ಆ್ಯಪ್ನಗರ

ಒಗ್ಗಟ್ಟಿನ ಪ್ರಯತ್ನದಿಂದ ಯಶಸ್ಸು ಸಾಧ್ಯ

ಒಗ್ಗಟ್ಟಿನಲ್ಲಿ ಬಲವಿದೆ. ಒಟ್ಟಾದ ಪ್ರಯತ್ನದಿಂದ ಯಶಸ್ಸು ಸಾಧ್ಯ. ಕ್ಷೇಮಾಭಿವೃದ್ಧಿಯ ಜತೆಗೆ ಸಂಬಂಧಗಳ ವೃದ್ಧಿಯೂ ಮುಖ್ಯ ಎಂದು ನಿವೃತ್ತ ಉಪನ್ಯಾಸಕ ಬಿ.ತಿಪ್ಪೇರುದ್ರಪ್ಪ ನುಡಿದರು.

Vijaya Karnataka 10 Jun 2019, 5:00 am
ಚಿಕ್ಕಮಗಳೂರು: ಒಗ್ಗಟ್ಟಿನಲ್ಲಿ ಬಲವಿದೆ. ಒಟ್ಟಾದ ಪ್ರಯತ್ನದಿಂದ ಯಶಸ್ಸು ಸಾಧ್ಯ. ಕ್ಷೇಮಾಭಿವೃದ್ಧಿಯ ಜತೆಗೆ ಸಂಬಂಧಗಳ ವೃದ್ಧಿಯೂ ಮುಖ್ಯ ಎಂದು ನಿವೃತ್ತ ಉಪನ್ಯಾಸಕ ಬಿ.ತಿಪ್ಪೇರುದ್ರಪ್ಪ ನುಡಿದರು.
Vijaya Karnataka Web CKM-9RUDRAP4


ರಾಮನಹಳ್ಳಿ ಬಡಾವಣೆಯ ಆರ್‌.ಕೆ.ಕನ್ವನ್ಷನ್‌ಹಾಲ್‌ನಲ್ಲಿ ಹನುಮಂತನಗರ ನಿವಾಸಿಗಳ ಗಿರಿದರ್ಶಿನಿ ಕ್ಷೇಮಾಭಿವೃದ್ಧಿ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಶನಿವಾರ ಅವರು ಮಾತನಾಡಿದರು.

ನಿವಾಸಿಗಳು ಒಟ್ಟಾಗಿ ಸಂಘಟನೆಯ ಮೂಲಕ ಪ್ರಯತ್ನಿಸಿದಾಗ ಜನಪ್ರತಿನಿಧಿಗಳು, ಅಧಿಕಾರಿಗಳು ಹೆಚ್ಚು ಸ್ಪಂದಿಸುತ್ತಾರೆ. ಅಭಿವೃದ್ಧಿ ಕಾರ‍್ಯಗಳಿಗೆ ಸಹಕಾರಿಯಾಗುತ್ತದೆ. ಬೇಡಿಕೆ ಇಡುವುದಷ್ಟೇ ಅಲ್ಲ. ಈ ಭಾಗದ ಪ್ರತಿಭೆಗಳ ಪ್ರದರ್ಶನಕ್ಕೂ ವೇದಿಕೆಯಾಗುತ್ತದೆ ಎಂದರು. ಮಕ್ಕಳು ಮತ್ತು ಮಹಿಳೆಯರಿಗೆ ಆಟೋಟಸ್ಪರ್ಧೆ, ಸಾಂಸ್ಕೃತಿಕ, ಮನರಂಜನಾಕಾರ‍್ಯಕ್ರಮ, ಗಣೇಶೋತ್ಸವದಂತಹ ಸಾಮೂಹಿಕ ಆಚರಣೆ ಜತೆಗೆ ಗಿಡ ನೆಟ್ಟು ಪೋಷಿಸುವುದು, ನೈರ್ಮಲ್ಯಪಾಲನೆ, ಶ್ರಮದಾನದಂತಹ ಕಾರ‍್ಯಕ್ರಮಗಳನ್ನು ಹಮ್ಮಿಕೊಳ್ಳಬಹುದು. ಹುದ್ದೆಗಳು ಅಧಿಕಾರದ ಗದ್ದುಗೆ ಅಲ್ಲ ಸೇವೆಗೆ ಸಿಕ್ಕ ಸದಾವಕಾಶ ಎಂಬ ಭಾವನೆ ಪದಾಧಿಕಾರಿಗಳಲ್ಲಿರಬೇಕು ಎಂದು ಹೇಳಿದರು.

ನಿವೃತ್ತ ಪ್ರಾಚಾರ್ಯ ಆರ್‌.ಗಫಾರ್‌ಬೇಗ್‌ ಸಂಘ ಉದ್ಘಾಟಿಸಿ ಮಾತನಾಡಿ ಸಮಾಜಮುಖಿ ಚಿಂತನೆಯೊಂದಿಗೆ ಸ್ಥಳೀಯ ಸಮಸ್ಯೆಗಳ ಪರಿಹಾರಕ್ಕೆ ಗಿರಿದರ್ಶಿನಿ ಸಹಕಾರಿಯಾಗಲಿ. ಸೌಹಾರ್ದತೆ, ಪ್ರೀತಿ, ವಿಶ್ವಾಸದ ಭಾವನೆ ಬೆಳೆಯಬೇಕು. ಬಡಾವಣೆಯ ನಿವಾಸಿಗಳೆಲ್ಲ ಒಂದುಕುಟುಂಬದವರೆಂಬ ಮನೋಭಾವ ತಾಳಬೇಕು. ನಾಗರಿಕ ಪ್ರಜ್ಞೆಯನ್ನು ಜಾಗೃತಗೊಳಿಸಬೇಕು ಎಂದರು.

ಸಂಘದ ಅಧ್ಯಕ್ಷ , ವಕೀಲ ಎಚ್‌.ಸಿ.ನಟರಾಜ್‌ ಅಧ್ಯಕ್ಷ ತೆ ವಹಿಸಿ ಮಾತನಾಡಿ ಬಡಾವಣೆಯ ಎಲ್ಲ ಜನರಿಗೂ ಮೂಲಭೂತಸೌಕರ‍್ಯ ದೊರೆಯಬೇಕು. ಪರಸ್ಪರ ಕಷ್ಟಸುಖ, ನೋವುನಲಿವುಗಳನ್ನು ಹಂಚಿಕೊಂಡು ಸೌಹಾರ್ದಯುತವಾಗಿ ಜೀವನ ಸಾಗಿಸಬೇಕು ಎಂಬ ಸದುದ್ದೇಶದಿಂದ ಗಿರಿದರ್ಶಿನಿ ಸ್ಥಾಪನೆಗೊಂಡಿದೆ ಎಂದರು. ನಗರಸಭೆಯ ನಿಕಟಕಪೂರ್ವ ಸದಸ್ಯ ಸುಧೀರ್‌ ಮಾತನಾಡಿ, ಹಲವು ವರ್ಷದ ಪ್ರಯತ್ನದ ನಂತರ ರಾಮನಹಳ್ಳಿ ಪೂರ್ಣ ಬಡಾವಣೆ ಒಂದೇ ಚೌಕಟ್ಟಿನಲ್ಲಿ ಗುರುತಿಸಿಕೊಳ್ಳುವಂತಾಗಿದೆ. 33ನೆಯ ವಾರ್ಡ್‌ಗೆ ಪೂರ್ಣಪ್ರಮಾಣದಲ್ಲಿ ಸೇರ್ಪಡೆಗೊಂಡಿದ್ದು, ಅಭಿವೃದ್ಧಿಗೆ ಅನುಕೂಲವಾಗಿದೆ ಎಂದರು.

ಉಪಾಧ್ಯಕ್ಷ ಎಂ.ಎಸ್‌.ಜಗದೀಶ್‌ ಮಾತನಾಡಿದರು. ನಿರ್ದೇಶಕರಾದ ತೀರ್ಥಕುಮಾರ್‌ ಸ್ವಾಗತಿಸಿ, ಪತ್ರಕರ್ತ ಸಿ.ಡಿ.ಚಂದ್ರೇಗೌಡ ವಂದಿಸಿದರು. ಚಿತ್ರಾಹರೀಶ್‌ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ