ಆ್ಯಪ್ನಗರ

ಎಳೆನೀರು, ಸೌತೆಕಾಯಿಗೆ ಭರ್ಜರಿ ಬೇಡಿಕೆ

ತೈಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್‌ ನೇತೃತ್ವದಲ್ಲಿ ಬಂದ್‌ ಕರೆ ನೀಡಿದ್ದ ಹಿನ್ನೆಲೆಯಲ್ಲಿ ನಗರದ ಹೊಟೇಲ್‌ಗಳು ಬಂದ್‌ ಆಗಿದ್ದ ಕಾರಣ ಎಳೆ ನೀರು, ಸೌತೆಕಾಯಿ. ಕಬ್ಬಿನಹಾಲು ಕುಡಿದು ಜನ ಹಸಿವು, ಬಾಯಾರಿಕೆ ನೀಗಿಸಿಕೊಂಡರು.

Vijaya Karnataka 11 Sep 2018, 5:00 am
ಚಿಕ್ಕಮಗಳೂರು : ತೈಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್‌ ನೇತೃತ್ವದಲ್ಲಿ ಬಂದ್‌ ಕರೆ ನೀಡಿದ್ದ ಹಿನ್ನೆಲೆಯಲ್ಲಿ ನಗರದ ಹೊಟೇಲ್‌ಗಳು ಬಂದ್‌ ಆಗಿದ್ದ ಕಾರಣ ಎಳೆ ನೀರು, ಸೌತೆಕಾಯಿ. ಕಬ್ಬಿನಹಾಲು ಕುಡಿದು ಜನ ಹಸಿವು, ಬಾಯಾರಿಕೆ ನೀಗಿಸಿಕೊಂಡರು.
Vijaya Karnataka Web CKM-10rudrap1


ಬಂದ್‌ ಹಿನ್ನೆಲೆಯಲ್ಲಿ ನಗರದ ಯಾವೊಂದು ಹೊಟೇಲ್‌ಗಳೂ ಬಾಗಿಲು ತೆರೆದಿರಲಿಲ್ಲ. ಸುಡು ಬಿಸಿಲು ನೆತ್ತಿಗೇರಿ ಮಧ್ಯಾಹ್ನ 1 ಗಂಟೆಯಾಗುತ್ತಿದ್ದಂತೆ ನೀರಡಿಕೆ, ಹಸಿವು ಹೆಚ್ಚಾದಂತೆ ಕಾರ್ಮಿಕರು, ಗ್ರಾಮೀಣ ಭಾಗದಿಂದ ನಗರಕ್ಕೆ ಬಂದವರು, ದಾಖಲೆ ಪರಿಶೀಲನೆಗೆ ಬಂದ ಭಾವಿ ಗ್ರಾಮಲೆಕ್ಕಿಗರು ಹಸಿವಿನಿಂದ ಚಡಪಡಿಸತೊಡಗಿದರು. ಹಸಿವು ನೀಗಿಸಿಕೊಳ್ಳಲು ಗಲ್ಲಿಗಲ್ಲಿಯಲ್ಲಿ ಸಣ್ಣಪುಟ್ಟ ಹೊಟೇಲ್‌ ತೆರೆದಿರಬಹುದೆಂಬ ಆಶಾಭಾವನೆಯಿಂದ ಹುಡುಕಾಟ ನಡೆಸಿದರು. ಆದರೆ, ಹೊಟೇಲ್‌, ಮಿನಿ ಹೊಟೇಲ್‌, ಟೀಸ್ಟಾಲ್‌, ಬೇಕರಿ ಮತ್ತಿತರೆ ತಿಂಡಿ ತಿನಿಸಿನ ಎಲ್ಲ ಅಂಗಡಿಗಳು ಬಂದ್‌ಆಗಿದ್ದವು. ಕೆಲವೆಡೆ ಬೀದಿ ಬದಿಯಲ್ಲಿ ಎಳೆನೀರು, ಕಬ್ಬಿನಹಾಲು, ಸೌತೆಕಾಯಿ ಮತ್ತಿತರೆ ಹಣ್ಣುಗಳು ಮಾರಾಟಕ್ಕೆ ಲಭ್ಯವಿದ್ದವು. ಎಲ್ಲೂ ಆಹಾರ ಸಿಗದ ಹಿನ್ನೆಲೆಯಲ್ಲಿ ಕೆಲವರು ಎಳೆ ನೀರು ಕುಡಿದರು ಮತ್ತೆ ಕೆಲವರು ಎಳೆ ಸೌತೆಕಾಯಿ ತಿಂದು ಕಬ್ಬಿನ ಹಾಲು ಕುಡಿದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ದೃಶ್ಯ ಕಂಡುಬಂತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ