ಆ್ಯಪ್ನಗರ

ರವಿ ಪರ ತಮಿಳುನಾಡು ಮಾಜಿ ಸಂಸದ ಪ್ರಚಾರ

ಕೇಂದ್ರ ಸರಕಾರದ ಮಹತ್ವಾಕಾಂಕ್ಷೆ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸಿದರೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ತಮಿಳುನಾಡಿನ ಮಾಜಿ ಸಂಸದ ನರಸಿಂಹನ್‌ ಹೇಳಿದರು.

Vijaya Karnataka 5 May 2018, 5:00 am
ಚಿಕ್ಕಮಗಳೂರು : ಕೇಂದ್ರ ಸರಕಾರದ ಮಹತ್ವಾಕಾಂಕ್ಷೆ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸಿದರೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ತಮಿಳುನಾಡಿನ ಮಾಜಿ ಸಂಸದ ನರಸಿಂಹನ್‌ ಹೇಳಿದರು.
Vijaya Karnataka Web tamil nadus former mps campaign for ravi
ರವಿ ಪರ ತಮಿಳುನಾಡು ಮಾಜಿ ಸಂಸದ ಪ್ರಚಾರ


ಕ್ಷೇತ್ರದಲ್ಲಿ ತಮಿಳು ಸಮುದಾಯವಿರುವ ಕಡೆ ಶಾಸಕ ಸಿ.ಟಿ.ರವಿ ಪರ ಪ್ರಚಾರ ನಡೆಸಿ ಅವರು ಮಾತನಾಡಿದರು. ಪ್ರಧಾನಿ ನರೇಂದ್ರ ದಾಮೋದರ್‌ದಾಸ್‌ ಮೋದಿ ಅವರು ದೇಶವನ್ನು ಬಲಿಷ್ಠಗೊಳಿಸಿ ಸರ್ವಾಂಗೀಣ ಪ್ರಗತಿಯತ್ತ ಕೊಂಡೊಯ್ಯುವ ಆಶಯ ಹೊಂದಿದ್ದಾರೆ ಎಂದರು.

ಕಳೆದ ನಾಲ್ಕು ವರ್ಷದಲ್ಲಿ ಜನಧನ್‌, ಮೇಕ್‌ ಇನ್‌ ಇಂಡಿಯಾ, ಮುದ್ರಾ, ಜೀವನ್‌ ಜ್ಯೋತಿ ಮತ್ತಿತರೆ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ ಎಂದು ತಿಳಿಸಿದರು.

ಆದರೆ, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೇಸ್‌ ಪಕ್ಷ ದ ತಾರತಮ್ಯ ಧೋರಣೆಯಿಂದಾಗಿ ಈ ಯೋಜನೆಗಳು ರಾಜ್ಯದ ಜನತೆಗೆ ಸಮರ್ಪಕವಾಗಿ ತಲುಪುತ್ತಿಲ್ಲ ಎಂದು ಆಪಾದಿಸಿದರು.

ತಾಲೂಕಿನ ಮಲ್ಲೇನಹಳ್ಳಿ, ಹೊಸಪೇಟೆ, ನಗರದ ತಮಿಳು ಕಾಲೋನಿ ಸೇರಿದಂತೆ ವಿವಿಧ ಬಡಾವಣೆಯಲ್ಲಿ ಅವರು ಮನೆಮನೆಗೆ ತೆರಳಿ ಮತ ಯಾಚನೆ ಮಾಡಿದರು. ಬಿಜೆಪಿ ಮುಖಂಡರಾದ ಅನಿಲ್‌ಕುಮಾರ್‌, ರಾಜಶೇಖರ್‌, ಮುತ್ತಯ್ಯ, ಮಧು, ಜಿ.ಶಂಕರ್‌ ಹಾಜರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ