ಆ್ಯಪ್ನಗರ

ಹಳಿ ಬಳಿ ಮಣ್ಣು ಕುಸಿತ: ರೈಲು ಸಂಚಾರ ಸ್ಥಗಿತ

ಸಮೀಪದ ಹಳಿಯೂರು ಬಳಿ ಭದ್ರಾ ಮೇಲ್ದಂಡೆ ಕಾಮಗಾರಿ ಸ್ಥಳದಲ್ಲಿ ರೈಲ್ವೇ ಹಳಿ ಬಳಿ ಮತ್ತೆ ಭೂಕುಸಿತ ಉಂಟಾದ ಕಾರಣ ಶುಕ್ರವಾರ ತಡ ರಾತ್ರಿ 3 ಗಂಟೆಯಿಂದ ಶನಿವಾರ 9 ಗಂಟೆಯವರೆಗೆ ಆ ಮಾರ್ಗದಲ್ಲಿ ಓಡಾಡುವ ರೈಲುಗಳ ಸಂಚಾರ ಸ್ಥಗಿತಗೊಳಿಸಲಾಯಿತು.

Vijaya Karnataka 23 Sep 2018, 5:00 am
ತರೀಕೆರೆ : ಸಮೀಪದ ಹಳಿಯೂರು ಬಳಿ ಭದ್ರಾ ಮೇಲ್ದಂಡೆ ಕಾಮಗಾರಿ ಸ್ಥಳದಲ್ಲಿ ರೈಲ್ವೇ ಹಳಿ ಬಳಿ ಮತ್ತೆ ಭೂಕುಸಿತ ಉಂಟಾದ ಕಾರಣ ಶುಕ್ರವಾರ ತಡ ರಾತ್ರಿ 3 ಗಂಟೆಯಿಂದ ಶನಿವಾರ 9 ಗಂಟೆಯವರೆಗೆ ಆ ಮಾರ್ಗದಲ್ಲಿ ಓಡಾಡುವ ರೈಲುಗಳ ಸಂಚಾರ ಸ್ಥಗಿತಗೊಳಿಸಲಾಯಿತು.
Vijaya Karnataka Web CKM-22 GNC 2


ಕೆಲವು ದಿನಗಳ ಹಿಂದೆ ರೈಲ್ವೇ ಹಳಿ ಸಮೀಪದಲ್ಲಿ ಭೂಕುಸಿತ ಉಂಟಾಗಿರುವುದುನ್ನು ಕಂಡ ಸಾರ್ವಜನಕರು ಇಲಾಖೆಗೆ ತಿಳಿಸಿದ್ದರಿಂದ ಆಗುವ ಅನಾಹುತ ಸ್ವಲ್ಪದರಲ್ಲಿ ತಪ್ಪಿತ್ತು. ಶುಕ್ರವಾರ ಭೂಕುಸಿತ ಸ್ಥಳದಲ್ಲಿ ರೈಲ್ವೇ ಇಲಾಖೆಯಿಂದ ಕಾಮಗಾರಿ ಕೈಗೊಳ್ಳಲಾಗಿತ್ತು. ಮಣ್ಣು ಕುಸಿತದ ಜಾಗಕ್ಕೆ ಜಲ್ಲಿಕಲ್ಲು ಮತ್ತು ಮಣ್ಣನ್ನು ತಂದು ತುಂಬಿದರೂ ಯಥಾಸ್ಥಿತಿಗೆ ಬಾರದ ಕಾರಣ ರಾತ್ರಿ 3 ಗಂಟೆಗೆ ಸಮಯದಲ್ಲಿ ಸಂಚರಿಸುವ ರೈಲುಗಳಿಗೆ ಹಸಿರು ಬಾವುಟ ತೋರಿಸಲು ಸಾಧ್ಯವಾಗಲಿಲ್ಲ. ರಾತ್ರಿ 3 ಗಂಟೆಗೆ ಬೆಂಗಳೂರಿನಿಂದ ಶಿವಪುರ ನಿಲ್ದಾಣಕ್ಕೆ ಬಂದು ನಿಂತ ತಾಳಗುಪ್ಪ ರೈಲು ಬೆಳಗ್ಗೆ 9 ಗಂಟೆಯವರೆಗೆ ನಿಂತಲ್ಲಿಯೇ ನಿಂತಿದ್ದರಿಂದ ತಮ್ಮ ಗ್ರಾಮಗಳಿಗೆ ತೆರಳಲು ಪ್ರಯಾಣಿಕರು ಪರದಾಡಬೇಕಾಯಿತು. ತಾಳಗುಪ್ಪದಿಂದ ಬೆಂಗಳೂರಿಗೆ ಹೊರಡುವ ಇಂಟರ್‌ಸಿಟಿ ರೈಲು ಶನಿವಾರ ಬೆಳಗ್ಗೆ 7 ಗಂಟೆಯಿಂದ 9 ಗಂಟೆವರೆಗೆ ತರೀಕೆರೆ ರೈಲು ನಿಲ್ದಾಣದಲ್ಲಿ ನಿಲ್ಲಬೇಕಾಯಿತು. ಶಿವಪುರ ರೈಲ್ವೇ ನಿಲ್ದಾಣದ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ ರಸ್ತೆಗೆ ಬಂದ ಕೆಲವು ಪ್ರಯಾಣಿಕರು ನಡು ರಾತ್ರಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ನಿಲ್ಲಿಸಿ ಪ್ರಯಾಣ ಬೆಳೆಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ