ಆ್ಯಪ್ನಗರ

ಚಿತ್ರೀಕರಣ ಮಾಡಿದವರಿಬ್ಬರ ಬಂಧನ

ಜೈನ ಧರ್ಮದ ಧಾರ್ಮಿಕ ಕ್ಷೇತ್ರ ಹಾಗೂ ಇತಿಹಾಸ ಪ್ರಸಿದ್ಧ ಪಂಚಮಿಕಲ್ಲಿನ ಹಿಂಭಾಗ ದಲ್ಲಿಅನೈತಿಕ ಚಟುವಟಿಕೆಯಲ್ಲಿತೊಡಗಿದ್ದ ಜೋಡಿಗಳ ವೀಡಿಯೊ ಚಿತ್ರೀಕರಣ ಮಾಡಿದ ಆರೋಪದಡಿ ಇಬ್ಬರನ್ನು ಜಯಪುರ ಪೊಲೀಸರು ಭಾನುವಾರ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Vijaya Karnataka 19 Nov 2019, 5:00 am
ಜಯಪುರ: ಜೈನ ಧರ್ಮದ ಧಾರ್ಮಿಕ ಕ್ಷೇತ್ರ ಹಾಗೂ ಇತಿಹಾಸ ಪ್ರಸಿದ್ಧ ಪಂಚಮಿಕಲ್ಲಿನ ಹಿಂಭಾಗ ದಲ್ಲಿಅನೈತಿಕ ಚಟುವಟಿಕೆಯಲ್ಲಿತೊಡಗಿದ್ದ ಜೋಡಿಗಳ ವೀಡಿಯೊ ಚಿತ್ರೀಕರಣ ಮಾಡಿದ ಆರೋಪದಡಿ ಇಬ್ಬರನ್ನು ಜಯಪುರ ಪೊಲೀಸರು ಭಾನುವಾರ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
Vijaya Karnataka Web 150817JPR3_35


ಶೃಂಗೇರಿ ಹನುಮಂತಪ್ಪ ಎಂಬಾತ ಯುವತಿಯೊಂದಿಗೆ ಪಂಚಮಿಕಲ್ಲಿನಲ್ಲಿರಾಸಲೀಲೆಯಲ್ಲಿತೊಡಗಿದ್ದ ವೇಳೆ ಅದನ್ನು ಚಿತ್ರೀಕರಿಸಿ ಪ್ರಚಾರ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೊಲೆ ಬೆದರಿಕೆ ಹಾಕಿದ್ದಲ್ಲದೇ ಹಲ್ಲೆನಡೆಸಿ, ಹಣ ದೋಚಿ, ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ಜಯಪುರ ಠಾಣೆಯಲ್ಲಿದೂರು ದಾಖಲಾಗಿತ್ತು.

ದೂರನ್ನು ಆಧರಿಸಿ ಪೊಲೀಸರು ಕೊಗ್ರೆಯ ನವೀನ್‌ ಜೈನ್‌ ಮತ್ತು ಮನೋಜ್‌ ಎಂಬುವವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಪ್ರಮುಖ ಆರೋಪಿ ವಿಶ್ವನಾಥ್‌ ಪೂಜಾರಿ ಅಲಿಯಾಸ್‌ ವಿಶ್ವ ಪರಾರಿಯಾಗಿದ್ದು, ತನಿಖೆ ಚುರುಕುಗೊಳಿಸಿದ್ದಾರೆ.

ಆರೋಪಿಗಳನ್ನು ಪೊಲೀಸರು ಶುಕ್ರವಾರ ರಾತ್ರಿ ಬಂಧಿಸಿದ್ದರೂ, ಭಾನುವಾರದವರೆಗೂ ಸತಾಯಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೋಲೀಸರ ಕ್ರಮಕ್ಕೆ ಆರೋಪಿಗಳ ಸಂಬಂಧಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
..................
ಸಾವಿರಾರು ವರ್ಷಗಳ ಇತಿಹಾಸವಿರುವ ಪಂಚಮಿಕಲ್ಲಿನಲ್ಲಿಅನೈತಿಕ ಚಟುವಟಿಕೆ ನಡೆಸಿದ ಜೋಡಿಗಳ ವಿರುದ್ಧ ಪೊಲೀಸರು ಸುಮೋಟೋ ಅಡಿ ಪ್ರಕರಣ ದಾಖಲಿಸಿ ಬಂಧಿಸಬೇಕು. ಈ ಪ್ರಕರಣದಿಂದಾಗಿ ಅಲ್ಪ ಸಂಖ್ಯಾತ ಪಂಗಡವಾದ ಜೈನ ಧರ್ಮದ ಧಾರ್ಮಿಕ ಪಾವಿತ್ರ್ಯತೆಗೆ ಧಕ್ಕೆ ಉಂಟಾಗಿದೆ. ಪೊಲೀಸರು ಶೀಘ್ರ ಕ್ರಮ ಕೈಗೊಳ್ಳದಿದ್ದಲ್ಲಿಹೋರಾಟ ಅನಿವಾರ್ಯವಾಗಬಹುದು.
-ಕೆ.ಎನ್‌.ಶಾಂತಿರಾಜ್‌ ಜೈನ್‌, ಕೆರೆಮನೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ