ಆ್ಯಪ್ನಗರ

ಸಮ್ಮಿಶ್ರ ಸರಕಾರ ಸುಭದ್ರ: ರಾಜೇಗೌಡ

ಪ್ರಸಕ್ತ ಸಾಲಿನ ದಾಖಲೆ ಮಳೆಯಿಂದ ಉಂಟಾದ ಹಾನಿಗೆ ಸರಕಾರ ಜಿಲ್ಲೆಗೆ 25 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.

Vijaya Karnataka 27 Dec 2018, 5:00 am
ಶೃಂಗೇರಿ : ಪ್ರಸಕ್ತ ಸಾಲಿನ ದಾಖಲೆ ಮಳೆಯಿಂದ ಉಂಟಾದ ಹಾನಿಗೆ ಸರಕಾರ ಜಿಲ್ಲೆಗೆ 25 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.
Vijaya Karnataka Web CKM-26SRI2


ಪಟ್ಟಣದ ಆದಿಚುಂಚನಗಿರಿ ಸಮುಧಾಯಭವನದಲ್ಲಿ ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷ ರಾಗಿ ನೇಮಕಗೊಂಡ ಹಿನ್ನೆಲೆಯಲ್ಲಿ ಬ್ಲಾಕ್‌ ಕಾಂಗ್ರೆಸ್‌ ವತಿಯಿಂದ ನೀಡಿದ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

ಹೆಚ್ಚಿನ ಅನಾಹುತ ಸಂಭವಿಸಿರುವ ಶೃಂಗೇರಿ ಕ್ಷೇತ್ರಕ್ಕೆ ಶೇ.50 ಅನುದಾನ ಮೀಸಲಿಡಲಾಗಿದೆ. ಸಮ್ಮಿಶ್ರ ಸರಕಾರ ಸುಭದ್ರವಾಗಿದ್ದು, ಅಭಿವೃದ್ಧಿ ಕಾರ್ಯಗಳು ನಿರಂತರವಾಗಿ ನಡೆಯುತ್ತಿದೆ. ಸರಕಾರ ರೈತರ ಸಂಕಷ್ಟ ಬೆನ್ನೆಲುಬಾಗಿ ನಿಂತಿದ್ದು, ಪಿಆರ್‌ಡಿ ಬ್ಯಾಂಕ್‌ ಸಾಲದ ಬಡ್ಡಿ ಮನ್ನಾ ಆಗಲಿದೆ. ಕಾನೂನು ಚೌಕಟ್ಟಿನಲ್ಲಿ ಭ್ರಷ್ಟಾಚಾರ ರಹಿತವಾಗಿ ಕರ್ತವ್ಯ ನಿರ್ವಹಿಸಲು ಅಧಿಕಾರಿಗಳಿಗೆ ಆದೇಶಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ - 169 ತನಿಕೋಡು ಗೇಟ್‌ನಿಂದ ಕೆರೆಕಟ್ಟೆಯವರಿಗೆನ ರಸ್ತೆ ಅಭಿವೃದ್ಧಿ ಬಗ್ಗೆ ಮುಖ್ಯಮಂತ್ರಿ ಗಳೊಂದಿಗೆ ಚರ್ಚಿಸಲಾಗಿದ್ದು, ರಸ್ತೆ ಅಭಿವೃದ್ಧಿ ಆಗಲಿದೆ. ಸರಕಾರದ ಸವಲತ್ತುಗಳು ಅರ್ಹ ಫಲಾನುಭವಿಗಳಿಗೆ ದೊರಕಬೇಕು ಎಂಬುದು ಸರಕಾರದ ಉದ್ದೇಶವಾಗಿದೆ. ಕ್ಷೇತ್ರದ ಅಭಿವೃದ್ಧಿಗೆ 150 ಕೋಟಿ ರೂ. ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಕೆಲವು ಮಂಜೂರು ಆಗಿದ್ದು, ಇನ್ನೂ ಕೆಲವು ಮಂಜೂರಾತಿ ಹಂತದಲ್ಲಿದೆ ಎಂದರು.

ಬ್ಲಾಕ್‌ ಕಾಂಗ್ರೆಸ್‌ ನಟರಾಜ್‌ ಮಾತನಾಡಿ, ಹಲವು ವರ್ಷದ ನಂತರ ನಮಗೆ ಉತ್ತಮ ಶಾಸಕರು ದೊರಕಿದ್ದು, ಅಭಿವೃದ್ಧಿ ಗುರಿಯನ್ನು ಹೊಂದಿದ್ದಾರೆ. ಈಗಾಗಲೇ ಹಲವು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗಿದೆ ಎಂದರು.

ಈ ಸಂದರ್ಭ ಬ್ಲಾಕ್‌ ಕಾಂಗ್ರೆಸ್‌ ಸಮಿತಿಯಿಂದ ಟಿ.ಡಿ.ರಾಜೇಗೌಡ ದಂಪತಿಯನ್ನು ಗೌರವಿಸಲಾಯಿತು. ತಾಪಂ ಸದಸ್ಯ ಕುರಾದಮನೆ ವೆಂಕಟೇಶ್‌, ಕೃಷ್ಣಪ್ಪಗೌಡ, ಕೆ.ಸಿ. ವೆಂಕಟೇಶ್‌, ಸೌಭಾಗ್ಯ, ಶಕೀಲಾ, ನೂತನ್‌, ರಾಜಕುಮಾರ್‌ ಹೆಗ್ಡೆ, ಕೆ.ಎಂ.ರಮೇಶ್‌ ಭಟ್‌ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ