ಆ್ಯಪ್ನಗರ

ಕೋವಿಡ್‌ ಸುರಕ್ಷತೆಗೆ ತಾಂತ್ರಿಕತೆಯ ಸೇವಾಮಾರ್ಗ

ಕೋವಿಡ್‌ ಹಿನ್ನೆಲೆಯಲ್ಲಿಪೊಲೀಸರು ತಾಂತ್ರಿಕತೆ ಬಳಸಿಕೊಂಡು ಇಲಾಖೆಯಲ್ಲಿತಮ್ಮ ಕಾರ್ಯಕ್ಷಮತೆ ಹೆಚ್ಚಿಸಿಕೊಳ್ಳಲು ಸೂಚನೆ ನೀಡಲಾಗಿದೆ ಎಂದು ಪೊಲೀಸ್‌ ಮಹಾನಿರ್ದೇಶಕ ಪ್ರವೀಣ್‌ಸೂದ್‌ ಹೇಳಿದರು.

Vijaya Karnataka 15 Sep 2020, 5:00 am
ಚಿಕ್ಕಮಗಳೂರು: ಕೋವಿಡ್‌ ಹಿನ್ನೆಲೆಯಲ್ಲಿಪೊಲೀಸರು ತಾಂತ್ರಿಕತೆ ಬಳಸಿಕೊಂಡು ಇಲಾಖೆಯಲ್ಲಿತಮ್ಮ ಕಾರ್ಯಕ್ಷಮತೆ ಹೆಚ್ಚಿಸಿಕೊಳ್ಳಲು ಸೂಚನೆ ನೀಡಲಾಗಿದೆ ಎಂದು ಪೊಲೀಸ್‌ ಮಹಾನಿರ್ದೇಶಕ ಪ್ರವೀಣ್‌ಸೂದ್‌ ಹೇಳಿದರು.
Vijaya Karnataka Web 14RUDRAP1_35
ಪ್ರವೀಣ್‌ಸೂದ್‌, ಪೊಲೀಸ್‌ ಮಹಾನಿರ್ದೇಶಕ


ನಗರದಲ್ಲಿಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕೊರೊನಾ ನಿರ್ವಹಣೆಯಲ್ಲಿಜಿಲ್ಲಾಪೊಲೀಸರು ಉತ್ತಮ ಕಾರ್ಯ ಮಾಡಿದ್ದಾರೆ. ಇತ್ತೀಚೆಗೆ ಅನ್‌ಲಾಕ್‌ ಆದ ನಂತರ ಪ್ರಕರಣ ಹೆಚ್ಚಿರಬಹುದು. ರಾಜ್ಯದ ಇತರೆ ಜಿಲ್ಲೆಯಲ್ಲಿಪೊಲೀಸ್‌ ಅಧಿಕಾರಿ, ಸಿಬ್ಬಂದಿಗೆ ತೊಂದರೆ ಆಗಿದೆ. ರಾಜ್ಯದಲ್ಲಿ7 ಸಾವಿರ ಪೊಲೀಸರು ಸೋಂಕಿಗೆ ಒಳಗಾಗಿದ್ದಾರೆ. 55 ಮಂದಿ ಸಾವನ್ನಪ್ಪಿದ್ದಾರೆ. ಈ ಜಿಲ್ಲೆಯಲ್ಲಿಒಬ್ಬ ಸಿಬ್ಬಂದಿ ಸೋಂಕಿಗೆ ತುತ್ತಾಗಿದ್ದಾರೆ. ಈಗ ಕೊರೊನಾದೊಂದಿಗೆ ಪೊಲೀಸರ ಕೆಲಸವೂ ಆರಂಭವಾಗಿದೆ. ಪ್ರತಿಭಟನೆ, ಧರಣಿ ಮತ್ತಿತರೆ ಕಾರ್ಯಕ್ರಮಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿತಾಂತ್ರಿಕತೆ ಬಳಸಿಕೊಂಡು ಅಗತ್ಯ ಮುನ್ನೆಚ್ಚರಿಕಾ ಕ್ರಮದಿಂದ ಕರ್ತವ್ಯ ನಿರ್ವಹಿಸಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಈ ಹಿಂದೆ ಬಂಧಿಸಿದ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಬೇಕಿತ್ತು. ಈಗ ಆ ಕಾರ್ಯ ವಿಡಿಯೋ ಸಂವಾದದ ಮೂಲಕ ನಡೆಯುತ್ತಿದೆ. ಸಾಕ್ಷ್ಯಾಧಾರ, ಪ್ರಮಾಣ ಪತ್ರ ನೀಡುವ ಕೆಲಸವೂ ಆನ್‌ಲೈನಲ್ಲೇ ನಡೆಯುತ್ತಿದೆ. ಅಪಾಯದಲ್ಲಿಸಿಲುಕಿದವರು ದೂರವಾಣಿ 112ಕ್ಕೆ ಕರೆ ಮಾಡಿದರೆ ತೊಂದರೆಗೊಳಗಾದವರಿಗೆ ಪೊಲೀಸರು ನೆರವಾಗಲಿದ್ದಾರೆ ಎಂದರು.

ಕೋವಿಡ್‌ನಿಂದ ಸಾವಪ್ಪಿದ ಪೊಲೀಸರ ಕುಟುಂಬಕ್ಕೆ ಸರಕಾರ 48 ಗಂಟೆಯೊಳಗೆ 30 ಲಕ್ಷ ರೂ. ಪರಿಹಾರ ನೀಡಿದೆ. ಅವರ ಕುಟುಂಬವನ್ನು ನೋಡಿಕೊಳ್ಳುವ ಜವಾಬ್ದಾರಿ ಇಲಾಖೆ ಮೇಲೂ ಇದೆ ಎಂದರು.

ಪೊಲೀಸ್‌ ಇಲಾಖೆಯಲ್ಲಿಬಡ್ತಿ ನೀಡುವಾಗ ತಾರತಮ್ಯ ನಡೆಯುತ್ತಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, 40 ವರ್ಷದ ಹಿಂದೆ ಪೊಲೀಸ್‌ ಇಲಾಖೆಯಲ್ಲಿಮಹಿಳೆಯರೇ ಇರಲಿಲ್ಲ. ಕ್ರಮೇಣ ವಿರಳ ಸಂಖ್ಯೆಯಲ್ಲಿಸೇರ್ಪಡೆ ಆಗಿದ್ದರಿಂದ ಅವರಿಗೆ ಬೇಗ ಬಡ್ತಿ ದೊರೆತಿದೆ. 2004ಕ್ಕಿಂತ ಹಿಂದೆ ಇದರ ಅನುಕೂಲತೆ ಮಹಿಳೆಯರಿಗೆ ಸಿಕ್ಕಿದೆ. ಆದರೆ, ತರುವಾಯ ನ್ಯಾಯಾಲಯದ ಆದೇಶದಂತೆ ಮಹಿಳೆ ಮತ್ತು ಪುರುಷರ ಮಧ್ಯೆ ತಾರತಮ್ಯ ಇಲ್ಲದಂತೆ ಜೇಷ್ಠತೆ ಪಟ್ಟಿ ತಯಾರಾಗುತ್ತಿದೆ ಎಂದರು.

ಪ್ರಶ್ನೆಯೊಂದಕ್ಕೆ ನಗರದ ಉಪ್ಪಳ್ಳಿ ಕೊಲೆ ಪ್ರಕರಣದ ತನಿಖೆಯನ್ನು ಸಿಐಡಿ ನಡೆಸುತ್ತಿರುವುದರಿಂದ ಈ ಬಗ್ಗೆ ಪ್ರತಿಕ್ರಿಯೆ ನೀಡುವುದು ಸರಿಯಲ್ಲಎಂದರು.

..........
ಚಿಕ್ಕಮಗಳೂರು ಒಂದು ಪ್ರವಾಸಿ ತಾಣ. ಹೀಗಾಗಿ ಡ್ರಗ್ಸ್‌ ಬಗ್ಗೆ ಇಲ್ಲಿಹೆಚ್ಚಿನ ನಿಗಾವಹಿಸಲಾಗುತ್ತಿದೆ. ಹೋಂಸ್ಟೇಗಳಲ್ಲಿಮಾದಕ ವಸ್ತು ದೊರೆತರೆ ಅದಕ್ಕೆ ಮಾಲೀಕರನ್ನು ಹೊಣೆ ಮಾಡಬೇಕಾಗುತ್ತದೆ. ಡ್ರಗ್ಸ್‌ ಇರುವ ಬಗ್ಗೆ ಅವರೇ ಮಾಹಿತಿ ನೀಡಿದರೆ ಅವರಿಗೆ ರಿವಾರ್ಡ್‌ ನೀಡಲಾಗುವುದು. ಡ್ರಗ್ಸ್‌ ಜಾಲ ಪತ್ತೆಗೆ ಯಾವುದೇ ತಂಡ ರಚನೆ ಮಾಡಿಲ್ಲ. ಪ್ರತಿ ಪೊಲೀಸ್‌ಠಾಣೆಗಳ ಹೊಣೆಗಾರಿಕೆ ಇದೆ. ಬೆಂಗಳೂರು ಮಾತ್ರವಲ್ಲರಾಜ್ಯದ ಇತರೆ ಜಿಲ್ಲೆಗಳಲ್ಲೂಮಾದಕ ವಸ್ತುಗಳನ್ನು ಪತ್ತೆ ಹಚ್ಚಲಾಗುತ್ತಿದೆ.
-ಪ್ರವೀಣ್‌ಸೂದ್‌, ಪೊಲೀಸ್‌ ಮಹಾನಿರ್ದೇಶಕ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ