ಆ್ಯಪ್ನಗರ

ವಿದ್ಯಾರ್ಥಿಗಳಿಗೆ ಕಲಿಕಾ ಆಸಕ್ತಿ ಅಗತ್ಯ

ಪದವಿ ಹಂತದ​ಲ್ಲಿರುವ ವಿದ್ಯಾರ್ಥಿಗಳಿಗೆ ಕಲಿಯುವ ಇಚ್ಛಾಶಕ್ತಿ ಅಗತ್ಯ ಎಂದು ಶಿಕಾರಿಪುರ ಅಕ್ಷ ರ ವಸತಿ ಶಿಕ್ಷ ಣ ಸಂಸ್ಥೆಗಳ ಸ್ಥಾಪಕ ಡಿ. ರವಿಕುಮಾರ್‌ ಹೇಳಿದರು.

Vijaya Karnataka 30 Mar 2019, 5:00 am
ಅಜ್ಜಂಪುರ : ಪದವಿ ಹಂತದಲ್ಲಿರುವ ವಿದ್ಯಾರ್ಥಿಗಳಿಗೆ ಕಲಿಯುವ ಇಚ್ಛಾಶಕ್ತಿ ಅಗತ್ಯ ಎಂದು ಶಿಕಾರಿಪುರ ಅಕ್ಷ ರ ವಸತಿ ಶಿಕ್ಷ ಣ ಸಂಸ್ಥೆಗಳ ಸ್ಥಾಪಕ ಡಿ. ರವಿಕುಮಾರ್‌ ಹೇಳಿದರು.
Vijaya Karnataka Web ckm-29ajp01


ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ 2018-19ನೇ ಸಾಲಿನ ಸಾಂಸ್ಕೃತಿಕ, ಕ್ರೀಡಾ, ರಾಷ್ಟ್ರೀಯ ಸೇವಾ ಯೋಜನೆ, ಯೂತ್‌ ರೆಡ್‌ ಕ್ರಾಸ್‌, ರೋವರ್ಸ್‌ ಮತ್ತು ರೇಂಜರ್ಸ್‌ ಚಟುವಟಿಕೆಗಳ ಸಮಾರೋಪ ಸಮಾರಂಭ, ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅಂಗೈಲಿ ಪ್ರಪಂಚ ನೋಡುವ ಕಾಲದಲ್ಲಿ ನಾವಿದ್ದೇವೆ. ಯಾರಿಗೂ ಶಿಕ್ಷ ಣ ಬೇಡವಾಗಿದೆ. ಶಿಕ್ಷ ಣ ಪೂರೈಸಿದವರು ಏನು ಮಾಡಬೇಕೆಂದು ತೋಚದೆ ಹತಾಶರಾಗಿ ಕೈಕಟ್ಟಿ ಕೂರುತ್ತಾರೆ. ಯಾರಿಗೂ ಭವಿಷ್ಯದ ಬಗ್ಗೆ ಚಿಂತೆ ಇಲ್ಲ. ಇದಕ್ಕೆ ಪೂರಕವಾಗಿ ಪೋಷಕರೂ ಅವರ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂದರು.

ಇದೇ ಕಾಲೇಜಿನಲ್ಲಿ ತಿಂಗಳಿಗೆ ಕೇವಲ 500 ರೂ. ವೇತನ ಪಡೆದು ಅರೆಕಾಲಿಕ ಉಪನ್ಯಾಸಕನಾಗಿ ವೃತ್ತಿ ಜೀವನ ಮಾಡುತ್ತಿದ್ದ ನಾನು ಇಂದು ಬಹುಕೋಟಿ ವೆಚ್ಚದ ಸುಸಜ್ಜಿತ ವಸತಿ ಶಾಲೆ ನಡೆಸುತ್ತಿದ್ದೇನೆ. ನನ್ನ ಇಬ್ಬರೂ ಮಕ್ಕಳು ನನ್ನ ಶಾಲೆಯಲ್ಲಿ ಓದುತ್ತಿದ್ದಾರೆ. 2000 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.ಇದಕ್ಕೆ ಆತ್ಮವಿಶ್ವಾಸವೇ ಕಾರಣ. ಪ್ರತಿಯೊಬ್ಬರೂ ಜೀವನದಲ್ಲಿ ದೃತಿಗೆಡದೆ ಆತ್ಮವಿಶ್ವಾಸದಿಂದ ಮುನ್ನುಗ್ಗಬೇಕು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಅಧ್ಯಾಪಕ ಎನ್‌.ಎಲ್‌. ಆನಂದ್‌, ನಮ್ಮ ಸಂಸ್ಕೃತಿ ದ್ವೀಪದಂತೆ ಹರಿದು ಹಂಚಿ ಹೋಗಿದೆ. ಶಿಕ್ಷ ಣ ವ್ಯಾಪಾರೀಕರಣ ಆಗಿರುವ ಸಂದರ್ಭ ಸಮಾಜಮುಖಿಯಾಗಿ ಚಿಂತಿಸುವ ವಿದ್ಯಾರ್ಥಿಗಳು ಸಮಾಜಕ್ಕೆ ಕೊಡುಗೆ ನೀಡಬೇಕಿದೆ. ಕಾಲೇಜಿನಲ್ಲಿ ಪಠ್ಯ ಪುಸ್ತಕದ ಜತೆಗೆ ಸಾಂಸ್ಕೃತಿಕ, ಎನ್ನೆಸ್ಸೆಸ್‌, ಯೂತ್‌ ರೆಡ್‌ ಕ್ರಾಸ್‌ ಇತರೆ ಚಟುವಟಿಕೆಗಳು ನಡೆಯುತ್ತಿದ್ದು ಈ ಸಾಲಿನಲ್ಲಿ 42 ಕಾರ್ಯಕ್ರಮಗಳು ನಡೆದದ್ದು, ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ ಎಂದರು.

ಜಾನಪದ ಅಕಾಡೆಮಿ ಗೌರವ ಪ್ರಶಸ್ತಿ ಪುರಸ್ಕೃತ ಜಿ.ವಿ. ಕೊಟ್ರೇಶಪ್ಪ ಮಾತನಾಡಿ, 1928ರಲ್ಲಿ ಗೌರಾಪುರ ಗ್ರಾಮದಲ್ಲಿ ವೀರಗಾಸೆ ಕಲೆ ಪ್ರಾರಂಭ ಆಗಿದ್ದು 4 ತಲೆಮಾರಿನಿಂದ ಈ ಕಲೆ ಪ್ರಚಲಿತದಲ್ಲಿದೆ. ಸಧ್ಯದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ವೀರಗಾಸೆ ಕಲೆ ಕಲಿಸುವುದರ ಜತೆಗೆ ಈ ಕಲೆಯನ್ನು ಮುಂದಿನ ಪೀಳಿಗೆಗೆ ಮುಂದುವರಿಸಲು ಶ್ರಮಿಸುತ್ತೇನೆ ಎಂದರು.

ಅಧ್ಯಕ್ಷ ತೆ ವಹಿಸಿ ಮಾತನಾಡಿದ ಕಾಲೇಜು ಪ್ರಾಚಾರ್ಯ ಈ. ಮಹಾಲಿಂಗಪ್ಪ, ಭೂಮಿಗೆ ಬಿದ್ದ ಬೀಜ ಎದೆಗೆ ಬಿದ್ದ ಅಕ್ಷ ರ ಎಂದೂ ಯಾವತ್ತೂ ನಮ್ಮ ಕೈ ಬಿಡುವುದಿಲ್ಲ. ಅದರಂತೆ ವಿದ್ಯಾರ್ಥಿಗಳು ಶಿಕ್ಷ ಣ ಕಲಿಕೆಗೆ ಹೆಚ್ಚು ಮಹತ್ವ ನೀಡಬೇಕು ಎಂದರು. ಅತಿಥಿಗಳನ್ನು ಕಾಲೇಜು ದ್ವಾರದಿಂದ ಸ್ವಾಗತಿಸಲಾಯಿತು. ಕಾಲೇಜು ವಿದ್ಯಾರ್ಥಿಗಳು ಇದೇ ಮೊದಲ ಬಾರಿಗೆ ಡೊಳ್ಳು ಕುಣಿತ ಪ್ರದರ್ಶಿಸುವುದರ ಮೂಲಕ ಅವರನ್ನು ಕರೆತಂದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಪ್ರಾಣಿ ಪಕ್ಷಿಗಳ ಧ್ವನಿ ಅನುಕರಣೆ ಮಾಡಿದ ಮಿಮಿಕ್ರಿ ಕಲಾವಿದ ಮಹೇಶ್‌ ಅವರ ಕಂಠ ಸಿರಿ ಮೆಚ್ಚುಗೆ ಗಳಿಸಿತು. ವಿವಿಧ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ, ರಕ್ತದಾನಿಗಳಿಗೆ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತು. ಕ್ರೀಡಾ ವಾಚನವನ್ನು ಮೋಹನಕುಮಾರ್‌, ಕಾಲೇಜು ವರದಿಯನ್ನು ಎ.ಎಸ್‌. ಮಿರ್ಜೆ ಓದಿದರು. ಸೌಂದರ್ಯ ಪ್ರಾರ್ಥಿಸಿ, ಸುಮ ಸ್ವಾಗತಿಸಿ, ಶಾರದ ನಿರೂಪಿಸಿ, ಮೋಹನಕುಮಾರ್‌ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ