ಚಿಕ್ಕಮಗಳೂರು: ಪುಲ್ವಾಮ ದಾಳಿಗೆ ಪ್ರತೀಕಾರವಾಗಿ ಭಾರತೀಯ ವಾಯುಪಡೆ ವಿಮಾನಗಳು ಪಾಕಿಸ್ತಾನದ ಬಾಲಾಕೋಟ್ನಲ್ಲಿರುವ ಉಗ್ರ ತರಬೇತಿ ಶಿಬಿರಗಳನ್ನು ಧ್ವಂಸಗೊಳಿಸಿರುವುದನ್ನು ಇಡೀ ದೇಶವೇ ಸಂಭ್ರಮಿಸುತ್ತಿದೆ. ಆದರೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಗ್ಗೆ ತಮಗೆ ಮಾಹಿತಿಯೇ ಇಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ಚಿಕ್ಕಮಗಳೂರಿನ ತರೀಕೆರೆಯಲ್ಲಿ ತಮ್ಮನ್ನು ಪ್ರಶ್ನಿಸಿದ ಮಾಧ್ಯಮದ ಮಂದಿ ಎದುರು ಸಿದ್ದರಾಮಯ್ಯ ಈ ರೀತಿ ಹೇಳಿಕೆ ನೀಡಿದ್ದಾರೆ. ದಾಳಿ ಯಾರು ಮಾಡಿರೋದು ಎಂದು ಮರು ಪ್ರಶ್ನೆ ಹಾಕಿದರು.
ದೇಶವೇ ಸಂಭ್ರಮದಲ್ಲಿದ್ದರೂ ನಿಮಗೆ ಮಾಹಿತಿ ಇಲ್ಲವೆ ಎಂದು ಮರು ಪ್ರಶ್ನೆ ಹಾಕಿದ ಪತ್ರಕರ್ತರಿಗೆ, ನಾನು ಹೆಲಿಕ್ಯಾಪ್ಟರ್ ನಲ್ಲಿ ಬಂದೆ; ಹಾಗಾಗಿ ಮಾಹಿತಿ ಇಲ್ಲ ಎಂದ ಮಾಜಿ ಸಿಎಂ ಸಮಜಾಯಿಷಿ ನೀಡಿದರು.
ಬೆಳಗಿನ ಜಾವ 3:30ರ ಸುಮಾರಿಗೆ ದಾಳಿ ನಡೆಸಿದ ವಾಯುಪಡೆ ವಿಮಾನಗಳು ಯಶಸ್ವಿಯಾಗಿ ಹಿಂದಿರುಗಿವೆ. ಕೇಂದ್ರ ಸರಕಾರದ ಅಧಿಕೃತ ಹೇಳಿಕೆಯೂ ಹೊರಬಿದ್ದಿದೆ. ಎಲ್ಲ ಮಾಧ್ಯಮಗಳೂ ಬೆಳಗಿನಿಂದಲೇ ಸರ್ಜಿಕಲ್ ಸ್ಟ್ರೈಕ್ 2 ಸುದ್ದಿಗಳನ್ನು ಸತತವಾಗಿ ಬಿತ್ತರಿಸುತ್ತಿವೆ. ಹಾಗಿದ್ದರೂ ಮಧ್ಯಾಹ್ನ 3 ಗಂಟೆ ವೇಳೆಗೆ ಸುದ್ದಿಗಾರರು ಈ ಬಗ್ಗೆ ಪ್ರಶ್ನಿಸಿದಾಗಲೂ ಮಾಹಿತಿ ಇಲ್ಲ ಎಂದು ಸಿದ್ಧರಾಮಯ್ಯ ಹೇಳಿದರು.
ಚಿಕ್ಕಮಗಳೂರಿನ ತರೀಕೆರೆಯಲ್ಲಿ ತಮ್ಮನ್ನು ಪ್ರಶ್ನಿಸಿದ ಮಾಧ್ಯಮದ ಮಂದಿ ಎದುರು ಸಿದ್ದರಾಮಯ್ಯ ಈ ರೀತಿ ಹೇಳಿಕೆ ನೀಡಿದ್ದಾರೆ. ದಾಳಿ ಯಾರು ಮಾಡಿರೋದು ಎಂದು ಮರು ಪ್ರಶ್ನೆ ಹಾಕಿದರು.
ದೇಶವೇ ಸಂಭ್ರಮದಲ್ಲಿದ್ದರೂ ನಿಮಗೆ ಮಾಹಿತಿ ಇಲ್ಲವೆ ಎಂದು ಮರು ಪ್ರಶ್ನೆ ಹಾಕಿದ ಪತ್ರಕರ್ತರಿಗೆ, ನಾನು ಹೆಲಿಕ್ಯಾಪ್ಟರ್ ನಲ್ಲಿ ಬಂದೆ; ಹಾಗಾಗಿ ಮಾಹಿತಿ ಇಲ್ಲ ಎಂದ ಮಾಜಿ ಸಿಎಂ ಸಮಜಾಯಿಷಿ ನೀಡಿದರು.
ಬೆಳಗಿನ ಜಾವ 3:30ರ ಸುಮಾರಿಗೆ ದಾಳಿ ನಡೆಸಿದ ವಾಯುಪಡೆ ವಿಮಾನಗಳು ಯಶಸ್ವಿಯಾಗಿ ಹಿಂದಿರುಗಿವೆ. ಕೇಂದ್ರ ಸರಕಾರದ ಅಧಿಕೃತ ಹೇಳಿಕೆಯೂ ಹೊರಬಿದ್ದಿದೆ. ಎಲ್ಲ ಮಾಧ್ಯಮಗಳೂ ಬೆಳಗಿನಿಂದಲೇ ಸರ್ಜಿಕಲ್ ಸ್ಟ್ರೈಕ್ 2 ಸುದ್ದಿಗಳನ್ನು ಸತತವಾಗಿ ಬಿತ್ತರಿಸುತ್ತಿವೆ. ಹಾಗಿದ್ದರೂ ಮಧ್ಯಾಹ್ನ 3 ಗಂಟೆ ವೇಳೆಗೆ ಸುದ್ದಿಗಾರರು ಈ ಬಗ್ಗೆ ಪ್ರಶ್ನಿಸಿದಾಗಲೂ ಮಾಹಿತಿ ಇಲ್ಲ ಎಂದು ಸಿದ್ಧರಾಮಯ್ಯ ಹೇಳಿದರು.