆ ಸರಕಾರದ ಅಳಿವು-ಉಳಿವಿನ ಹಿನ್ನೆಲೆ ರೇವಣ್ಣನ ಟೆಂಪಲ್ ರನ್ ಮುಂದುವರೆದಿದೆ. ಬರಿಗಾಲಲ್ಲಿ ದೇವಾಲಯಗಳನ್ನ ಸುತ್ತುತ್ತಿರೋ ರೇವಣ್ಣ ಭಾನುವಾರ (ಜುಲೈ 21, 2019) ಮತ್ತೆ ಶೃಂಗೇರಿ ಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
Vijaya Karnataka Web revanna sringeri


ಬೆಳಗಿನ ಜಾವ 5.30ಕ್ಕೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಗೆ ಬಂದ ರೇವಣ್ಣ ಶಾರದಾಂಬೆ ಹಾಗೂ ತೋರಣ ಗಣಪತಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಪೂಜೆ ಸಲ್ಲಿಸಿದ ಬಳಿಕ ಬೆಳಗ್ಗೆ 7.30ಕ್ಕೆ ರೇವಣ್ಣ ಹಿಂದಿರುಗಿದ್ದಾರೆ.

ಜುಲೈ 9 ರಂದಷ್ಟೇ ರೇವಣ್ಣ ಶೃಂಗೇರಿಗೆ ಬಂದಿದ್ದರು. ಒಟ್ಟಾರೆ ಜುಲೈ ತಿಂಗಳಲ್ಲೇ ಮೂರು ಬಾರಿ ರೇವಣ್ಣ ಶೃಂಗೇರಿಗೆ ಭೇಟಿ ನೀಡಿದ್ದಾರೆ. ಅಧಿಕಾರ ಹಾಗೂ ಅದರ ಉಳಿವಿಗಾಗಿ ಹಲವು ಬಾರಿ ಶೃಂಗೇರಿ ಶಾರದಾಂಬೆಗೆ ರೇವಣ್ಣ ಪೂಜೆ ಸಲ್ಲಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು, ಕಳೆದ ಒಂದೂವರೆ ವರ್ಷದಲ್ಲಿ ದೇವೇಗೌಡರ ಕುಟುಂಬ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ಶಾರದಾಂಬೆಯಲ್ಲಿ ಹಲವು ಯಾಗ-ಯಜ್ಞಗಳನ್ನು ನಡೆಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ