ಆ್ಯಪ್ನಗರ

ಶಿಕ್ಷಣಕ್ಕೆ ಆದ್ಯತೆ ನೀಡದ ರಾಷ್ಟ್ರಗಳಲ್ಲಿ ಭಯೋತ್ಪಾದಕತೆ

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಇಂಟರ್‌ ನೆಟ್‌ ಸೌಲಭ್ಯ ಸೇರಿದಂತೆ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಶಿಕ್ಷ ಣ ಪಡೆಯಬೇಕು ಎಂದು ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಟಿ.ಡಿ.ರಾಜೇಗೌಡ ಸಲಹೆ ನೀಡಿದರು.

Vijaya Karnataka 1 Mar 2019, 5:00 am
ನರಸಿಂಹರಾಜಪುರ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಇಂಟರ್‌ ನೆಟ್‌ ಸೌಲಭ್ಯ ಸೇರಿದಂತೆ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಶಿಕ್ಷ ಣ ಪಡೆಯಬೇಕು ಎಂದು ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಟಿ.ಡಿ.ರಾಜೇಗೌಡ ಸಲಹೆ ನೀಡಿದರು.
Vijaya Karnataka Web CKM-28NRP4


ತಾಲೂಕಿನ ಗಡಿ ಭಾಗವಾದ ಕುದುರೆಗುಂಡಿ ಸರಕಾರಿ ಪ್ರೌಢ ಶಾಲೆಯಲ್ಲಿ 8 ನೇ ತರಗತಿಯ 29 ವಿದ್ಯಾರ್ಥಿಗಳಿಗೆ ಗುರುವಾರ ಉಚಿತ ಸೈಕಲ್‌ ವಿತರಣೆ ಮಾಡಿ ಅವರು ಮಾತನಾಡಿದರು.ಇಂದು ಪ್ರಪಂಚದಲ್ಲಿ ಶಿಕ್ಷ ಣಕ್ಕೆ ಪ್ರಾಧಾನ್ಯತೆ ನೀಡಿರುವ ರಾಷ್ಟಗಳು ಆರ್ಥಿಕ ಅಭಿವೃದ್ಧಿ ಹೊಂದಿವೆ. ಆದರೆ, ಶಿಕ್ಷ ಣಕ್ಕೆ ಹೆಚ್ಚು ಗಮನ ನೀಡದೆ ಹಿಂದೆ ಬಿದ್ದ ರಾಷ್ಟಗಳು ಆರ್ಥಿಕ ಅಭಿವೃದ್ಧಿ ಸಾಧಿಸಲು ಸೋತು ಹೋಗಿ ಭಯೋತ್ಪಾದಕ ರಾಷ್ಟಗಳಾಗಿವೆ. ಬಹಳ ವರ್ಷಗಳ ಹಿಂದೆ ಶಿಕ್ಷ ಣ ಪಡೆಯದಿದ್ದರೂ ಜೀವನ ಮಾಡಬಹುದಿತ್ತು.ಆದರೆ,ಪ್ರಸ್ತುತ ಸನ್ನಿವೇಶದಲ್ಲಿ ಪ್ರತಿಯೊಬ್ಬ ಮಕ್ಕಳಿಗೂ ಶಿಕ್ಷ ಣ ಅತ್ಯಗತ್ಯವಾಗಿದೆ. ಕುದುರೆಗುಂಡಿ ಶಾಲೆಯ ಚಾವಣಿ ಹಾಗೂ ಶೌಚಾಲಯ ನಿರ್ಮಿಸಲು ಅನುದಾನ ನೀಡುವುದಾಗಿ ಭರವಸೆ ನೀಡಿದರು.

ಶಾಲೆಯ ಮುಖ್ಯ ಶ್ಷಿಕಕಿ ಎಸ್‌.ಎಮ್‌ ಶಮಂತ ಪ್ರಾಸ್ತಾವಿಕ ಮಾತನಾಡಿ, ಶಾಲೆಗೆ ಮೂಲ ಸೌಕರ್ಯ ಒದಗಿಸುವಂತೆ ಮನವಿ ಮಾಡಿದರು.ಸಭೆಯಲ್ಲಿ ಶಾಲೆಯ ಎಸ್‌ಡಿಎಂಸಿಅಧ್ಯಕ್ಷ ಎನ್‌.ಕೃಷ್ಣ,ಕೊಪ್ಪ ಸ.ಪದವಿ ಪೂರ್ವ ಕಾಲೇಜಿನ ಸಿ.ಡಿ.ಎಸ್‌ ಸದಸ್ಯ ನುಗ್ಗಿ ಮಂಜುನಾಥ್‌, ಯುವ ಕಾಂಗ್ರೆಸ್‌ ಮುಖಂಡ ನವೀನ್‌, ಕೊಪ್ಪ ಎಪಿಎಂಸಿ ಮಾಜಿ ಅಧ್ಯಕ್ಷ ಓಣಿತೋಟ ರತ್ನಾಕರ್‌,ಕಾಫಿ ಬೆಳೆಗಾರ ರಾಮಣ್ಣ,ಕೊಪ್ಪ ತಾಲೂಕು ಯುವ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ದೀಪಕ್‌,ಮುಖಂಡ ಖಾಂಡ್ಯಶಿವರಾಜ್‌, ದಾನಿಗಳಾದ ಕಡೇಗದ್ದೆ ಚಕ್ರಪಾಣಿ, ಕುದುರೆಗುಂಡಿ ಬಿ.ಕೆ.ಜಯರಾಜ್‌ ಉಪಸ್ಥಿತರಿದ್ದರು. ಇದೇ ಸಂದರ್ಭ ಶಾಸಕ ಟಿ.ಡಿ.ರಾಜೇಗೌಡ ಅವರನ್ನು ಸನ್ಮಾನಿಸಲಾಯಿತು.ಎಚ್‌.ಎ.ಉಷಾ ಸ್ವಾಗತಿಸಿದರು.ಶಂಕರಗೌಡ ನಿರೂಪಿಸಿದರು.ವಾಗ್ದೇವಿ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ