ಆ್ಯಪ್ನಗರ

ಕಡೂರು-ಚಿಕ್ಕಮಗಳೂರು ಹೆದ್ದಾರಿಗೆ ಸಮೀಕ್ಷೆ

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಮಂಜೂರಾಗಿರುವ ಕಡೂರು ಕನಕ ಸರ್ಕಲ್‌ನಿಂದ ಚಿಕ್ಕಮಗಳೂರು ಬಂಟರ ಭವನದವರೆಗಿನ ರಸ್ತೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಶನಿವಾರ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್‌ಗಳ ಜತೆ ಶಾಸಕ ಸಿ.ಟಿ.ರವಿ ಸಮೀಕ್ಷೆ, ಚರ್ಚೆ ನಡೆಸಿದರು.

Vijaya Karnataka 6 Jan 2019, 5:00 am
ಚಿಕ್ಕಮಗಳೂರು : ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಮಂಜೂರಾಗಿರುವ ಕಡೂರು ಕನಕ ಸರ್ಕಲ್‌ನಿಂದ ಚಿಕ್ಕಮಗಳೂರು ಬಂಟರ ಭವನದವರೆಗಿನ ರಸ್ತೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಶನಿವಾರ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್‌ಗಳ ಜತೆ ಶಾಸಕ ಸಿ.ಟಿ.ರವಿ ಸಮೀಕ್ಷೆ, ಚರ್ಚೆ ನಡೆಸಿದರು.
Vijaya Karnataka Web CKM-5aragap7


ರಸ್ತೆಯನ್ನು ಅಭಿವೃದ್ಧಿಪಡಿಸುವ ಜತೆಗೆ ಈ ಮಾರ್ಗದಲ್ಲಿ ಬರುವ ಸೇತುವೆಗಳು, ಸರ್ಕಲ್‌ಗಳ ಅಭಿವೃದ್ಧಿ ಕೈಗೆತ್ತಿಕೊಳ್ಳಲಾಗುವುದು. ಈ ಬಗ್ಗೆ ವೈಜ್ಞಾನಿಕವಾಗಿ ನಿಯಮಾನುಸಾರ ಅಭಿವೃದ್ಧಿಪಡಿಸಲು ಹಾಗೂ ಗುಣಮಟ್ಟದ ರಸ್ತೆ, ಸೇತುವೆಗಳ ನಿರ್ಮಾಣಕ್ಕೆ ಎಂಜಿನಿಯರ್‌ಗಳು ಸಮರ್ಪಕವಾಗಿ ಕಾರ‍್ಯ ನಿರ್ವಹಿಸಬೇಕು ಎಂದು ಸಿ.ಟಿ.ರವಿ ಸೂಚಿಸಿದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್‌ಗಳಾದ ರವಿರಂಗಪ್ಪ, ಶಶಿಕುಮಾರ್‌, ಮುನಿರಾಜ್‌, ನಗರಸಭೆ ಎಂಜಿನಿಯರ್‌ ಲೋಕೇಶ್‌, ಒಳಚರಂಡಿ ಇಲಾಖೆ ಸಹಾಯಕ ಕಾರ‍್ಯಪಾಲಕ ಎಂಜಿನಿಯರ್‌ ಮಾರುತಿ, ನಗರಸಭೆ ಸದಸ್ಯ ಎಚ್‌.ಡಿ.ತಮ್ಮಯ್ಯ, ಜಿ.ಪಂ. ಸದಸ್ಯರಾದ ಸೋಮಶೇಖರ್‌, ಹಿರಿಗಯ್ಯ, ಪದ್ಮನಂದನ ಜೈನ್‌ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ