ಆ್ಯಪ್ನಗರ

ಅರಳೀಕಟ್ಟೆ ಬಳಿ ಕರಡಿ ದಿಢೀರ್‌ ಪ್ರತ್ಯಕ್ಷ : ಹೌಹಾರಿದ ಜನ

ಪಟ್ಟಣದ ಬೆಂಕಿ ಕಾಲೊನಿ ಬಡಾವಣೆಯ ಅರಳೀಕಟ್ಟೆ ಬಳಿ ಭಾನುವಾರ ತಡರಾತ್ರಿ ಕರಡಿಯೊಂದು ದಿಢೀರ್‌ ಪ್ರತ್ಯಕ್ಷ ವಾಗಿ ನಾಗರಿಕರನ್ನು ಕೆಲ ಕಾಲ ದಂಗುಬಡಿಸಿತು.

Vijaya Karnataka 23 Apr 2019, 5:00 am
ಕಡೂರು : ಪಟ್ಟಣದ ಬೆಂಕಿ ಕಾಲೊನಿ ಬಡಾವಣೆಯ ಅರಳೀಕಟ್ಟೆ ಬಳಿ ಭಾನುವಾರ ತಡರಾತ್ರಿ ಕರಡಿಯೊಂದು ದಿಢೀರ್‌ ಪ್ರತ್ಯಕ್ಷ ವಾಗಿ ನಾಗರಿಕರನ್ನು ಕೆಲ ಕಾಲ ದಂಗುಬಡಿಸಿತು.
Vijaya Karnataka Web CKM-22KDR3


ರಾತ್ರಿ ಸುಮಾರು 11.30ರಲ್ಲಿ ಪಟ್ಟಣಕ್ಕೆ 2 ಕಿ.ಮೀ. ದೂರವಿರುವ ತುರುವನಹಳ್ಳಿ ಕಡೆಯಿಂದ ಬೆಂಕಿ ಕಾಲೊನಿಗೆ ಬಂದು ಸೇರುವ ಕಿರು ರಸ್ತೆಯಲ್ಲಿ ಕರಡಿ ನಡೆದುಕೊಂಡು ಬಂದಿದೆ. ಅರಳೀಕಟ್ಟೆ ಬಳಿ ಇದ್ದ ಅಜರುದ್ದೀನ್‌, ರಿಯಾಜ್‌, ತನ್ವೀರ್‌ ಮತ್ತಿತರ ಸ್ನೇಹಿತರು ನೋಡಿ ಕರಡಿ ಕರಡಿ ಎಂದು ಕೂಗಿದ್ದು, ಜನರು ಹೊರಬಂದು ನೋಡಿ ಹೌಹಾರಿದ ಜನ ತಮ್ಮ ಮನೆಬಾಗಿಲು ಹಾಕಿಕೊಂಡಿದ್ದಾರæ.

ಜನರ ಗದ್ದಲಕ್ಕೆ ಹೆದರಿ ಕರಡಿ ತಕ್ಷ ಣವೇ ಬೆಂಕಿ ಕಾಲೊನಿ ಮಗ್ಗುಲಲ್ಲಿ ನಿರ್ಮಾಣ ಹಂತದಲ್ಲಿರುವ ವಿಜಯಲಕ್ಷ್ಮಿ ಬಡಾವಣೆಯೊಳಗೆ ಓಡಿ ಮರೆಯಾಗಿದೆ.

ಬೆಂಕಿ ಕಾಲೊನಿಗೆ ಅನತಿ ದೂರದಲ್ಲಿ ತುರುವನಹಳ್ಳಿ ಗುಡ್ಡ ಇದೆ. ಇಲ್ಲಿ ಕರಡಿ ಚಿರತೆ ಈಗಲೂ ಓಡಾಡುತ್ತವೆ ಎಂಬುದನ್ನು ನೋಡಿದ ಜನ ಹೇಳುತ್ತಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ