ಆ್ಯಪ್ನಗರ

ಶಾಲೆ ತೊಟ್ಟಿಗೆ ಬಿದ್ದು ವಿದ್ಯಾರ್ಥಿ ಸಾವು

ಶಾಲೆ ಆವರಣದೊಳಗಿರುವ ನೀರಿನ ನೆಲಮಟ್ಟದ ತೊಟ್ಟಿಗೆ ಪುಟ್ಟ ಬಾಲಕನೊಬ್ಬ ಬಿದ್ದು ಮೃತಪಟ್ಟ ಧಾರುಣ ಘಟನೆ ತಾಲೂಕಿನ ನಿಡಘಟ್ಟ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿಮಂಗಳವಾರ ನಡೆದಿದೆ.

Vijaya Karnataka 4 Sep 2019, 5:00 am
ಕಡೂರು: ಶಾಲೆ ಆವರಣದೊಳಗಿರುವ ನೀರಿನ ನೆಲಮಟ್ಟದ ತೊಟ್ಟಿಗೆ ಪುಟ್ಟ ಬಾಲಕನೊಬ್ಬ ಬಿದ್ದು ಮೃತಪಟ್ಟ ಧಾರುಣ ಘಟನೆ ತಾಲೂಕಿನ ನಿಡಘಟ್ಟ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿಮಂಗಳವಾರ ನಡೆದಿದೆ.
Vijaya Karnataka Web BNG-SMG-0309-2-15-3KDR1_35


ಶಾಲೆಯ 2ನೇ ತರಗತಿ ವಿದ್ಯಾರ್ಥಿ ಎನ್‌.ವಿ.ಪುನೀತ್‌(8) ಮೃತಪಟ್ಟ ಬಾಲಕ. ನೀರಲ್ಲಿಮುಳುಗಿದ್ದ ಪುನೀತ್‌ಗೆ ತಕ್ಷಣ ನಿಡಘಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿಪ್ರಾಥಮಿಕ ಚಿಕಿತ್ಸೆ ಕೊಡಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಕಡೂರಿಗೆ ಕರೆತಂದಾಗ ಮೃತಪಟ್ಟಿರುವುದು ಗೊತ್ತಾಗಿದೆ.

ಮಧ್ಯಾಹ್ನ ಬಿಸಿಯೂಟ ಸವಿದ ನಂತರ ಪುನೀತ್‌ ನೆಲಮಟ್ಟದ ನೀರಿನ ತೊಟ್ಟಿಗೆ ಬಿದ್ದಿದ್ದನ್ನು ವಿದ್ಯಾರ್ಥಿಯೊಬ್ಬ ಗಮನಿಸಿ ಅಡುಗೆ ಸಹಾಯಕರಿಗೆ ತಿಳಿಸಿದ್ದಾನೆ. ಅಡುಗೆ ಸಹಾಯಕರು, ಮುಖ್ಯಶಿಕ್ಷಕಿ ಚಂದ್ರಮ್ಮ, ಅಲ್ಲೇ ಇದ್ದ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರಕಾಶ್‌ ಜತೆಗೂಡಿ ನೀರಿನ ತೊಟ್ಟಿ ಬಳಿಗೆ ಓಡಿ ಬಂದಿದ್ದಾರೆ. ಅಧ್ಯಕ್ಷ ಪ್ರಕಾಶ್‌ ಮತ್ತಿತರರು ವಿದ್ಯಾರ್ಥಿ ಪುನೀತ್‌ನನ್ನು ನೀರಿನಿಂದ ಮೇಲೆತ್ತಿ ನಿಡಘಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ಆದರೆ ಅಲ್ಲಿಪ್ರಥಮ ಚಿಕಿತ್ಸೆಗೆ ಅಗತ್ಯ ಪರಿಕರಗಳಿಲ್ಲದ್ದರಿಂದ ಕೂಡಲೇ ಕಡೂರಿಗೆ ಕೊಂಡೊಯ್ದು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆಗೆ ಸ್ಪಂದಿಸದ ಪುನೀತ್‌ ಮೃತಪಟ್ಟಿದ್ದಾನೆ. ನಂತರ ಮೃತದೇಹವನ್ನು ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ತರಲಾಯಿತು.

ಘಟನೆಯಿಂದ ವಿದ್ಯಾರ್ಥಿಯ ತಂದೆ ವಿಜಯ್‌ಕುಮಾರ್‌, ತಾಯಿ ಅನಿತಾ ಹಾಗೂ ಕುಟುಂಬದವರ ಆಕ್ರಂದನ ಮುಗಿಲುಮುಟ್ಟುವಂತಿತ್ತು. ಕಡೂರು ಸಾರ್ವಜನಿಕ ಆಸ್ಪತ್ರೆಯಲ್ಲಿಗ್ರಾಮದ ನೂರಾರು ಜನರು ಹಾಗೂ ಬಂಧುಗಳು ಜಮಾಯಿಸಿದ್ದರು. ಜಿ.ಪಂ ಅಧ್ಯಕ್ಷೆ ಸುಜಾತ, ಉಪಾಧ್ಯಕ್ಷ ಜಿ.ಎನ್‌.ವಿಜಯ್‌ಕುಮಾರ್‌ ಸೇರಿದಂತೆ ಹಲವು ಮುಖಂಡರು ಮತ್ತು ತಹಸೀಲ್ದಾರ್‌ ಜೆ.ಉಮೇಶ್‌ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಆಸ್ಪತ್ರೆಗೆ ಧಾವಿಸಿ ಕುಟುಂಬದವರನ್ನು ಸಂತೈಸಿದರು. ಸಖರಾಯಪಟ್ಟಣ ಪೊಲೀಸ್‌ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.

ಘಟನೆ ದುರದೃಷ್ಟಕರ. ಈ ಬಗ್ಗೆ ಇಲಾಖೆ ವಿಚಾರಣೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಬೀರೂರು ಶೈಕ್ಷಣಿಕ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದರಾಜುನಾಯ್ಕ ತಿಳಿಸಿದ್ದಾರೆ.

ಸಭೆಯತ್ತ ಶಿಕ್ಷಕರ ಗಮನ : ಕ್ಷೇತ್ರ ಸಂಪನ್ಮೂಲ ಇಲಾಖೆಯ ವತಿಯಿಂದ ಶಿಕ್ಷಕರಿಗೆ ವಿವಿಧ ತರಬೇತಿ ಮತ್ತು ಸಭೆಗಳನ್ನು ಆಯೋಜಿಸುವ ಪರಿಪಾಠವಿದ್ದು ಇದನ್ನು ಇಲಾಖೆಯ ಅಧಿಕಾರಿಗಳು ನಿಗದಿತ ದಿನಗಳಲ್ಲಿಒಂದೊಂದು ಶಾಲೆಯಲ್ಲಿಹಮ್ಮಿಕೊಳ್ಳುತ್ತಾರೆ. ಮಂಗಳವಾರ ನಿಡಘಟ್ಟ ಶಾಲೆಯಲ್ಲಿಇಂತಹ ಸಭೆಯೊಂದನ್ನು ವ್ಯವಸ್ಥೆ ಮಾಡಲಾಗಿತ್ತು. ಈ ಸಂದರ್ಭ ಶಾಲಾ ಶಿಕ್ಷಕರು ಸಭೆ ಅಥವಾ ತರಬೇತಿಯ ಕಡೆ ಗಮನ ಕೇಂದ್ರೀಕರಿಸಿದ್ದರಿಂದ ಮಕ್ಕಳ ಚಟುವಟಿಕೆ ಗಮನಹರಿಸಲು ಸಾಧ್ಯವಾಗಿರಲಿಲ್ಲಎನ್ನಲಾಗಿದೆ. ಅಲ್ಲದೆ, ಶಾಲೆ ಆವರಣದಲ್ಲಿನೆಲಮಟ್ಟದಲ್ಲಿನೀರಿನ ತೊಟ್ಟಿ ಇರುವುದು ಅಪಾಯಕಾರಿ ಎಂಬುದು ಮೊದಲೇ ತಿಳಿದಿರಬೇಕಿತ್ತು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ