ಹಾಲು ಕಲಬೆರಕೆ ಆರೋಪಿಗಳಿಗೆ ಜಾಮೀನು ನಿರಾಕರಣೆ
ರಾಸಾಯನಿಕ ಮಿಶ್ರಿತ ನಕಲಿ ಹಾಲು ತಯಾರಿಸಿ ಹಾಸನ ಹಾಲು ಒಕ್ಕೂಟಕ್ಕೆ ಪೂರೈಕೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ಜಾಮೀನು ನೀಡಲು ಒಂದನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯ ನಿರಾಕರಿಸಿದೆ.
Vijaya Karnataka 31 Aug 2018, 5:00 am
ಚಿಕ್ಕಮಗಳೂರು : ರಾಸಾಯನಿಕ ಮಿಶ್ರಿತ ನಕಲಿ ಹಾಲು ತಯಾರಿಸಿ ಹಾಸನ ಹಾಲು ಒಕ್ಕೂಟಕ್ಕೆ ಪೂರೈಕೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ಜಾಮೀನು ನೀಡಲು ಒಂದನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯ ನಿರಾಕರಿಸಿದೆ.
ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶ ಎನ್.ಎಂ.ರಮೇಶ್, ರಾಸಾಯನಿಕ ಮಿಶ್ರಿತ ನಕಲಿ ಹಾಲು ತಯಾರಿಸಿರುವುದು ಗಂಭೀರ ಪ್ರಕರಣವಾಗಿರುವ ಹಿನ್ನೆಲೆಯಲ್ಲಿ ಎಲ್ಲ 9 ಆರೋಪಿಗಳಿಗೆ ಜಾಮೀನು ನಿರಾಕರಿಸಿದರು. ಸರಕಾರದ ಪರ ಸಹಾಯಕ ಪಬ್ಲಿಕ್ ಪ್ರಾಸಿಕ್ಯೂಟರ್ ವಿ.ರಾಘವೇಂದ್ರ ರಾಯ್ಕರ್ ವಾದ ಮಂಡಿಸಿದರು.
ತಾಲೂಕಿನ ಕುರುಬರಹಳ್ಳಿಯ ಕೆ.ಟಿ.ಶ್ರೀನಿವಾಸ, ಮಾಚೇನಹಳ್ಳಿಯ ಎಂ.ಎಚ್.ಅಶೋಕ, ಕುರುಬರಬೂದಿಹಾಳ್ನ ಕೆ.ಎಸ್.ಉದಯಕುಮಾರ್, ನರಸೀಪುರದ ಸಣ್ಣಸ್ವಾಮಿ, ಚಾಲಕ ನರಸೀಪುರದ ಎನ್.ಎಸ್.ದಯಾನಂದ, ಹಾಸನ ಹಾಲು ಒಕ್ಕೂಟದ ನೌಕರರಾದ ಲೆಕ್ಕ ಸಹಾಯಕ ಮಹಮದ್ ಗೌಸ್, ಆಡಳಿತ ಸಹಾಯಕ ವೆಂಕಟೇಶ್, ವಿಸ್ತರಣಾಧಿಕಾರಿ ದೇವರಾಜ್, ಭದ್ರತಾ ಸಿಬ್ಬಂದಿ ಮದನ್ ಬಂಧಿತ ಆರೋಪಿಗಳು.
ರಾಸಾಯನಿಕ ಬಳಸಿ ನಕಲಿ ಹಾಲು ತಯಾರಿಸಿರುವುದು ಖಚಿತವಾಗಿದ್ದು, ಬಳಸಿರುವ ರಾಸಾಯನಿಕ ಯಾವುದು ಎಂಬುದನ್ನು ಪತ್ತೆ ಮಾಡಲು ಕಲಬೆರಕೆ ಹಾಲನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಕುರುಬರಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಕಾರ್ಯದರ್ಶಿ ಪಾರ್ವತಮ್ಮ ಅವರ ಪುತ್ರ ಕೆ.ಟಿ.ಶ್ರೀನಿವಾಸ್ ಪ್ರಕರಣದ ಪ್ರಮುಖ ಆರೋಪಿ.
ಪ್ರಕರಣದಲ್ಲಿ ಈ ಭಾಗದ ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದರ್ಶಿಗಳು, ಅರಸಿಕೆರೆ ಶಿಥಲೀಕರಣ ಘಟಕದ ಕೆಲವು ಸಿಬ್ಬಂದಿ ಸೇರಿದಂತೆ ಹಲವರು ಶಾಮೀಲಾಗಿದ್ದು, ಅವರನ್ನೂ ಬಂಧಿಸಿ ವಿಚಾರಣೆಗೊಳಪಡಿಸಲು ಗ್ರಾಮಾಂತರ ಠಾಣೆ ಪಿಎಸ್ಐ ಗವಿರಾಜ್ ನೇತೃತ್ವದ ತನಿಖಾ ತಂಡ ಕಾರ್ಯಪ್ರವೃತ್ತವಾಗಿದೆ.
ಗಂಡಂದಿರ ಕಾರುಬಾರು
ರಾಸಾಯನಿಕ ಮಿಶ್ರಿತ ನಕಲಿ ಹಾಲು ತಯಾರಿಕೆ ಜಾಲದ ಕಿಂಗ್ಪಿನ್ ಕೆ.ಟಿ.ಶ್ರೀನಿವಾಸ್ ತನ್ನ ತಾಯಿ ಕಾರ್ಯದರ್ಶಿಯಾಗಿರುವ ಸೊಸೈಟಿಯನ್ನು ಈ ವ್ಯವಹಾರಕ್ಕೆ ಬಳಸಿಕೊಂಡಿದ್ದಾನೆ. ಉಳಿದಂತೆ ಆರೋಪಿ ಎಂ.ಎಚ್.ಅಶೋಕ್ ಮಾಚೇನಹಳ್ಳಿ ಸೊಸೈಟಿ ಕಾರ್ಯದರ್ಶಿ ಭಾಗ್ಯ ಅವರ ಪತಿ. ಸಣ್ಣಸ್ವಾಮಿ ನರಸೀಪುರ ಸೊಸೈಟಿ ಕಾರ್ಯದರ್ಶಿ ಶಕುಂತಲ ಅವರ ಪತಿ. ಉದಯಕುಮಾರ್ ಕುರುಬರಬೂದಿಹಾಳ್ ಸೊಸೈಟಿ ಕಾರ್ಯದರ್ಶಿ. ದಯಾನಂದ ಹಾಲಿನ ಕ್ಯಾನ್ಗಳನ್ನು ಸಾಗಿಸುವ ವಾಹನದ ಚಾಲಕ. ಆರೋಪಿಗಳ ವಿರುದ್ಧ ಕಲಂ 417, 418, 420, 426, 407, 408, 409, 272, 273, 120 (ಬಿ) ಹಾಗೂ ಐಪಿಸಿ ಸೆಕ್ಷನ್ 34 ಮತ್ತು 37ರಡಿ ಪ್ರಕರಣ ದಾಖಲಾಗಿದೆ.
ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶ ಎನ್.ಎಂ.ರಮೇಶ್, ರಾಸಾಯನಿಕ ಮಿಶ್ರಿತ ನಕಲಿ ಹಾಲು ತಯಾರಿಸಿರುವುದು ಗಂಭೀರ ಪ್ರಕರಣವಾಗಿರುವ ಹಿನ್ನೆಲೆಯಲ್ಲಿ ಎಲ್ಲ 9 ಆರೋಪಿಗಳಿಗೆ ಜಾಮೀನು ನಿರಾಕರಿಸಿದರು. ಸರಕಾರದ ಪರ ಸಹಾಯಕ ಪಬ್ಲಿಕ್ ಪ್ರಾಸಿಕ್ಯೂಟರ್ ವಿ.ರಾಘವೇಂದ್ರ ರಾಯ್ಕರ್ ವಾದ ಮಂಡಿಸಿದರು.
ತಾಲೂಕಿನ ಕುರುಬರಹಳ್ಳಿಯ ಕೆ.ಟಿ.ಶ್ರೀನಿವಾಸ, ಮಾಚೇನಹಳ್ಳಿಯ ಎಂ.ಎಚ್.ಅಶೋಕ, ಕುರುಬರಬೂದಿಹಾಳ್ನ ಕೆ.ಎಸ್.ಉದಯಕುಮಾರ್, ನರಸೀಪುರದ ಸಣ್ಣಸ್ವಾಮಿ, ಚಾಲಕ ನರಸೀಪುರದ ಎನ್.ಎಸ್.ದಯಾನಂದ, ಹಾಸನ ಹಾಲು ಒಕ್ಕೂಟದ ನೌಕರರಾದ ಲೆಕ್ಕ ಸಹಾಯಕ ಮಹಮದ್ ಗೌಸ್, ಆಡಳಿತ ಸಹಾಯಕ ವೆಂಕಟೇಶ್, ವಿಸ್ತರಣಾಧಿಕಾರಿ ದೇವರಾಜ್, ಭದ್ರತಾ ಸಿಬ್ಬಂದಿ ಮದನ್ ಬಂಧಿತ ಆರೋಪಿಗಳು.
ರಾಸಾಯನಿಕ ಬಳಸಿ ನಕಲಿ ಹಾಲು ತಯಾರಿಸಿರುವುದು ಖಚಿತವಾಗಿದ್ದು, ಬಳಸಿರುವ ರಾಸಾಯನಿಕ ಯಾವುದು ಎಂಬುದನ್ನು ಪತ್ತೆ ಮಾಡಲು ಕಲಬೆರಕೆ ಹಾಲನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಕುರುಬರಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಕಾರ್ಯದರ್ಶಿ ಪಾರ್ವತಮ್ಮ ಅವರ ಪುತ್ರ ಕೆ.ಟಿ.ಶ್ರೀನಿವಾಸ್ ಪ್ರಕರಣದ ಪ್ರಮುಖ ಆರೋಪಿ.
ಪ್ರಕರಣದಲ್ಲಿ ಈ ಭಾಗದ ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದರ್ಶಿಗಳು, ಅರಸಿಕೆರೆ ಶಿಥಲೀಕರಣ ಘಟಕದ ಕೆಲವು ಸಿಬ್ಬಂದಿ ಸೇರಿದಂತೆ ಹಲವರು ಶಾಮೀಲಾಗಿದ್ದು, ಅವರನ್ನೂ ಬಂಧಿಸಿ ವಿಚಾರಣೆಗೊಳಪಡಿಸಲು ಗ್ರಾಮಾಂತರ ಠಾಣೆ ಪಿಎಸ್ಐ ಗವಿರಾಜ್ ನೇತೃತ್ವದ ತನಿಖಾ ತಂಡ ಕಾರ್ಯಪ್ರವೃತ್ತವಾಗಿದೆ.
ಗಂಡಂದಿರ ಕಾರುಬಾರು
ರಾಸಾಯನಿಕ ಮಿಶ್ರಿತ ನಕಲಿ ಹಾಲು ತಯಾರಿಕೆ ಜಾಲದ ಕಿಂಗ್ಪಿನ್ ಕೆ.ಟಿ.ಶ್ರೀನಿವಾಸ್ ತನ್ನ ತಾಯಿ ಕಾರ್ಯದರ್ಶಿಯಾಗಿರುವ ಸೊಸೈಟಿಯನ್ನು ಈ ವ್ಯವಹಾರಕ್ಕೆ ಬಳಸಿಕೊಂಡಿದ್ದಾನೆ. ಉಳಿದಂತೆ ಆರೋಪಿ ಎಂ.ಎಚ್.ಅಶೋಕ್ ಮಾಚೇನಹಳ್ಳಿ ಸೊಸೈಟಿ ಕಾರ್ಯದರ್ಶಿ ಭಾಗ್ಯ ಅವರ ಪತಿ. ಸಣ್ಣಸ್ವಾಮಿ ನರಸೀಪುರ ಸೊಸೈಟಿ ಕಾರ್ಯದರ್ಶಿ ಶಕುಂತಲ ಅವರ ಪತಿ. ಉದಯಕುಮಾರ್ ಕುರುಬರಬೂದಿಹಾಳ್ ಸೊಸೈಟಿ ಕಾರ್ಯದರ್ಶಿ. ದಯಾನಂದ ಹಾಲಿನ ಕ್ಯಾನ್ಗಳನ್ನು ಸಾಗಿಸುವ ವಾಹನದ ಚಾಲಕ. ಆರೋಪಿಗಳ ವಿರುದ್ಧ ಕಲಂ 417, 418, 420, 426, 407, 408, 409, 272, 273, 120 (ಬಿ) ಹಾಗೂ ಐಪಿಸಿ ಸೆಕ್ಷನ್ 34 ಮತ್ತು 37ರಡಿ ಪ್ರಕರಣ ದಾಖಲಾಗಿದೆ.