ಮಳೆಗೆ ಕೊಟ್ಟಿಗೆಮನೆ ಕುಸಿದು ಕೂಲಿಕಾರ್ಮಿಕ ಸಾವು
ತಾಲೂಕಿನ ಸೀತಾಪುರ ಕಾವಲಿನಲ್ಲಿ ಗುರುವಾರ ರಾತ್ರಿ ಸುರಿದ ಗುಡುಗು ಸಹಿತ ಮಳೆಗೆ ಕೊಟ್ಟಿಗೆ ಮನೆಯ ಚಾವಣಿ ಕುಸಿದು ಕೃಷಿ ಕೂಲಿಕಾರ್ಮಿಕ ಮೃತಪಟ್ಟಿರುವ ಘಟನೆ ನಡೆದಿದೆ.
Vijaya Karnataka 29 Sep 2018, 5:00 am
ತರೀಕೆರೆ : ತಾಲೂಕಿನ ಸೀತಾಪುರ ಕಾವಲಿನಲ್ಲಿ ಗುರುವಾರ ರಾತ್ರಿ ಸುರಿದ ಗುಡುಗು ಸಹಿತ ಮಳೆಗೆ ಕೊಟ್ಟಿಗೆ ಮನೆಯ ಚಾವಣಿ ಕುಸಿದು ಕೃಷಿ ಕೂಲಿಕಾರ್ಮಿಕ ಮೃತಪಟ್ಟಿರುವ ಘಟನೆ ನಡೆದಿದೆ.
ಮಾಯವನ್(47) ಮೃತಪಟ್ಟವರು. ಗುರುವಾರ ರಾತ್ರಿ ಮನೆಯ ಮುಂದಿನ ಕೆಂಪು ಹೆಂಚಿನ ಕೊಟ್ಟಿಗೆ ಮನೆಯಲ್ಲಿ ಮಾಯವನ್ ಮಲಗಿದ್ದರು. ರಾತ್ರಿ ಸುಮಾರು 12 ಗಂಟೆಯ ಸಮಯದಲ್ಲಿ ಗುಡುಗು ಸಹಿತ ಮಳೆ ಬಂದಿದ್ದು, ಅದೇ ಸಂದರ್ಭಕ್ಕೆ ಕೊಟ್ಟಿಗೆ ಕುಸಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮನೆಯವರು ಬೆಳಗ್ಗೆ ನೋಡಿದಾಗ ಅವಘಡ ಗೊತ್ತಾಗಿದೆ.
ಮಾಯವನ್ ಅವರಿಗೆ ಪತ್ನಿ, ಮೂವರು ಮಕ್ಕಳು ಇದ್ದಾರೆ. ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಹಸೀಲ್ದಾರ್ ಧರ್ಮೋಜಿರಾವ್, ಪಿಎಸ್ಐ ಜಯಂತ್ ಎಲ್.ಗೌಳಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಮಾಯವನ್(47) ಮೃತಪಟ್ಟವರು. ಗುರುವಾರ ರಾತ್ರಿ ಮನೆಯ ಮುಂದಿನ ಕೆಂಪು ಹೆಂಚಿನ ಕೊಟ್ಟಿಗೆ ಮನೆಯಲ್ಲಿ ಮಾಯವನ್ ಮಲಗಿದ್ದರು. ರಾತ್ರಿ ಸುಮಾರು 12 ಗಂಟೆಯ ಸಮಯದಲ್ಲಿ ಗುಡುಗು ಸಹಿತ ಮಳೆ ಬಂದಿದ್ದು, ಅದೇ ಸಂದರ್ಭಕ್ಕೆ ಕೊಟ್ಟಿಗೆ ಕುಸಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮನೆಯವರು ಬೆಳಗ್ಗೆ ನೋಡಿದಾಗ ಅವಘಡ ಗೊತ್ತಾಗಿದೆ.
ಮಾಯವನ್ ಅವರಿಗೆ ಪತ್ನಿ, ಮೂವರು ಮಕ್ಕಳು ಇದ್ದಾರೆ. ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಹಸೀಲ್ದಾರ್ ಧರ್ಮೋಜಿರಾವ್, ಪಿಎಸ್ಐ ಜಯಂತ್ ಎಲ್.ಗೌಳಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.