ಆ್ಯಪ್ನಗರ

ವಿದ್ಯಾರ್ಥಿ ಕಾರ್ಯಕ್ರಮ ಜಾನಪದ ಪೂರಿತವಾಗಿರಲಿ

ಶಾಲೆ ವಾರ್ಷಿಕೋತ್ಸವಗಳಲ್ಲಿ ಪಾಶ್ಚಿಮಾತ್ಯ ಮತ್ತು ಅನ್ಯ ಭಾಷಾ ಚಿತ್ರಗೀತೆಗಳಿಗೆ ನೃತ್ಯ ಮಾಡುವ ಬದಲು ಜನಪದ ನೃತ್ಯ ಪ್ರದರ್ಶನದಿಂದ ಜೀವನದ ಆದರ್ಶ ಕಂಡುಕೊಳ್ಳಬಹುದು ಎಂದು ಪ್ರಾಚಾರ್ಯ ಎಚ್‌.ಎಂ.ನಾಗರಾಜ್‌ ರಾವ್‌ ಹೇಳಿದರು.

Vijaya Karnataka 15 Feb 2019, 5:00 am
ಚೌಳಹಿರಿಯೂರು: ಶಾಲೆ ವಾರ್ಷಿಕೋತ್ಸವಗಳಲ್ಲಿ ಪಾಶ್ಚಿಮಾತ್ಯ ಮತ್ತು ಅನ್ಯ ಭಾಷಾ ಚಿತ್ರಗೀತೆಗಳಿಗೆ ನೃತ್ಯ ಮಾಡುವ ಬದಲು ಜನಪದ ನೃತ್ಯ ಪ್ರದರ್ಶನದಿಂದ ಜೀವನದ ಆದರ್ಶ ಕಂಡುಕೊಳ್ಳಬಹುದು ಎಂದು ಪ್ರಾಚಾರ್ಯ ಎಚ್‌.ಎಂ.ನಾಗರಾಜ್‌ ರಾವ್‌ ಹೇಳಿದರು.
Vijaya Karnataka Web CKM-14CHR01


ಅವರು ಇಲ್ಲಿನ ಡಾ.ಬಿ.ಆರ್‌.ಅಂಬೇಡ್ಕರ್‌ ಶಾಲೆ ವಾರ್ಷಿಕೊತ್ಸವದಲ್ಲಿ ಉಪನ್ಯಾಸ ನೀಡಿದರು. ಅವಿಭಕ್ತ ಕುಟುಂಬ ವ್ಯವಸ್ಥೆ ದೂರವಾಗಿರುವುದರಿಂದ ಮಕ್ಕಳ ಪೋಷಣೆ ಬೇಬಿ ಸಿಟಿಂಗ್‌ ನತ್ತ ಸಾಗಿದೆ. ಅಪ್ಪ, ಅಮ್ಮನ ಪ್ರೀತಿ ವಾತ್ಸಲ್ಯದಿಂದ ವಂಚಿತರಾಗಿ ಬೆಳೆಯುವ ಮಕ್ಕಳು, ಪೋಷಕರು ವೃದ್ಧಾಶ್ರಮದಲ್ಲಿ ಜೀವನ ಸವೆಸುವ ಸ್ಥಿತಿ ಎದುರಾಗಿದೆ. ಜಿಲ್ಲೆಯಲ್ಲೇ ಅತಿಥಿ ಸತ್ಕಾರ ಮತ್ತು ಸಂಸ್ಕಾರಕ್ಕೆ ಈ ಗ್ರಾಮ ಹೆಸರಾಗಿದೆ ಎಂದರು.

ಎಪಿಎಂಸಿ ನಿರ್ದೇಶಕ ಎನ್‌.ಒ.ರವಿಕುಮಾರ್‌ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಾಲೆಗೆ ಅಗತ್ಯವಿರುವ ವ್ಯವಸ್ಥೆಗೆ ಸ್ಪಂದಿಸುತ್ತಾ ಬಂದಿದ್ದೆನೆ. ಮುಂದೆಯೂ ಸ್ಪಂದಿಸಿ ಸಹಕಾರ ನೀಡುವೆ ಎಂದು ಭರವಸೆ ನೀಡಿದರು.

ಚಟ್ನಳ್ಳಿ ಶಾಲಾ ಶಿಕ್ಷ ಕ ಧರಣೇಶ್‌ ಮಾತನಾಡಿ, ಗ್ರಾಮಂತರ ಪ್ರದೇಶಗಳಲ್ಲಿ ಗುಣಾತ್ಮಕ ಶಿಕ್ಷ ಣ ನೀಡುವ ಹಿನ್ನೆಲೆಯಲ್ಲಿ ಇಂತಹ ವಸತಿ ಶಾಲೆಗಳನ್ನು ನೆಡೆಸುವುದರಿಂದ ಬಡತನ ರೇಖೆಯಲ್ಲಿ ಬಳಲುತ್ತಿರುವ ಮಕ್ಕಳ ಬಾಳಿಗೆ ದಾರಿದೀಪವಾಗಿದೆ. ಮಕ್ಕಳು ಮತ್ತು ಶಿಕ್ಷ ಕರ ಬಾಂಧವ್ಯದಿಂದ ಉತ್ತಮ ವಿದ್ಯಾಭ್ಯಾಸ ಸಾಕ್ಷೀಕರಿಸುತ್ತದೆ ಎಂದರು.

ತಾ.ಪಂ.ಅಧ್ಯಕ್ಷೆ ಭಾರತಿ ಪ್ರಹ್ಲಾದ್‌, ಮಾಜಿ ಅಧ್ಯಕ್ಷ ಪ್ರವೀಣ್‌ನಾಯ್ಕ ಮಾತನಾಡಿದರು.

ದಿವ್ಯಶ್ರೀ ಮಕ್ಕಳಿಗೆ ಪ್ರತಿಭಾಪುರಸ್ಕಾರ ನೆರವೇರಿಸಿ ಕೊಟ್ಟರು. ಸಿ.ಆರ್‌.ಸುನಿತಾ ಶಾಲಾ ಆದರ್ಶ ವಿದ್ಯಾರ್ಥಿಯ ಕಿರು ಪರಿಚಯ ಮಾಡಿಕೊಟ್ಟು ಸನ್ಮಾನಿಸಿದರು.

ಕಟ್ಟಡ ಮಾಲೀಕರಾದ ಎಚ್‌.ಕೆ.ದೊಡ್ಡಯ್ಯ ಮತ್ತು ವಸತಿ ಶಾಲೆ ಪ್ರಾಚಾರ್ಯ ಧನಂಜಯ ಉಪಸ್ಥತರಿದ್ದರು. ಶಿಕ್ಷ ಕಿ ಕೆ.ಎನ್‌.ಬಿಂದು ಶಾಲಾ ವಾರ್ಷಿಕ ವರದಿ ವಾಚಿಸಿದರು. ಗ್ರಾ.ಪಂ. ಅಧ್ಯಕ್ಷೆ ರಾಧಾ ಮಂಜುನಾಥ್‌ ಅಧ್ಯಕ್ಷ ತೆ ವಹಿಸಿದ್ದರು. ಸೂರ್ಯ ಸಂಗಡಿಗರು ಪ್ರಾರ್ಥಿಸಿ, ಜಯಣ್ಣ ಬೂದಾಳ್‌ ಸ್ವಾಗತಿಸಿದರು. ಅಶೋಕ್‌ ವಂದಿಸಿ, ಸೋಮೇಶ್ವರ ಪ್ರಸನ್ನ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ